/newsfirstlive-kannada/media/post_attachments/wp-content/uploads/2024/11/Rajat-Patidar.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್​ ಬ್ಯಾಟರ್​ ರಜತ್ ಪಾಟಿದಾರ್ ಸದ್ಯ ನಡೆಯುತ್ತಿರೋ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆರ್​​ಸಿಬಿ ಈಗಾಗಲೇ ರಜತ್ ಪಾಟಿದಾರ್ ಅವರನ್ನು ಬರೋಬ್ಬರಿ 11 ಕೋಟಿ ನೀಡಿ ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಇವರನ್ನೇ ಆರ್​​ಸಿಬಿ ಕ್ಯಾಪ್ಟನ್​ ಮಾಡಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಕೊಹ್ಲಿ ಕ್ಯಾಪ್ಟನ್​​ ಆಗದಿದ್ರೆ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರೋ ರಜತ್​ಗೆ ಕ್ಯಾಪ್ಟನ್ಸಿ ನೀಡುವುದು ಉತ್ತಮ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
Rajat establishes his Raj at SMAT. 🔥#PlayBold#SyedMushtaqAliT20pic.twitter.com/JEiR3zy8YZ
— Royal Challengers Bengaluru (@RCBTweets)
Rajat establishes his Raj at SMAT. 🔥#PlayBold#SyedMushtaqAliT20pic.twitter.com/JEiR3zy8YZ
— Royal Challengers Bengaluru (@RCBTweets) November 28, 2024
">November 28, 2024
ಇದರ ಮಧ್ಯೆಯೇ ಮಧ್ಯಪ್ರದೇಶ ತಂಡದ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶದ ಪರ ಮಿಂಚಿದ್ದಾರೆ ರಜತ್​​. ಪಂಜಾಬ್​ ತಂಡದ ವಿರುದ್ಧ ಕೇವಲ 37 ಬಾಲ್​ನಲ್ಲಿ ಬರೋಬ್ಬರಿ 67 ರನ್​ ಚಚ್ಚಿದ್ದಾರೆ. ಈ ಪೈಕಿ 5 ಭರ್ಜರಿ ಸಿಕ್ಸರ್​​ ಮತ್ತು ಬ್ಯಾಕ್​ ಟು ಬ್ಯಾಕ್​ 4 ಫೋರ್​ ಸಿಡಿಸಿದ್ದಾರೆ. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ 167ಕ್ಕೂ ಹೆಚ್ಚಿತ್ತು. ಈ ಮೂಲಕ ತನ್ನನ್ನು ರೀಟೈನ್​ ಮಾಡಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಆರ್​​ಸಿಬಿ ಕ್ಯಾಪ್ಟನ್​ ಆಗೋದು ಪಕ್ಕಾ!
ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ ಕಪ್​ ಗೆದ್ದರೆ ರಜತ್​ ಆರ್​ಸಿಬಿ ಕ್ಯಾಪ್ಟನ್​ ಆಗೋದು ಪಕ್ಕಾ. ಆರ್​ಸಿಬಿ ತಂಡದ ನಾಯಕತ್ವದ ರೇಸ್​ನಲ್ಲಿ ರಜತ್ ಹೆಸರು ಕೇಳಿ ಬರೋದರಲ್ಲಿ ಡೌಟೇ ಇಲ್ಲ.
ಮಧ್ಯಪ್ರದೇಶ್ ಟಿ20 ತಂಡ ಹೀಗಿದೆ!
ರಜತ್ ಪಾಟಿದಾರ್ (ಕ್ಯಾಪ್ಟನ್​), ಅರ್ಪಿತ್ ಗೌಡ್, ಹರ್ಪ್ರೀತ್ ಸಿಂಗ್, ಸುಭ್ರಾಂಶು ಸೇನಾಪತಿ, ವೆಂಕಟೇಶ ಅಯ್ಯರ್, ಆವೇಶ್ ಖಾನ್, ಕುಮಾರ್ ಕಾರ್ತಿಕೇಯ, ಕುಲ್ವಂತ್ ಖೆಜ್ರೋಲಿಯಾ, ರಾಹುಲ್ ಬಾಥಮ್, ಅಭಿಷೇಕ್ ಪಾಠಕ್, ಪಂಕಜ್ ಶರ್ಮಾ, ಶಿವಂ ಶುಕ್ಲಾ, ಕಮಲ್ ತ್ರಿಪಾಠಿ, ತ್ರಿಪುರೇಶ್ ಸಿಂಗ್, ವಿಕಾಸ್ ಶರ್ಮಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ