/newsfirstlive-kannada/media/post_attachments/wp-content/uploads/2025/04/RAJAT-PATIDAR-1-1.jpg)
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು 6 ವಿಕೆಟ್ಗಳಿಂದ ಸೋಲಿಸಿದೆ. ಆ ಮೂಲಕ ಚಿನ್ನಸ್ವಾಮಿಯಲ್ಲಿ ಆಗಿದ್ದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಆರ್ಸಿಬಿ ಬೌಲರ್ಸ್, ಚಮಕ್ ಕೊಟ್ಟರು. ನಿಗಧಿತ ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್, 162 ರನ್ಗಳಿಸಿತ್ತು. ಆರ್ಸಿಬಿ ಪರ ಭವಿ ಮೂರು ವಿಕೆಟ್ ಪಡೆದರು. ಇನ್ನು ಹೇಜಲ್ವುಡ್ 2, ಯಶ್ ದಯಾಳ್, ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು 163 ರನ್ಗಳ ಗುರಿಯನ್ನು ಬೆನ್ನು ಹತ್ತಿದ್ದ ಆರ್ಸಿಬಿ, ಕೇವಲ 4 ವಿಕೆಟ್ ಕಳೆದುಕೊಂಡು 18.3 ಓವರ್ನಲ್ಲಿ ಗುರಿ ಮುಟ್ಟಿತು. ಆರ್ಸಿಬಿ ಪರ ವಿರಾಟ್ ಕೊಹ್ಲಿ 47 ಬಾಲ್ನಲ್ಲಿ 51 ರನ್ಗಳಿಸಿದರು. ಇನ್ನು, ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೃನಾಲ್ ಪಾಂಡ್ಯ 47 ಬಾಲ್ನಲ್ಲಿ 73 ರನ್ ಚಚ್ಚಿದರು.
ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಸಿಡಿಲಬ್ಬರದ ಅರ್ಧಶತಕ.. ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ RCB, ಟಾಪ್ಗೆ ಹೋದ ಬೆಂಗಳೂರು
ಪಂದ್ಯ ಮುಗಿದ ಬೆನ್ನಲ್ಲೇ ಮಾತನಾಡಿದ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟೀದರ್, ಇದು ಒಟ್ಟಾರೆ ತಂಡದ ಪ್ರದರ್ಶನವಾಗಿತ್ತು. ಬೌಲರ್ಗಳು ತಮ್ಮ ಪ್ಲಾನ್ ಇಂಪ್ಲಿಮೆಂಟ್ ಮಾಡಿದ ರೀತಿ ನೋಡಲು ತುಂಬಾ ಚೆನ್ನಾಗಿತ್ತು. ಮೊದಲೇ ಹೇಳಿದಂತೆ ನಾವು ಎಲ್ಲಿಗೆ ಹೋದರೂ ಚೆನ್ನಾಗಿ ಆಡಲು ಬಯಸುತ್ತೇವೆ. ಚೇಸಿಂಗ್ ವಿಕೆಟ್, ಬೌಲಿಂಗ್ ಮತ್ತು ಸ್ಕೋರ್ ಬಗ್ಗೆ ಸಾಕಷ್ಟು ಸ್ಪಷ್ಟತೆ ನೀಡುತ್ತದೆ. ಅದಕ್ಕೆ ತಕ್ಕ ರೀತಿಯಲ್ಲೇ ನಾವು ಪ್ಲಾನ್ ಮಾಡಬಹುದು. ನಿನ್ನೆಯ ಟಾರ್ಗೆಟ್, ಸಾಧಿಸಬಹುದಾದ ಟಾರ್ಗೆಟ್ ಆಗಿತ್ತು. ಇದು ಒಟ್ಟಾರೆ ತಂಡದ ಪ್ರದರ್ಶನವಾಗಿತ್ತು ಅನ್ನೋ ಮೂಲಕ ಗೆಲುವಿನ ಕ್ರೆಡಿಟ್ ಇಡೀ ತಂಡಕ್ಕೆ ನೀಡಿದರು. ಬೌಲರ್ಗಳು ಉತ್ತಮ ಕೆಲಸ ಮಾಡಿದರು. ಬೌಲರ್ಗಳಿಗೆ ಕ್ರೆಡಿಟ್ ಸೇರಬೇಕು. ಚೇಸಿಂಗ್ ಬಗ್ಗೆ ಸ್ಪಷ್ಟತೆ ಇತ್ತು. ಆರ್ಸಿಬಿ ಮುನ್ನಡೆಸುತ್ತಿರೋದು ಅದ್ಭುತವೆನಿಸುತ್ತದೆ. ಅನೇಕರು ಉತ್ತಮ ಆಟಗಾರರಿದ್ದಾರೆ. ಅವರಿಂದ ನನಗೆ ಕಲಿಯಲು ಒಳ್ಳೆಯ ಅವಕಾಶ ಎಂದರು.
ಇದನ್ನೂ ಓದಿ:ಕಾಂತಾರ ಸ್ಟೈಲ್ನಲ್ಲೇ KL ರಾಹುಲ್ರ ಕಾಲೆಳೆದ ಕೊಹ್ಲಿ.. ಹೃದಯ ಗೆದ್ದ ಇಬ್ಬರ ಆತ್ಮೀಯತೆ.. VIDEO
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್