ರಜತ್​ ಹೆಗಲಿಗೆ ಆರ್​​​ಸಿಬಿ ನಾಯಕತ್ವ; ಕ್ಯಾಪ್ಟನ್ಸಿ ಹೊಣೆ ಹೊರಲು ಪಾಟಿದಾರ್​ ಸಿದ್ಧ

author-image
Ganesh Nachikethu
Updated On
ರಜತ್​ ಹೆಗಲಿಗೆ ಆರ್​​​ಸಿಬಿ ನಾಯಕತ್ವ; ಕ್ಯಾಪ್ಟನ್ಸಿ ಹೊಣೆ ಹೊರಲು ಪಾಟಿದಾರ್​ ಸಿದ್ಧ
Advertisment
  • ಸೈಯದ್ ಮುಷ್ತಾಕ್ ಅಲಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಭರ್ಜರಿ ಗೆಲುವು
  • ರಜತ್ ಪಾಟಿದಾರ್​ ನಾಯಕತ್ವದಲ್ಲಿ ಮಧ್ಯಪ್ರದೇಶ ಸೆಮಿ ಫೈನಲ್​ಗೆ ಎಂಟ್ರಿ!
  • 2025ರ ಐಪಿಎಲ್​​ನಲ್ಲಿ ರಜತ್​ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಸಾಧ್ಯತೆ

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮುನ್ನಡೆಸುವುದು ಯಾರು? ಅನ್ನೋ ಪ್ರಶ್ನೆ ಕೇಳಿ ಬಂದಿದೆ. ಆರ್​​ಸಿಬಿ ಕ್ಯಾಪ್ಟನ್​​ ರೇಸ್​ನಲ್ಲಿ ಹಲವು ಯುವ ಆಟಗಾರರ ಹೆಸರಿದೆ. ಈ ಸಾಲಿನಲ್ಲಿ ನಿಲ್ಲೋ ಮೊದಲ ಹೆಸರು ರಜತ್‌ ಪಟಿದಾರ್.

ರಜತ್​ ಪಾಟಿದಾರ್​​ ಆರ್​​​ಸಿಬಿ ತಂಡದ ಸ್ಟಾರ್​ ಬ್ಯಾಟರ್​​. ಇವರು ದೇಶೀಯ ಟೂರ್ನಿಯಲ್ಲಿ ಮಧ್ಯಪ್ರದೇಶ ಪರ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಪಾಟಿದಾರ್​ ನಾಯಕತ್ವದಲ್ಲಿ ಮಧ್ಯಪ್ರದೇಶ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದೆ.

ಮಧ್ಯಪ್ರದೇಶಕ್ಕೆ ಭರ್ಜರಿ ಗೆಲುವು

ಸೈಯದ್ ಮುಷ್ತಾಕ್ ಅಲಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 173 ರನ್‌ ಕಲೆ ಹಾಕಿತು. ಈ ಗುರಿ ಬೆನ್ನತ್ತಿದ ಮಧ್ಯಪ್ರದೇಶ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇನ್ನು, ಮಧ್ಯಪ್ರದೇಶದ ಪರ ವೆಂಕಟೇಶ್‌ ಅಯ್ಯರ್‌ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 24 ರನ್‌ ಸಿಡಿಸಿದರು. ತಂಡದ ಕ್ಯಾಪ್ಟನ್​ ರಜತ್‌ ಪಟಿದಾರ್‌ 18 ಎಸೆತಗಳಲ್ಲಿ 28 ರನ್‌ ಬಾರಿಸಿದರು.

ರಜತ್​​ಗೆ ಆರ್​​ಸಿಬಿ ಕ್ಯಾಪ್ಟನ್ಸಿ

ಮೆಗಾ ಹರಾಜಿಗೆ ಮುನ್ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕೇವಲ ಮೂರು ಆಟಗಾರರನ್ನು ಉಳಿಸಿಕೊಂಡಿತ್ತು. ಅದರಲ್ಲಿ ಮೊದಲ ಆಯ್ಕೆಯ ಆಟಗಾರನಾಗಿ ವಿರಾಟ್‌ ಕೊಹ್ಲಿ ಸ್ಥಾನ ಪಡೆದರೆ, ರಜತ್‌ ಪಟಿದಾರ್‌ 2ನೇ ಆಯ್ಕೆಯಾಗಿದ್ರು. ಈ ಬಾರಿ ಐಪಿಎಲ್‌ನಲ್ಲಿ ಇವರು ಆರ್‌ಸಿಬಿ ಪರ ಕಣಕ್ಕೆ ಇಳಿಯಲಿದ್ದಾರೆ. ರಜತ್​ ಹೆಗಲಿಗೆ ನಾಯಕತ್ವದ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಟೀಮ್​​ ಇಂಡಿಯಾದ ಸ್ಟಾರ್​ ಮನೀಶ್​ ಪಾಂಡೆಗೆ ಬಿಗ್​ ಶಾಕ್​​; ತಂಡದಿಂದಲೇ ಔಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment