ತನ್ನ ತಂದೆ ಸಂಘಿ ಅಲ್ಲ ಎಂದಿದ್ದ ನಟ ರಜನಿಕಾಂತ್ ಮಗಳು
ಮಗಳು ಐಶ್ವರ್ಯಾ ಹೇಳಿಕೆ ಬಗ್ಗೆ ರಜನಿಕಾಂತ್ ಹೇಳಿದ್ದೇನು..?
ನನ್ನ ಮಗಳು ಸಂಘಿ ಪದವನ್ನು ಕೆಟ್ಟ ಅರ್ಥದಲ್ಲಿ ಬಳಸಿಲ್ಲ ಎಂದ್ರು!
ಚೆನ್ನೈ: ನನ್ನ ತಂದೆ ಸಂಘಿ ಅಲ್ಲ ಎಂಬ ಮಗಳ ಹೇಳಿಕೆಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಸಮರ್ಥಿಸಿಕೊಂಡಿದ್ದಾರೆ. ಈ ಸಂಬಂಧ ಚೆನ್ನೈ ಇಂಟರ್ ನ್ಯಾಷನಲ್ ಏರ್ಪೋರ್ಟ್ನಲ್ಲಿ ಮಾತಾಡಿದ ನಟ ರಜನಿಕಾಂತ್, ನನ್ನ ಮಗಳು ಹೇಳಿದ್ದರಲ್ಲಿ ತಪ್ಪೇನಿದೆ? ನಾನು ಸಂಘಿ ಅಲ್ಲ. ನನ್ನ ಮಗಳು ಸಂಘಿ ಪದವನ್ನು ಕೆಟ್ಟ ಅರ್ಥದಲ್ಲಿ ಬಳಸಿಲ್ಲ ಎಂದರು.
ಇತ್ತೀಚೆಗೆ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಹ್ವಾನದ ಮೇರೆಗೆ ಸೂಪರ್ ಸ್ಟಾರ್ ರಜನಿಕಾಂತ್ ಭಾಗಿಯಾಗಿದ್ದರು. ಅಯೋಧ್ಯೆ ಭೇಟಿ ನೀಡಿದ ಬಳಿಕ ಮಾತಾಡಿದ ನಟ ರಜನಿಕಾಂತ್, 500 ವರ್ಷಗಳ ಹಿಂದಿನ ಸಮಸ್ಯೆಗೆ ಸುಪ್ರೀಂಕೋರ್ಟ್ ಪರಿಹಾರ ಒದಗಿಸಿದೆ ಎಂದಿದ್ದರು. ರಜನಿಕಾಂತ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸ್ಟಾರ್ ಡೈರೆಕ್ಟರ್ ಪಾ ರಂಜಿತ್, ರಾಮ ಮಂದಿರಕ್ಕೆ ಹೋಗುವುದು ಅವರ ವೈಯಕ್ತಿಕ ಆಯ್ಕೆ. ಅವರು 500 ವರ್ಷಗಳ ಹಿಂದಿನ ಸಮಸ್ಯೆ ಎಂದು ಹೇಳಿದ್ದರ ಹಿಂದಿನ ರಾಜಕೀಯವನ್ನು ಪ್ರಶ್ನೆ ಮಾಡಬೇಕಿದೆ’ ಎಂದಿದ್ದರು.
ಇನ್ನು, ಪಾ ರಂಜಿತ್ ಹೇಳಿಕೆ ಬೆನ್ನಲ್ಲೇ ಹಲವರು ರಜನಿಕಾಂತ್ ವಿರುದ್ಧ ತಿರುಗಿ ಬಿದ್ದಿದ್ದರು. ಜತೆಗೆ ರಜನಿಕಾಂತ್ ಅವರನ್ನು ಆರ್ಎಸ್ಎಸ್ ಏಜೆಂಟ್, ಸುಪ್ತ ಸಂಘಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದರು. ಈಗ ಟೀಕಿಸಿದವರಿಗೆ ರಜನಿಕಾಂತ್ ಮಗಳು ಖಡಕ್ ಉತ್ತರ ನೀಡಿದ್ದರು.
ಏನಿದು ವಿವಾದ..?
ತಾನು ನಿರ್ದೇಶಿಸಿದ ಲಾಲ್ ಸಲಾಮ್ ಸಿನಿಮಾ ಆಡಿಯೋ ಲಾಂಚ್ನಲ್ಲಿ ಮಾತಾಡಿದ ಐಶ್ವರ್ಯಾ ರಜನಿಕಾಂತ್, ನನ್ನ ತಂದೆಯನ್ನು ಕೆಲವರು ‘ಸಂಘಿ’ ಎಂದು ಕರೆಯುತ್ತಿದ್ದಾರೆ. ಈ ಮಾತುಗಳನ್ನು ಕೇಳಿದಾಗ ನನಗೆ ಕೋಪ ಬರುತ್ತದೆ. ನನ್ನ ತಂದೆ ಸಂಘಿ ಅಲ್ಲ, ಅವರಿಗೂ ಬಿಜೆಪಿ ಸಿದ್ಧಾಂತಕ್ಕೂ ಯಾವುದೇ ಸಂಬಂಧ ಇಲ್ಲ. ಒಂದು ವೇಳೆ ನನ್ನ ತಂದೆ ಸಂಘಿ ಆಗಿದ್ದರೆ ಲಾಲ್ ಸಲಾಮ್ ಸಿನಿಮಾದಲ್ಲಿ ನಟಿಸುತ್ತಲೇ ಇರಲಿಲ್ಲ. ಒಬ್ಬ ಸಂಘಿ ಈ ಸಿನಿಮಾದಲ್ಲಿ ನಟಿಸುವುದಿಲ್ಲ. ನಾನು ಹೀಗೆ ಹೇಳಲು ಕಾರಣವಿದ್ದು, ಇದು ನಿಮಗೆ ಸಿನಿಮಾ ಮಾಡಿದಾಗ ಗೊತ್ತಾಗಲಿದೆ. ಲಾಲ್ ಸಲಾಮ್ ಸಿನಿಮಾ ಮಾಡಲು ಧೈರ್ಯ ಬೇಕು, ಅದು ನನ್ನ ತಂದೆಗೆ ಮಾತ್ರ ಇರೋದು ಎಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತನ್ನ ತಂದೆ ಸಂಘಿ ಅಲ್ಲ ಎಂದಿದ್ದ ನಟ ರಜನಿಕಾಂತ್ ಮಗಳು
ಮಗಳು ಐಶ್ವರ್ಯಾ ಹೇಳಿಕೆ ಬಗ್ಗೆ ರಜನಿಕಾಂತ್ ಹೇಳಿದ್ದೇನು..?
ನನ್ನ ಮಗಳು ಸಂಘಿ ಪದವನ್ನು ಕೆಟ್ಟ ಅರ್ಥದಲ್ಲಿ ಬಳಸಿಲ್ಲ ಎಂದ್ರು!
ಚೆನ್ನೈ: ನನ್ನ ತಂದೆ ಸಂಘಿ ಅಲ್ಲ ಎಂಬ ಮಗಳ ಹೇಳಿಕೆಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಸಮರ್ಥಿಸಿಕೊಂಡಿದ್ದಾರೆ. ಈ ಸಂಬಂಧ ಚೆನ್ನೈ ಇಂಟರ್ ನ್ಯಾಷನಲ್ ಏರ್ಪೋರ್ಟ್ನಲ್ಲಿ ಮಾತಾಡಿದ ನಟ ರಜನಿಕಾಂತ್, ನನ್ನ ಮಗಳು ಹೇಳಿದ್ದರಲ್ಲಿ ತಪ್ಪೇನಿದೆ? ನಾನು ಸಂಘಿ ಅಲ್ಲ. ನನ್ನ ಮಗಳು ಸಂಘಿ ಪದವನ್ನು ಕೆಟ್ಟ ಅರ್ಥದಲ್ಲಿ ಬಳಸಿಲ್ಲ ಎಂದರು.
ಇತ್ತೀಚೆಗೆ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಹ್ವಾನದ ಮೇರೆಗೆ ಸೂಪರ್ ಸ್ಟಾರ್ ರಜನಿಕಾಂತ್ ಭಾಗಿಯಾಗಿದ್ದರು. ಅಯೋಧ್ಯೆ ಭೇಟಿ ನೀಡಿದ ಬಳಿಕ ಮಾತಾಡಿದ ನಟ ರಜನಿಕಾಂತ್, 500 ವರ್ಷಗಳ ಹಿಂದಿನ ಸಮಸ್ಯೆಗೆ ಸುಪ್ರೀಂಕೋರ್ಟ್ ಪರಿಹಾರ ಒದಗಿಸಿದೆ ಎಂದಿದ್ದರು. ರಜನಿಕಾಂತ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸ್ಟಾರ್ ಡೈರೆಕ್ಟರ್ ಪಾ ರಂಜಿತ್, ರಾಮ ಮಂದಿರಕ್ಕೆ ಹೋಗುವುದು ಅವರ ವೈಯಕ್ತಿಕ ಆಯ್ಕೆ. ಅವರು 500 ವರ್ಷಗಳ ಹಿಂದಿನ ಸಮಸ್ಯೆ ಎಂದು ಹೇಳಿದ್ದರ ಹಿಂದಿನ ರಾಜಕೀಯವನ್ನು ಪ್ರಶ್ನೆ ಮಾಡಬೇಕಿದೆ’ ಎಂದಿದ್ದರು.
ಇನ್ನು, ಪಾ ರಂಜಿತ್ ಹೇಳಿಕೆ ಬೆನ್ನಲ್ಲೇ ಹಲವರು ರಜನಿಕಾಂತ್ ವಿರುದ್ಧ ತಿರುಗಿ ಬಿದ್ದಿದ್ದರು. ಜತೆಗೆ ರಜನಿಕಾಂತ್ ಅವರನ್ನು ಆರ್ಎಸ್ಎಸ್ ಏಜೆಂಟ್, ಸುಪ್ತ ಸಂಘಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದರು. ಈಗ ಟೀಕಿಸಿದವರಿಗೆ ರಜನಿಕಾಂತ್ ಮಗಳು ಖಡಕ್ ಉತ್ತರ ನೀಡಿದ್ದರು.
ಏನಿದು ವಿವಾದ..?
ತಾನು ನಿರ್ದೇಶಿಸಿದ ಲಾಲ್ ಸಲಾಮ್ ಸಿನಿಮಾ ಆಡಿಯೋ ಲಾಂಚ್ನಲ್ಲಿ ಮಾತಾಡಿದ ಐಶ್ವರ್ಯಾ ರಜನಿಕಾಂತ್, ನನ್ನ ತಂದೆಯನ್ನು ಕೆಲವರು ‘ಸಂಘಿ’ ಎಂದು ಕರೆಯುತ್ತಿದ್ದಾರೆ. ಈ ಮಾತುಗಳನ್ನು ಕೇಳಿದಾಗ ನನಗೆ ಕೋಪ ಬರುತ್ತದೆ. ನನ್ನ ತಂದೆ ಸಂಘಿ ಅಲ್ಲ, ಅವರಿಗೂ ಬಿಜೆಪಿ ಸಿದ್ಧಾಂತಕ್ಕೂ ಯಾವುದೇ ಸಂಬಂಧ ಇಲ್ಲ. ಒಂದು ವೇಳೆ ನನ್ನ ತಂದೆ ಸಂಘಿ ಆಗಿದ್ದರೆ ಲಾಲ್ ಸಲಾಮ್ ಸಿನಿಮಾದಲ್ಲಿ ನಟಿಸುತ್ತಲೇ ಇರಲಿಲ್ಲ. ಒಬ್ಬ ಸಂಘಿ ಈ ಸಿನಿಮಾದಲ್ಲಿ ನಟಿಸುವುದಿಲ್ಲ. ನಾನು ಹೀಗೆ ಹೇಳಲು ಕಾರಣವಿದ್ದು, ಇದು ನಿಮಗೆ ಸಿನಿಮಾ ಮಾಡಿದಾಗ ಗೊತ್ತಾಗಲಿದೆ. ಲಾಲ್ ಸಲಾಮ್ ಸಿನಿಮಾ ಮಾಡಲು ಧೈರ್ಯ ಬೇಕು, ಅದು ನನ್ನ ತಂದೆಗೆ ಮಾತ್ರ ಇರೋದು ಎಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ