59 ವಯಸ್ಸು.. ಕುದುರೆಯ ಜೊತೆ ಓಡುವ ಸ್ಪರ್ಧೆಗೆ ಇಳಿದ ರಾಮದೇವ್​ ಬಾಬಾ.. ಕಮೆಂಟ್​ ಮಾಡಿದ್ದ ಅಮೆರಿಕಾ ಉದ್ಯಮಿ ಬ್ಲಾಕ್ ಆಗಿದ್ದೇಕೆ?

author-image
Gopal Kulkarni
Updated On
59 ವಯಸ್ಸು.. ಕುದುರೆಯ ಜೊತೆ ಓಡುವ ಸ್ಪರ್ಧೆಗೆ ಇಳಿದ ರಾಮದೇವ್​ ಬಾಬಾ.. ಕಮೆಂಟ್​ ಮಾಡಿದ್ದ ಅಮೆರಿಕಾ ಉದ್ಯಮಿ ಬ್ಲಾಕ್ ಆಗಿದ್ದೇಕೆ?
Advertisment
  • ಕುದುರೆಯ ಓಟದ ಸಮಕ್ಕೆ ಓಡಿದ 59ರ ಹರೆಯದ ರಾಮದೇವ್​ ಬಾಬಾ
  • ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿ ತಮ್ಮ ಉತ್ಪನ್ನ ಖರೀದಿಗೆ ಮನವಿ
  • ಭಾರತದ ವಾಯು ಗುಣಮಟ್ಟದ ಬಗ್ಗೆ ಪ್ರಶ್ನಿಸಿದ ಬರ್ಯಾನ್ ಜಾನ್ಸನ್​ ಬ್ಲಾಕ್​

ಯೋಗ ಗುರು, ಪಜಂಲಜಿಯ ಸಂಸ್ಥಾಪಕ ರಾಮದೇವ್ ಬಾಬಾ ಯುಎಸ್​ನ ಕೋಟ್ಯಾಧೀಪತಿ ಬರ್ಯಾನ್ ಜಾನ್ಸನ್​ ಅವರನ್ನ ಎಕ್ಸ್​ ಖಾತೆಯಲ್ಲಿ ಬ್ಲಾಕ್ ಮಾಡಿದ್ದಾರೆ. ಉದ್ಯಮಿ ವಯಸ್ಸು ಹಿಮ್ಮುಖ ಚಲನೆಯ ಬಗ್ಗೆ ಹಾಗೂ ಭಾರತದಲ್ಲಿ ವಾಯುಮಾಲಿನ್ಯದ ಬಗ್ಗೆ ಮಾತನಾಡಿದ್ದಕ್ಕೆ ಬ್ಲಾಕ್ ಮಾಡಲಾಗಿದೆ. ಈ ಒಂದು ವಾಗ್ವಾದಗಳು ಶುರುವಾಗಿದ್ದು ರಾಮದೇವ್​ ಬಾಬಾ ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿದ ಒಂದು ವಿಡಿಯೋದಿಂದಾಗಿ. ರಾಮದೇವ ಬಾಬಾ ಒಂದು ಕಡೆ ಕುದುರೆ ಓಡುತ್ತಿದ್ದರೆ ಮತ್ತೊಂದು ಕಡೆ ಅದರ ಜೊತೆಗೆ ಸ್ಪರ್ಧೆಗೆ ಬಿದ್ದವರಂತೆ ತಾವು ಕೂಡ ಅದಕ್ಕೆ ಸಮನಾಗಿ ಓಡುತ್ತಿದ್ದರು. ಈ ಒಂದು ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ರಾಮದೇವ್ ಬಾಬಾ ಪೋಸ್ಟ್ ಮಾಡಿಕೊಂಡಿದ್ದಾರೆ.


">February 18, 2025

ಅದು ಮಾತ್ರವಲ್ಲಿ ಸ್ಟಾಂಗ್ ಇಮ್ಯುನಿಟಿ ಹಾಗೂ ಆ್ಯಂಟಿ ಏಜಿಂಗ್​ ಮತ್ತು ಶಕ್ತಿ ಬೇಕಾದಲ್ಲಿ ಸ್ವರ್ಣ ಶೀಲಾಜಿತ್​ ಇಮ್ಮುನುಗ್ರಿತ್ ಗೋಲ್ಡ್​ನ್ನು ಸೇವಿಸಿ ಎಂದು ಬರೆದುಕೊಂಡಿದ್ದರು. ಈ ಎರಡು ಉತ್ಪನ್ನಗಳು ಪತಂಜಲಿ ಆಯುರ್ವೇದ ಸಂಸ್ಥೆಯಿಂದಲೇ ಉತ್ಪಾದನೆಯಾಗುತ್ತವೆ. ಇದನ್ನು ರಾಮದೇವ ಬಾಬಾ ಹಾಗೂ ಬಾಲಕೃಷ್ಣ ಸೇರಿ 2006ರಲ್ಲಿ ಆರಂಭಿಸಿದರು.

ಇದನ್ನೂ ಓದಿ:ನಾಗಪುರವನ್ನೇ ಕಾಶ್ಮೀರವನ್ನಾಗಿ ಬದಲಾಯಿಸಿದ ದಂಪತಿ; ಕೇಸರಿ ಬೆಳೆದು ವರ್ಷಕ್ಕೆ ಗಳಿಸಿದ್ದು ಎಷ್ಟು ಲಕ್ಷ?

ಈ ಒಂದು ಪೋಸ್ಟ್​ಗೆ ಜಾನ್ಸನ್​ ಪ್ರತಿಕ್ರಿಯಿಸಿದ್ದರು. ವಯಸ್ಸು ಹಿಮ್ಮುಖ ಚಲನೆಯ ವಿಚಾರದಲ್ಲಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿರುವ ಜಾನ್ಸನ್​ ರಾಮದೇವ್​ ಬಾಬಾರನ್ನು ಪ್ರಶ್ನಿಸಿದ್ದಾರೆ. ಹರಿದ್ವಾರದಲ್ಲಿ ಕಳಪೆ ವಾಯುಮಾಲಿನ್ಯವಿದೆ. ಈ ರಾಜ್ಯದಲ್ಲಿ ಉಸಿರಾಡುವವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಹರಿದ್ವಾರದಲ್ಲಿ ಸದ್ಯದ ವಾಯುವಿನ ಗುಣಮಟ್ಟ ಸದ್ಯ 36 µg/m³ ರಷ್ಟು ಇದೆ ಇದು 1.6 ಸಿಗರೇಟ್​ಗೆ ಸಮ ಎಂದು ಜಾನ್ಸನ್ ಪ್ರತಿಕ್ರಿಯಿಸಿದ್ದಾರೆ.


">February 19, 2025

ಇದರ ಜೊತೆಗೆ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಶೇಕಡಾ 40 ರಿಂದ 50 ರಷ್ಟು ಹೆಚ್ಚುತ್ತಿವೆ. ಲಂಗ್ಸ್ ಕ್ಯಾನ್ಸರ್​ ಅಪಾಯ ಮೂರು ಪಟ್ಟು ಹೆಚ್ಚುತ್ತಿದೆ ಸಿಒಪಿಡಿ ಮತ್ತು ಅಕಾಲಿಕ ಮರಣಗಳು ಸಂಭವಿಸುತ್ತಿವೆ. ಪ್ರತಿಯೊಬ್ಬರ ಆಯಸ್ಸು 5 ರಿಂದ 7 ವರ್ಷದಷ್ಟು ಕಡಿಮೆಯಾಗುತ್ತಿದೆ ಎಂದು ಬರೆದಿದ್ದರು
ಜಾನ್ಸನ್ ಪ್ರತಿಕ್ರಿಯಿಸಿದ ನಿಮಿಷದ ಬೆನ್ನಲ್ಲೇ ರಾಮದೇವ್ ಬಾಬಾ ಎಕ್ಸ್​ ಖಾತೆ ಅವರನ್ನು ಬ್ಲಾಕ್ ಮಾಡಿದೆ. ಅದರ ಸ್ಕ್ರೀನ್ ಶಾಟ್​​ನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ ಜಾನ್ಸ್​ನ್ ತಾವು ಕೇಳಿದ ಪ್ರಶ್ನೆಗಳನ್ನು ಅಲ್ಲಿ ಉಲ್ಲೇಖಿಸಿ ನನ್ನನ್ನು ಬ್ಲಾಕ್ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಚೀನಾ-ಭಾರತ ಅಲ್ಲವೇ ಅಲ್ಲ! ಜಗತ್ತಿನಲ್ಲೇ ಅತ್ಯಂತ ಚಿಕ್ಕ ರಾಷ್ಟ್ರಗೀತೆ ಹೊಂದಿರುವ ರಾಷ್ಟ್ರ ಯಾವುದು?

ಜಾನ್ಸನ್ ಇದೇ ಮೊದಲ ಬಾರಿ ಭಾರತದ ವಾಯುಮಾಲಿನ್ಯದ ಬಗ್ಗೆ ಪ್ರಶ್ನಿಸಿಲ್ಲ. ನಿಖಿಲ್ ಕಾಮತ್​ ಪೊಡ್​ಕಾಸ್ಟ್​ ಮಿಡ್​ವೇನಲ್ಲಿ ಮಾತನಾಡಿದಾಗ ಅವರು ಮುಂಬೈ ಹಾಗೂ ಬೆಂಗಳೂರಿನ ಶುದ್ಧ ಗಾಳಿಯ ಗುಣಮಟ್ಟದ ಬಗ್ಗೆ ಮಾತನಾಡಿದ್ದರು. ಈಗ ಯೋಗ ಗುರು ರಾಮದೇವ್ ಬಾಬಾಗೆ ಈ ಪ್ರಶ್ನೆ ಮಾಡಿದ್ದಕ್ಕೆ ರಾಮದೇವ್​ ಬಾಬಾ ಅವರನ್ನು ಎಕ್ಸ್ ಖಾತೆಯಲ್ಲಿ ಬ್ಲಾಕ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment