newsfirstkannada.com

ಡಿವೋರ್ಸ್​ ಬಳಿಕ ನಿವೇದಿತಾಗೆ ಕೋಟಿ ಕೋಟಿ ದುಡ್ಡು? ಈ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

Share :

Published June 10, 2024 at 4:28pm

Update June 10, 2024 at 5:10pm

    4 ವರ್ಷಗಳ ಹಿಂದೆ ಮದುವೆ ಆಗಿದ್ದ ನಿವೇದಿತಾ, ಚಂದನ್​​..!

    ಚಂದನ್​​, ನಿವೇದಿತಾ ಡಿವೋರ್ಸ್​ಗೆ ಅಸಲಿ ಕಾರಣವೇನು?

    ನಿಜವಾಗಲೂ ನಿವೇದಿತಾ ಗೌಡಗೆ ಜೀವನಾಂಶ ನೀಡಿದ್ರಾ ಚಂದನ್​?

ಸುಮಾರು 4 ವರ್ಷಗಳ ಹಿಂದೆ ಬಿಗ್​ಬಾಸ್​ ಖ್ಯಾತಿಯ ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿದ್ರು. ಮದುವೆಗೆ ಪುನೀತ್ ರಾಜ್‌ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಜೋಡಿಗೆ ಶುಭ ಹಾರೈಸಿದ್ರು. ಈ ಜೋಡಿಯನ್ನು ಎಲ್ಲರೂ ಬಹಳ ಮೆಚ್ಚಿಕೊಂಡಿದ್ರು. ಆದರೀಗ ಇಬ್ಬರು ಡಿವೋರ್ಸ್​ ಮಾಡಿಕೊಂಡು ಎಲ್ಲರಿಗೂ ಶಾಕ್​ ನೀಡಿದ್ದಾರೆ.

ವಿಚ್ಛೇದನದ ಬಳಿಕ ನಿವೇದಿತಾ ಗೌಡ ಚಂದನ್​ ಅವರಿಂದ ಕೋಟ್ಯಾಂತರ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎಂಬ ವದಂತಿಗಳು ಕೇಳಿ ಬಂದವು. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಚಂದನ್​​ ಗೌಡ, ಪತಿಯಿಂದ ಪತ್ನಿ ಜೀವನಾಂಶ ಕೇಳುವುದು ಸಾಮಾನ್ಯ. ಆದರೆ, ನಿವೇದಿತಾ ಇಂಡಿಪೆಂಡೆಂಟ್​​​ ವುಮೆನ್​​. ಅವರು ತಮ್ಮ ಕರಿಯರ್​ನಲ್ಲಿ ಬ್ಯುಸಿ ಆಗಿ ದುಡಿಯುತ್ತಿದ್ದಾರೆ. ನಾನು ಯಾವುದೇ ಜೀವನಾಂಶ ನೀಡಿಲ್ಲ, ಅವರು ಯಾವುದೇ ರೀತಿಯ ಡಿಮ್ಯಾಂಡ್​​ ಇಟ್ಟಿಲ್ಲ ಎಂದರು.

ನಾವು ಇಬ್ಬರೂ ವೃತ್ತಿಜೀವನದಲ್ಲಿ ಬಿಜಿಯಾಗಿದ್ದೇವೆ. ಯಾರೂ ಜೀವನಾಂಶ ಕೇಳಿಲ್ಲ. ತುಂಬಾ ಗೌರವಯುತವಾಗಿ ದಾಂಪತ್ಯ ಜೀವನದಿಂದ ಇಬ್ಬರೂ ಹೊರಗೆ ಬಂದಿದ್ದೇವೆ. ಇಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ತುಂಬಾ ಗೌರವ ಇದೆ ಎಂದರು.

ಡಿವೋರ್ಸ್​ ಬಳಿಕ ನಿವೇದಿತಾಗೆ ಕೋಟಿ ಕೋಟಿ ದುಡ್ಡು? ಈ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

https://newsfirstlive.com/wp-content/uploads/2024/06/chandan-shetty6.jpg

    4 ವರ್ಷಗಳ ಹಿಂದೆ ಮದುವೆ ಆಗಿದ್ದ ನಿವೇದಿತಾ, ಚಂದನ್​​..!

    ಚಂದನ್​​, ನಿವೇದಿತಾ ಡಿವೋರ್ಸ್​ಗೆ ಅಸಲಿ ಕಾರಣವೇನು?

    ನಿಜವಾಗಲೂ ನಿವೇದಿತಾ ಗೌಡಗೆ ಜೀವನಾಂಶ ನೀಡಿದ್ರಾ ಚಂದನ್​?

ಸುಮಾರು 4 ವರ್ಷಗಳ ಹಿಂದೆ ಬಿಗ್​ಬಾಸ್​ ಖ್ಯಾತಿಯ ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿದ್ರು. ಮದುವೆಗೆ ಪುನೀತ್ ರಾಜ್‌ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಜೋಡಿಗೆ ಶುಭ ಹಾರೈಸಿದ್ರು. ಈ ಜೋಡಿಯನ್ನು ಎಲ್ಲರೂ ಬಹಳ ಮೆಚ್ಚಿಕೊಂಡಿದ್ರು. ಆದರೀಗ ಇಬ್ಬರು ಡಿವೋರ್ಸ್​ ಮಾಡಿಕೊಂಡು ಎಲ್ಲರಿಗೂ ಶಾಕ್​ ನೀಡಿದ್ದಾರೆ.

ವಿಚ್ಛೇದನದ ಬಳಿಕ ನಿವೇದಿತಾ ಗೌಡ ಚಂದನ್​ ಅವರಿಂದ ಕೋಟ್ಯಾಂತರ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎಂಬ ವದಂತಿಗಳು ಕೇಳಿ ಬಂದವು. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಚಂದನ್​​ ಗೌಡ, ಪತಿಯಿಂದ ಪತ್ನಿ ಜೀವನಾಂಶ ಕೇಳುವುದು ಸಾಮಾನ್ಯ. ಆದರೆ, ನಿವೇದಿತಾ ಇಂಡಿಪೆಂಡೆಂಟ್​​​ ವುಮೆನ್​​. ಅವರು ತಮ್ಮ ಕರಿಯರ್​ನಲ್ಲಿ ಬ್ಯುಸಿ ಆಗಿ ದುಡಿಯುತ್ತಿದ್ದಾರೆ. ನಾನು ಯಾವುದೇ ಜೀವನಾಂಶ ನೀಡಿಲ್ಲ, ಅವರು ಯಾವುದೇ ರೀತಿಯ ಡಿಮ್ಯಾಂಡ್​​ ಇಟ್ಟಿಲ್ಲ ಎಂದರು.

ನಾವು ಇಬ್ಬರೂ ವೃತ್ತಿಜೀವನದಲ್ಲಿ ಬಿಜಿಯಾಗಿದ್ದೇವೆ. ಯಾರೂ ಜೀವನಾಂಶ ಕೇಳಿಲ್ಲ. ತುಂಬಾ ಗೌರವಯುತವಾಗಿ ದಾಂಪತ್ಯ ಜೀವನದಿಂದ ಇಬ್ಬರೂ ಹೊರಗೆ ಬಂದಿದ್ದೇವೆ. ಇಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ತುಂಬಾ ಗೌರವ ಇದೆ ಎಂದರು.

Load More