CSK ವಿರುದ್ಧದ ಪಂದ್ಯಕ್ಕೆ ಭುವಿ ಫಿಟ್, ಪ್ಲೆಯಿಂಗ್- 11ನಿಂದ ಕೊಕ್ ಯಾರಿಗೆ..?

author-image
Bheemappa
Updated On
CSK ವಿರುದ್ಧದ ಪಂದ್ಯಕ್ಕೆ ಭುವಿ ಫಿಟ್, ಪ್ಲೆಯಿಂಗ್- 11ನಿಂದ ಕೊಕ್ ಯಾರಿಗೆ..?
Advertisment
  • ಭುವನೇಶ್ವರ್ ಎಂಟ್ರಿಯಾದ್ರೆ ಹೊರಗೆ ಹೋಗುವುದು ಯಾರು?
  • ಫಿಟ್ನೆಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆರ್​ಸಿಬಿ ಮಾಹಿತಿ
  • ಇಂದು ಆರ್​ಸಿಬಿ ಟೀಮ್​ನಲ್ಲಿ ಅನುಭವಿ ಬೌಲರ್​ಗೆ ಸ್ಥಾನ..?

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲುವು ಪಡೆದಿತ್ತು. ಆದರೆ ಈ ತಂಡದಲ್ಲಿ ಅನುಭವಿ ಬೌಲರ್ ಆಗಿದ್ದ ಭುವನೇಶ್ವರ್ ಕುಮಾರ್ ಅವರನ್ನು ಹೊರಗಿಡಲಾಗಿತ್ತು. ಕೈಬೆರಳಿಗೆ ಸಣ್ಣ ಗಾಯ ಮಾಡಿಕೊಂಡಿದ್ದರಿಂದ ಭುವನೇಶ್ವರ್ ಸದ್ಯ ಚೇತರಿಸಿಕೊಂಡಿದ್ದು ಸಿಎಸ್​ಕೆ ವಿರುದ್ಧ ಇಂದು ಅಖಾಡಕ್ಕೆ ಧುಮಕಲಿದ್ದಾರೆ ಎನ್ನಲಾಗಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ಎದುರಿನ ಪಂದ್ಯಕ್ಕೂ ಮುನ್ನ ಆರ್​​ಸಿಬಿ ತಂಡದ ಬಲ ಹೆಚ್ಚಿದೆ. ಇಂಜುರಿಗೆ ತುತ್ತಾಗಿ ಮೊದಲ ಪಂದ್ಯದಿಂದ ಹೊರಗಿದ್ದ ವೇಗಿ ಭುವನೇಶ್ವರ್​ ಕುಮಾರ್​ ಫಿಟ್​ ಆಗಿದ್ದಾರೆ. ಚೆಪಾಕ್​ನ ನೆಟ್ಸ್​ನಲ್ಲಿ ಭುವನೇಶ್ವರ್ ಕುಮಾರ್​​​​ ಅಭ್ಯಾಸ ನಡೆಸಿದ್ದಾರೆ. ಫಿಟ್​ ಆಗಿರೋ ಭುವನೇಶ್ವರ್​ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋ ಸಾಧ್ಯತೆಯಿದ್ದು, ಯುವ ಆಟಗಾರ ರಸಿಕ್​ ದಾರ್​​ ಸ್ಥಾನಕ್ಕೆ ರಿಪ್ಲೇಸ್​ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಕೊಡಗಿನಲ್ಲಿ ಭೀಕರ ಕೃತ್ಯ.. 6 ವರ್ಷದ ಮಗು ಸೇರಿ ನಾಲ್ವರ ಜೀವ ತೆಗೆದ ಕಿರಾತಕ

publive-image

ಭುವನೇಶ್ವರ್ ಕುಮಾರ್ ಅವರು ಫಿಟ್ನೆಸ್ ಬಗ್ಗೆ ಆರ್​ಸಿಬಿ ಫ್ರಾಂಚೈಸಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ಭುವಿ ಧೈರ್ಯಶಾಲಿಯಾಗಿ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ, ಭುವನೇಶ್ವರ್ ಇಂದು ನಡೆಯಲಿರುವ ಸಿಎಸ್​​ಕೆ ವಿರುದ್ಧದ ರಣಾಂಗಣಕ್ಕೆ ಧುಮಕಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಭುವನೇಶ್ವರ್ ತಂಡಕ್ಕೆ ಕಂಬ್ಯಾಕ್ ಮಾಡಿದ್ರೆ ಆದರೆ, ಆರ್​​ಸಿಬಿ ಬೌಲಿಂಗ್ ಪಡೆ ಫುಲ್ ಸ್ಟ್ರಾಂಗ್ ಆಗಲಿದೆ.

ಮೊದಲ ಪಂದ್ಯದಲ್ಲಿ ಆರ್​ಸಿಬಿ ಭುವಿ ಅವರನ್ನು ಹೊರಗಿಟ್ಟು, ಜೋಶ್ ಹೇಜಲ್​ವುಡ್​, ಯಶ್ ದಯಾಳ್ ಹಾಗೂ ರಸಿಕ್ ದಾರ್​​ ಹಾಗೂ ಸುಯೇಶ್ ಶರ್ಮಾ ಅವರೊಂದಿಗೆ ದಾಳಿ ನಡೆಸಲಾಗಿದಿತ್ತು. ಹೇಜಲ್​ವುಡ್​ ಆರ್​ಸಿಬಿ ಪರ 2 ವಿಕೆಟ್ ಕಿತ್ತರೆ, ಯಶ್ ದಯಾಳ್ 1 ವಿಕೆಟ್ ಕಬಳಿಸಿದ್ದರು. ಕೃನಾಲ್ ಪಾಂಡ್ಯ 3 ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣ ಆಗಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment