/newsfirstlive-kannada/media/post_attachments/wp-content/uploads/2023/08/ratan_TATA_1.jpg)
ಪ್ರಸಿದ್ಧ ಟಾಟಾ ಮೋಟಾರ್ಸ್​ ಕಂಪನಿಯನ್ನು ಟಾರ್ಗೆಟ್ ಮಾಡಿ ಗ್ಯಾಂಗ್​ಸ್ಟರ್​ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು ಎಂದು ಭಾರತದ ಖ್ಯಾತ ಉದ್ಯಮಿ ಹಾಗೂ ಟಾಟಾ ಸನ್ಸ್ ಕಂಪನಿಯ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಈ ಹಿಂದೆ ಹೇಳಿದ್ದ ವಿಡಿಯೋ ಮತ್ತೆ ವೈರಲ್ ಆಗಿದೆ.
ಸದ್ಯ ವೀಡಿಯೋವನ್ನು ಕೊಲಂಬಿಯಾ ಬ್ಯುಸಿನೆಸ್ ಸ್ಕೂಲ್​ ಎನ್ನುವ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಭಾರತದ ಹಿರಿಯ ಉದ್ಯಮಿ ರತನ್​ ಟಾಟಾ ಅವರು, 1980 ರಲ್ಲಿ ಟಾಟಾ ಕಂಪನಿಯ ಅಧ್ಯಕ್ಷರಾಗಿದ್ದ ವೇಳೆ ಗ್ಯಾಂಗ್​ಸ್ಟರ್​ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಯತ್ನಿಸಿದ್ದನು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
[caption id="attachment_14358" align="aligncenter" width="800"] ರತನ್ ಟಾಟಾ[/caption]
ನಾನು ಟಾಟಾ ಕಂಪನಿಯ ಅಧ್ಯಕ್ಷನಾಗಿ 15 ದಿನಗಳು ಕಳೆದಿದ್ದವು. ಆಗ ಹೊರಗಿನಿಂದ ಗ್ಯಾಂಗ್​ಸ್ಟರ್, ಅಪಾರ ಪ್ರಮಾಣದ ಹಣಕ್ಕೆ ಬೇಡಿಕೆ ಹಾಗೂ ಕಂಪನಿಯ ನಿಯಂತ್ರಣ ತೆಗೆದುಕೊಳ್ಳಲು ಮುಂದಾಗಿ 200 ಜನರಿಂದ ಹಿಂಸಾತ್ಮಕ ಘಟನೆ ಸೃಷ್ಟಿ ಮಾಡುವ ಯೋಚನೆಯಲ್ಲಿದ್ದನು. ಇದರಿಂದ ಸುಮಾರು 4000 ಕಂಪನಿಯ ಉದ್ಯೋಗಿಗಳು ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದರು. ಆಗ ಕಂಪನಿಯ ಮ್ಯಾನೇಜ್​ಮೆಂಟ್ ಉದ್ಯೋಗಿಗಳನ್ನು ಲಘುವಾಗಿ ಪರಿಗಣಿಸಿತ್ತು. ಇದು ನಮ್ಮ ದೊಡ್ಡ ಮಿಸ್ಟೇಕ್ ಆಗಿತ್ತು ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ರತನ್​ ಟಾಟಾ ಗ್ಯಾಂಗ್​ಸ್ಟರ್​ ಬೆದರಿಕೆಗೆ ಮಣಿಯುವ ಮೊದಲು ಅವರನ್ನು ಹೇಗೆ ಎದುರಿಸಬೇಕು ಎಂದು ನಿರ್ಧಾರ ಮಾಡಿಕೊಂಡೆ. ಪೊಲೀಸರು ಅವರ ಪರವಾಗಿಯೇ ಇದ್ದರು. ಹೀಗಾಗಿ ಗ್ಯಾಂಗ್​ಸ್ಟರ್​ ಹೇಳಿದಂತೆ ಕೇಳಬೇಕು. ಅವರಿಗೆ ಬೇಕಾದದ್ದನ್ನು ಕೊಡಬೇಕು ಎಂದು ಜನರು ಹೇಳಿದ್ದರು. ಆದರೆ ನಾವು ಇದು ಯಾವುದನ್ನು ಮಾಡಲಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಕಂಪನಿಯಲ್ಲಿ ಪ್ರಾಬಲ್ಯ ಸಾಧಿಸಲು, ದಾಳಿಕೋರರು ಮುಷ್ಕರಕ್ಕೆ ಕರೆ ನೀಡಿದರು. ಇದರಿಂದಾಗಿ ಟಾಟಾ ಮೋಟಾರ್ಸ್​ನಲ್ಲಿ​ ಕೆಲಸಗಾರರು ತಮ್ಮ ಸುರಕ್ಷತೆಯ ಕಾರಣದಿಂದ ಕೆಲಸ ನಿಲ್ಲಿಸಿದರು. ನಾವು ಏನಾದ್ರೂ ಒಮ್ಮೆ ಅವರು ಕೇಳಿದ್ದನ್ನು ಕೊಟ್ಟರೇ ಅದು ಮುಂದುವರೆಯುವ ಸಾಧ್ಯತೆ ಇದೆ. ಅವನ ಹೇಳಿದಂತೆ ಮುಂದೆ ಕೇಳಬೇಕಾಗುತ್ತದೆ. ಹೀಗಾಗಿ ಮುಷ್ಕರ ನಡೆಯುತ್ತಿದ್ದರು ಅವರನ್ನು ನಿರಂತರವಾಗಿ ಎದುರಿಸಿದೆ ಎಂದರು. ನಂತರ ಕೊನೆಯದಾಗಿ ಗ್ಯಾಂಗ್​ಸ್ಟರ್​ ಹಿಡಿಯುವಲ್ಲಿ ರತನ್ ಟಾಟಾ ಅವರು ಶ್ರಮ ಪ್ರಮುಖ ಪಾತ್ರ ವಹಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ