/newsfirstlive-kannada/media/post_attachments/wp-content/uploads/2025/03/Virat-Kohli-On-Rcb-1.jpg)
ಐಪಿಎಲ್ನಲ್ಲಿ ಆರ್ಸಿಬಿ ಕಪ್ ಗೆಲ್ಲಲಿ. ಈ ಸಲ ಕಪ್ ನಮ್ದೆ ಎಂದು ಅಭಿಮಾನಿಗಳು ಸುಮಾರು 18 ವರ್ಷಗಳಿಂದ ಕಾಯುತ್ತಿದ್ದಾರೆ. ಬೆಂಗಳೂರು ತಂಡ ಕಪ್ ಗೆಲುವಿಗಾಗಿ ಪ್ರಾರ್ಥನೆ ಮಾಡದ ಕನ್ನಡಿಗನೇ ಇಲ್ಲ. ಆರ್ಸಿಬಿಗೆ ಇದ್ದಷ್ಟು ಅಭಿಮಾನಿಗಳು ಹಾಗೂ ಬೆಂಬಲಿಗರು ಐಪಿಎಲ್ನ ಯಾವ ತಂಡಕ್ಕೂ ಕೂಡ ಇಲ್ಲ. ಆದ್ರೆ ಪ್ರತಿ ಬಾರಿಯೂ ಕೂಡ ಆರ್ಸಿಬಿ ಅಭಿಮಾನಿಗಳನ್ನು ನಿರಾಸೆಗೊಳಿಸುತ್ತಲೇ ಬಂದಿದೆ. ಆದ್ರೆ ಅಭಿಮಾನಿಗಳಲ್ಲಿ ಆಶಾವಾದ ಮಾತ್ರ ಇನ್ನೂ ಬತ್ತಿಲ್ಲ. ಈ ಸಲ ಕಪ್ ನಮ್ದೇ ಎಂಬ ಆಶಯವನ್ನು ಪ್ರತಿವರ್ಷ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೇ ಇತಿಹಾಸದ ಬಗ್ಗೆ ಈಗ ಭಾರತದ ಮಾಜಿ ಕ್ರಿಕೆಟಿಗ ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಒಂದು ಬಾರಿ ಆಟವಾಡಿದ ಅಂಬಟಿ ರಾಯಡು ಆರ್ಸಿಬಿ ಬಗ್ಗೆ ಲೇವಡಿಯ ಮಾತುಗಳನ್ನಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ನ ಕಪ್ ಗೆಲ್ಲದ ಇತಿಹಾಸವನ್ನು ಅಂಬಟಿ ರಾಯಡು ಮತ್ತೊಮ್ಮೆ ತಮ್ಮ ಪರಿಹಾಸ್ಯದ ಸರಕನ್ನಾಗಿ ಮಾಡಿಕೊಂಡಿದ್ದಾರೆ. ಯೂಟ್ಯೂಬ್ನಲ್ಲಿ ನಡೆದ ಬದ್ರಿನಾಥ್ ಮತ್ತು ರಾಯಡು ನಡುವಿನ ಮಾತುಕತೆಯಲ್ಲಿ ಅಂಬಟಿ ರಾಯಡು ಈ ಬಾರಿಯೂ ಆರ್ಸಿಬಿ ಕಪ್ ಗೆಲ್ಲಬಾರದು ಎಂದು ನಾನು ಬಯಸುತ್ತೇನೆ. ಇಂತಹದೊಂದು ತಂಡ ಐಪಿಎಲ್ನಲ್ಲಿ ಹೀಗೆಯೇ ಸ್ಥಿರವಾಗಿರಬೇಕು ಎಂದು ಲೇವಡಿ ಮಾಡಿದ್ದಾರೆ.
View this post on Instagram
ಇದನ್ನೂ ಓದಿ:ಸಿಎಸ್ಕೆಗೆ ಆರ್ಸಿಬಿ ಮೇಲಿದೆ ಭಯಂಕರ ಕೋಪ.. ಯಾಕೆ ಅಷ್ಟೊಂದು ಸಿಟ್ಟು ಗೊತ್ತಾ..?
2016ರಲ್ಲಿ ಕೊನೆಯ ಬಾರಿ ಐಪಿಎಲ್ನಲ್ಲಿ ಆರ್ಸಿಬಿ ಫೈನಲ್ ಪಂದ್ಯವನ್ನಾಡಿತ್ತು ಮತ್ತು ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋತಿತ್ತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ 2023ರಲ್ಲಿ ಗುಜರಾತ್ ಟೈಟನ್ಸ್ ಸೋಲಿಸುವ ಮೂಲಕ ಐದನೇ ಬಾರಿ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ:ಆರ್ಸಿಬಿಗೆ ಬಂತು ಆನೆಬಲ; ಫ್ರಾಂಚೈಸಿ ಭರವಸೆಯ ಆಟಗಾರ ತಂಡಕ್ಕೆ ಕಂಬ್ಯಾಕ್..!
2025ರ ಐಪಿಎಲ್ನ ಮೊದಲ ಪಂದ್ಯದಲ್ಲಿಯೇ ಅದ್ಬುತ ಪ್ರದರ್ಶನ ತೋರಿದ ಬೆಂಗಳೂರು ತಂಡ ಕೊಲ್ಕತ್ತಾ ತಂಡವನ್ನು ಮಣ್ಣು ಮುಕ್ಕಿಸಿದೆ. ಕೊಹ್ಲಿ ಮತ್ತು ಪಿಲ್ ಸಾಲ್ಟ್ ಅದ್ಭುತ ಪ್ರದರ್ಶನದಿಂದ ಬೃಹತ್ ಮೊತ್ತವನ್ನು ಬೆನ್ನಟ್ಟಿ 7 ವಿಕೆಟ್ ವಿಜಯ ಪಡೆದು ಮುಂದಿನ ಮ್ಯಾಚ್ನ ಎದುರಾಳಿಗಳಲ್ಲಿ ಭಯ ಹುಟ್ಟಿಸಿದೆ. ಇಂದು ಅಂದ್ರೆ ಶುಕ್ರವಾದ ಸಂಜೆ ಇದೇ ಆರ್ಸಿಬಿ ಚೆನ್ನೈ ಸೂಪರ್ ಕಿಂಗ್ಸ್ನ್ನು ಎದುರಿಸಲಿದೆ. ರಾಯಡು ಲೇವಡಿ ಮಾತುಗಳಿಗೆ ಆರ್ಸಿಬಿ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ