RCB, ಸಿಎಸ್​ಕೆ ಅಭಿಮಾನಿಗಳ ನಡುವೆ ಘರ್ಷಣೆ.. ಸ್ಟೇಡಿಯಂ ಬಳಿ ಅಸಲಿಗೆ ಆಗಿದ್ದೇನು?

author-image
Bheemappa
Updated On
RCB, ಸಿಎಸ್​ಕೆ ಅಭಿಮಾನಿಗಳ ನಡುವೆ ಘರ್ಷಣೆ.. ಸ್ಟೇಡಿಯಂ ಬಳಿ ಅಸಲಿಗೆ ಆಗಿದ್ದೇನು?
Advertisment
  • ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳ ನಡುವೆ ಏನಾಯಿತು?
  • ಕೇವಲ ಎರಡೇ 2 ರನ್​ಗಳಿಂದ ಬೆಂಗಳೂರಿಗೆ ಅಮೋಘ ಗೆಲುವು
  • ಸಮಯಕ್ಕೆ ಸರಿಯಾಗಿ ಅವ್ರು ಬಂದಿದ್ದಕ್ಕೆ ಘರ್ಷಣೆ ತಣ್ಣಗಾಯಿತಾ?

2025ರ ಐಪಿಎಲ್​ ಸೀಸನ್​​ 18ರಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಚೆನ್ನೈ ವಿರುದ್ಧ ಐತಿಹಾಸಿಕ ಗೆಲುವು ಪಡೆದಿದೆ. ರಜತ್ ಪಾಟಿದಾರ್ ನೇತೃತ್ವದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಯ ಸಾಧಿಸುತ್ತಿದ್ದಂತೆ ಆರ್​ಸಿಬಿ ಸಂಭ್ರಮ ಮುಗಿಲು ಮುಟ್ಟಿತ್ತು. ಆದ್ರೆ ಪಂದ್ಯ ಮುಗಿದ ನಂತರ ಸ್ಟೇಡಿಯಂ ಹೊರಗೆ ಆರ್​ಸಿಬಿ ಹಾಗೂ ಸಿಎಸ್​ಕೆ ಅಭಿಮಾನಿಗಳ ನಡುವೆ ಸಣ್ಣ ಮಟ್ಟದ ಘರ್ಷಣೆ ನಡೆದಿದೆ.

ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಗೆಲುವು ಪಡೆದ ಬಳಿಕ ವೀಕ್ಷಕರೆಲ್ಲಾ ಹೊರಗೆ ಬಂದು ಸೆಲೆಬ್ರೆಷನ್​ ಮೂಡ್​ನಲ್ಲಿದ್ದರು. ಈ ವೇಳೆ ಚೆನ್ನೈ ತಂಡದ ಜೆರ್ಸಿ ಧರಿಸಿದ್ದ ಅಭಿಮಾನಿಯ ಕ್ಯಾಪ್ಟನ್​ ಧೋನಿಯ ಫೋಟೋ ಹಿಡಿದು ನಿಂತಿದ್ದರು. ಚೆನ್ನೈ ಅಭಿಮಾನಿ ಮುಂದೆ ಆರ್​ಸಿಬಿ ಫ್ಯಾನ್ಸ್​ ಸಂಭ್ರಮಿಸಿದ್ದಾರೆ. ಆಗ ಅಲ್ಲಿ ಸಣ್ಣ ಮಟ್ಟದಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆ ಏರ್ಪಡುತ್ತಿತ್ತು. ನೂಕುನುಗ್ಗಲು ಸಂಭವಿಸುತ್ತಿತ್ತು.

ಇದನ್ನೂ ಓದಿ:ಬೆಥೆಲ್​, ಕೊಹ್ಲಿ ಅಲ್ಲ.. RCB ಕ್ಯಾಪ್ಟನ್​ ರಜತ್ ಪಾಟಿದಾರ್​ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ..?

publive-image

ಆದ್ರೆ ಸಮಯಕ್ಕೆ ಸರಿಯಾಗಿ ಪೊಲೀಸ್ ಒಬ್ಬರು ಲಾಠಿ ಹಿಡಿದುಕೊಂಡು ಬಂದು ಎರಡು ಕಡೆಯ ಫ್ಯಾನ್ಸ್​ ಅನ್ನು ತಡೆದು ಸಮಾಧಾನ ಮಾಡಿದ್ದಾರೆ. ನೂಕುನುಗ್ಗಲನ್ನು ತಡೆದಿದ್ದಾರೆ. ಚೆನ್ನೈ ಅಭಿಮಾನಿಯನ್ನ ಪೊಲೀಸ್ ದೂರ ಕಳುಹಿಸಿದರು. ಆರ್​ಸಿಬಿ ಫ್ಯಾನ್ಸ್​ ಕೂಗುತ್ತಾ ಮುಂದೆ ನಡೆದರು. ಈ ವೇಳೆ ಪೊಲೀಸರು ಕಾರಿನಲ್ಲಿ ಗಲಾಟೆ ಮಾಡದಂತೆ ಮುಂದೆ ಹೋಗಬೇಕು ಎಂದು ಮೈಕ್​ನಲ್ಲಿ ಅನೌನ್ಸ್​ ಮಾಡುತ್ತಿದ್ದರು.

ಬೆಂಗಳೂರು ತಂಡ ನೀಡಿದ್ದ 214 ರನ್​ಗಳ ಬಿಗ್ ಟಾರ್ಗೆಟ್​ ಅನ್ನು ಚೇಸ್ ಮಾಡುವಾಗ ಚೆನ್ನೈ ಸೂಪರ್ ಕಿಂಗ್ಸ್​ ಅಲ್ಪದರಲ್ಲಿ ಮ್ಯಾಚ್ ಅನ್ನು ಕೈಚೆಲ್ಲಿದೆ. 20 ಓವರ್​ಗಳಲ್ಲಿ ಚೆನ್ನೈ 211 ರನ್ ಮಾತ್ರ ಗಳಿಸಿತು. ಕೊನೆಯ ಎಸೆತದವರೆಗೂ ಮ್ಯಾಚ್ ರೋಮಾಂಚನವಾಗಿತ್ತು. ಇದರಿಂದ ಅಭಿಮಾನಿಗಳಲ್ಲಿ ಜೋಶ್ ದೊಡ್ಡ ಮಟ್ಟದಲ್ಲಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment