/newsfirstlive-kannada/media/post_attachments/wp-content/uploads/2025/04/KOHLI-1.jpg)
ಐಪಿಎಲ್​​ ಸೀಸನ್​ 18ರಲ್ಲಿ ನಮ್ಮ ಆರ್​​ಸಿಬಿ ಡಿಫರೆಂಟ್​ ಆಗಿದೆ. ಸಿಎಸ್​ಕೆ ಭದ್ರಕೋಟೆ ಚೆನ್ನೈನಲ್ಲಿ ಚಿಂದಿ ಉಡಾಯಿಸಿತು. ಮುಂಬೈನ ಟೆರಿಟರಿ ವಾಂಖೆಡೆಯಲ್ಲಿ ವಿಜಯೋತ್ಸವ ಆಚರಿಸಿತು. ಹೋಮ್​​ಗ್ರೌಂಡ್​ ಚಿನ್ನಸ್ವಾಮಿಯಲ್ಲಿ ಮಾತ್ರ ಸೋಲಿನ ಸುಳಿಗೆ ಸಿಲುಕಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿ ತಂಡ ಮತ್ತೊಂದು ಹೀನಾಯ ಸೋಲಿಗೆ ಗುರಿಯಾಗಿದೆ. ಅವೇ ಪಿಚ್​​ಗಳಲ್ಲಿ ಗೆಲುವಿನ ನಗಾರಿ ಬಾರಿಸ್ತಿರೋ ಆರ್​​ಸಿಬಿ ತವರಿನಲ್ಲಿ ಎರಡಕ್ಕೆ ಎರಡೂ ಪಂದ್ಯ ಸೋತಿದೆ. ಹೋಮ್​​ಪಿಚ್​ನಲ್ಲಿ ಬೆಂಗಳೂರು ಬಾಯ್ಸ್​ ಘರ್ಜಿಸ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್​​ಗೆ ತೀವ್ರ ನಿರಾಶೆಯಾಗಿದೆ. ಭಾರೀ ನಿರೀಕ್ಷೆ​ ಇಟ್ಕೊಂಡು ಮೈದಾನಕ್ಕೆ ಬರ್ತಿರೋ ಲಾಯಲ್​ ಫ್ಯಾನ್ಸ್​ ಹತಾಶೆ, ಬೇಸರದಲ್ಲಿ ವಾಪಾಸ್ಸಾಗ್ತಿದ್ದಾರೆ.
ಇದನ್ನೂ ಓದಿ: ಪಂತ್​​ಗೆ ಮತ್ತೊಂದು ಅಗ್ನಿ ಪರೀಕ್ಷೆ.. ಪ್ರಸಿದ್ಧ್ ಮೇಲೆ ಭಾರೀ ನಿರೀಕ್ಷೆ..!
ಕಾರಣ ನಂ.1: ಅಲ್ಟ್ರಾ ಅಗ್ರೆಸ್ಸಿವ್​ ಬ್ಯಾಟಿಂಗ್
ಆರ್​​ಸಿಬಿಗೆ ಸೋಲಿಗೆ ಮುಖ್ಯ ಕಾರಣ. ಬಿಗ್​ ಟಾರ್ಗೆಟ್​ ಸೆಟ್​ ಮಾಡಬೇಕು ಅನ್ನೋ ಭರದಲ್ಲಿ ತಂಡ ಅಲ್ಟ್ರಾ ಅಗ್ರೆಸ್ಸಿವ್​ ಬ್ಯಾಟಿಂಗ್​ ನಡೆಸ್ತಿದೆ. ಬ್ಯಾಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡ್ರೂ ತಾಳ್ಮೆಯ ಆಟವಾಡದೇ ಅವಸರಕ್ಕೆ ಬಿದ್ದು ವಿಕೆಟ್​ ಒಪ್ಪಿಸ್ತಿದ್ದಾರೆ. ಗುಜರಾತ್​ ಎದುರಿನ ಪಂದ್ಯದಲ್ಲಿ 35 ರನ್​ಗಳಿಸುವಷ್ಟರಲ್ಲೇ 3 ವಿಕೆಟ್​ ಕಳೆದುಕೊಳ್ತು. 2ನೇ ಪಂದ್ಯದಲ್ಲಿ ಅತ್ಯದ್ಭುತ ಓಪನಿಂಗ್​ ಸಿಕ್ಕಿತ್ತು. 3 ಓವರ್ ಅಂತ್ಯಕ್ಕೆ 53 ರನ್​ಗಳಿಸಿತ್ತು. ಆ ಬಳಿಕ ಕೇವಲ 22 ರನ್​ ಅಂತರದಲ್ಲಿ ಪ್ರಮುಖ ಮೂವರು ಬ್ಯಾಟರ್ಸ್​ ಔಟಾದ್ರು. ಸ್ವಲ್ಪ ತಾಳ್ಮೆಯ ಆಟವಾಡಿದ್ರೆ ದಿಢೀರ್​ ಕುಸಿತದಿಂದ ತಪ್ಪಿಸಬಹುದಿತ್ತು.
ಕಾರಣ ನಂ.2: ಕೊಹ್ಲಿ ಖದರ್​ ಮಾಯ!
ಆರ್​​ಸಿಬಿಯ ಬ್ಯಾಟಿಂಗ್​ ಬೆನ್ನೆಲುವು ವಿರಾಟ್​ ಕೊಹ್ಲಿಯ ಖದರ್​ ಮಾಯವಾಗಿದೆ. ಚಿನ್ನಸ್ವಾಮಿ ಸಾಲಿಡ್​ ಟ್ರ್ಯಾಕ್​ ರೆಕಾರ್ಡ್​ ಹೊಂದಿರೋ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ಬಿಗ್​ ಇನ್ನಿಂಗ್ಸ್​ ಕಟ್ತಿಲ್ಲ. ಗುಜರಾತ್​ ವಿರುದ್ಧ ಮೊದಲ ಪಂದ್ಯದಲ್ಲಿ 7 ರನ್​ಗೆ ವಿಕೆಟ್​ ಒಪ್ಪಿಸಿದ್ದ ವಿರಾಟ್​, 2ನೇ ಪಂದ್ಯದಲ್ಲಿ 22 ರನ್​ಗಳಿಸಿ ನಿರ್ಗಮಿಸಿದ್ರು. ಕಿಂಗ್​ಡಮ್​​ನಲ್ಲಿ ಕಿಂಗೇ​ ಫ್ಲಾಪ್​ ಆದ್ರೆ ಹೆಂಗ್​ ಹೇಳಿ.
ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬೆನ್ನಲ್ಲೇ ಆರ್​ಸಿಬಿಗೆ ಮತ್ತೊಂದು ಶಾಕ್..!
ನಂ.3: ಪಟಿದಾರ್​, ಪಡಿಕ್ಕಲ್ ಪರದಾಟ
ಕ್ಯಾಪ್ಟನ್​​ ರಜತ್​ ಪಟಿದಾರ್​, ಕನ್ನಡಿಗ ದೇವದತ್ತ್​ ಪಡಿಕ್ಕಲ್ ಇಬ್ಬರೂ ಚಿನ್ನಸ್ವಾಮಿಯಲ್ಲಿ ಸ್ಟ್ರಗಲ್​ ಮಾಡ್ತಿದ್ದಾರೆ. ಮೊದಲ ಪಂದ್ಯದಲ್ಲಿ 4 ರನ್​ಗಳಿಸಿ ಆಟ ಮುಗಿಸಿದ ಪಡಿಕ್ಕಲ್​, ಎರಡನೇ ಪಂದ್ಯದಲ್ಲಿ ಬರೋಬ್ಬರಿ 8 ಎಸೆತ ಎದುರಿಸಿ ಜಸ್ಟ್​ 1 ರನ್​ಗಳಿಸಿದ್ರು. ಕ್ಯಾಪ್ಟನ್​ ಪಟಿದಾರ್​​ ಫಸ್ಟ್​ ಮ್ಯಾಚ್​ 12 ರನ್​ಗಳಿಸಿದ್ರೆ 2ನೇ ಮ್ಯಾಚ್​ನಲ್ಲಿ 23 ಎಸೆತಕ್ಕೆ 25 ರನ್​ಗಳಿಸಿದ್ರಷ್ಟೇ.
ನಂ.4: ಜೋಷ್​ ಹೇಜಲ್​ವುಡ್​​ ದುಬಾರಿ
ಆರ್​​ಸಿಬಿಯ ಮೇನ್​ ವೆಪನ್​ ಜೋಷ್​ ಹೇಜಲ್​ವುಡ್​​ ಚಿನ್ನಸ್ವಾಮಿಯಲ್ಲಿ ದುಬಾರಿ ಸ್ಪೆಲ್​ ಹಾಕ್ತಿದ್ದಾರೆ. ಲೈನ್​ ಅಂಡ್ ಲೆಂಥ್​ ಕಂಡುಕೊಳ್ಳುವಲ್ಲಿ ಫೇಲ್​ ಆಗಿರೋ ಹೇಜಲ್​ವುಡ್​, ಫುಲ್​ ಜೋಷ್​ನಲ್ಲಿ ರನ್​ ಬಿಟ್ಟುಕೊಟ್ತಿದ್ದಾರೆ. ಫಸ್ಟ್​ ಮ್ಯಾಚ್​ನಲ್ಲಿ 11.20ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟ ಹೇಜಲ್​ವುಡ್​, ಡೆಲ್ಲಿ ವಿರುದ್ಧ 13.30ರ ಎಕಾನಮಿಯಲ್ಲಿ ರನ್​ ನೀಡಿ ದುಬಾರಿಯಾದ್ರು. ಆರ್​​ಸಿಬಿ ಬತ್ತಳಿಕೆಯ ಪ್ರಮುಖ ಅಸ್ತ್ರವೇ ರನ್​ಭೂಮಿಯಲ್ಲಿ ಫೇಲ್​ ಆಗ್ತಿರೋದು ಹಿನ್ನಡೆಗೆ ಕಾರಣವಾಗಿದೆ.
ಇದನ್ನೂ ಓದಿ:ಧೋನಿ ಕ್ಯಾಪ್ಟನ್ ಆದ್ರೂ ಮುಂದುವರೆದ CSK ಸೋಲು.. ಮನೆಯಂಗಳದಲ್ಲಿ ಚೆನ್ನೈ ತಂಡ ಧೂಳೀಪಟ
ನಂ.5: ಟಾಸ್​​ ಸೋತು ಬ್ಯಾಟಿಂಗ್​ ಮಾಡಿ ಸೋಲು
ಚಿನ್ನಸ್ವಾಮಿ ಮೈದಾನದಲ್ಲಿ ಚೇಸಿಂಗ್​ ಮಾಡೋ ತಂಡಕ್ಕೆ ಅಡ್ವಾಂಟೇಜ್​ ಜಾಸ್ತಿ. ಆರ್​​ಸಿಬಿ ಸ್ಟ್ರೆಂಥ್​ ಕೂಡ ಚೇಸಿಂಗೇ. ಏನ್​​ ಮಾಡೋದು ಲಕ್​ ನಮ್​​ ಕಡೆಗಿಲ್ಲ. ಎರಡೂ ಮ್ಯಾಚ್​ನಲ್ಲಿ ಟಾಸ್​ ಒಲಿಯಲಿಲ್ಲ. ಟಾಸ್​ ತಂಡದ​ ಕೈಲಿ ಇಲ್ಲ. ಬಿಗ್​ ಟಾರ್ಗೆಟ್​ ಸೆಟ್​ ಮಾಡೋ ಅವಕಾಶ ಇತ್ತು. ಬ್ಯಾಟ್ಸ್​​ಮನ್​ಗಳಿಗೆ ಹೆಚ್ಚು ನೆರವಾಗೋ ಪಿಚ್​ನಲ್ಲಿ 200+ ರನ್​ಗಳಿಸಿದ್ರೆ, ಡಿಫೆಂಡ್​ ಮಾಡಬಹುದಿತ್ತು. ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್​ ಯುನಿಟ್​ ಫೇಲ್​ ಆಯ್ತು.
ಅನ್​ಫೀಲ್ಡ್​ನಲ್ಲಿ ಮಾಡಿದ ತಪ್ಪುಗಳ ಪರಿಣಾಮ ಅವೇ ಪಿಚ್​ಗಳಲ್ಲಿ ಗೆದ್ದು ಬೀಗಿದ ಆರ್​ಸಿಬಿ, ಹೋಮ್​​ ಪಿಚ್​​ನಲ್ಲಿ ಮುಖಭಂಗ ಅನುಭವಿಸಿದೆ. ಮುಂದಿನ ಪಂದ್ಯಗಳಲ್ಲಾದ್ರೂ ಮಿಸ್ಟೇಕ್ಸ್​ನ ತಿದ್ದಿಕೊಂಡು ಚಿನ್ನಸ್ವಾಮಿ ಚಾಲೆಂಜ್​​ ಗೆಲ್ಲುತ್ತಾ? ಕಾದು ನೋಡೋಣ.
ಇದನ್ನೂ ಓದಿ: ಬೆಂಗಳೂರಲ್ಲಿ RCB ಮ್ಯಾಚ್.. ಟಿಕೆಟ್ ಯಾಕೆ ಸುಲಭಕ್ಕೆ ಸಿಗಲ್ಲ? CCBಯಿಂದ ಸ್ಫೋಟಕ ಸತ್ಯ ಬಯಲು!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್