/newsfirstlive-kannada/media/post_attachments/wp-content/uploads/2025/02/rajat_patidar_KOHLI.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ತವರಿನ ಅಂಗಳ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಗೆದ್ದಿರೋದ್ಕಿಂತ ಸೋತಿದ್ದೇ ಹೆಚ್ಚು. 18ನೇ ಆವೃತ್ತಿಯಲ್ಲಿ ಹೋಮ್ಗ್ರೌಂಡ್ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಸೋಲನ್ನು ಕಂಡಿದೆ. ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಸೋತಿದೆ. ಇಂದು ತವರಿನ ಅಡ್ವಾಂಟೇಜ್ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬೇಕು ಅಂದರೆ ಆರ್ಸಿಬಿ ಕಠಿಣ ಸವಾಲು ಎದುರಿಸಬೇಕಾಗಿದೆ.
ಚಿನ್ನಸ್ವಾಮಿ ಕಂಟಕ..!
ಹೋಮ್ಗ್ರೌಂಡ್ ಅನ್ನೋದು ಪ್ರತಿ ತಂಡಕ್ಕೂ ಅಡ್ವಾಂಟೇಜ್ ಆಗಿರುತ್ತೆ. ಯಾವಾಗ್ಲೂ ತವರಿನ ತಂಡವೇ ಗೆಲ್ಲೋ ಫೇವರಿಟ್ ಅನಿಸಿರುತ್ತೆ. ಆರ್ಸಿಬಿ ವಿಚಾರದಲ್ಲಿ ಇದು ಉಲ್ಟಾ. ಚಿನ್ನಸ್ವಾಮಿಯಲ್ಲಿ ಆರ್ಸಿಬಿ, ಇದುವರೆಗೆ 92 ಪಂದ್ಯಗಳನ್ನಾಡಿದೆ. ಈ ಪೈಕಿ 43 ಪಂದ್ಯಗಳಲ್ಲಿ ಗೆದ್ದಿರುವ ಆರ್ಸಿಬಿ, 48.96ರ ವಿನ್ನಿಂಗ್ ಪರ್ಸೇಂಟೇಜ್ ಹೊಂದಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ 7 ಪಂದ್ಯಗಳನ್ನಾಡಲಿರುವ ಆರ್ಸಿಬಿ, ಕನಿಷ್ಟ ಅಂದ್ರೂ 5 ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಗೆದ್ರೆ ಪ್ಲೇ ಆಫ್ ಎಂಟ್ರಿ ಸುಲಭವಾಗಲಿದೆ. ಚಿನ್ನಸ್ವಾಮಿಯ ಈ ಹಿಂದಿನ ದಾಖಲೆಗಳು ಆರ್ಸಿಬಿಗೆ ವಿರುದ್ಧವಾಗಿವೆ. ಹಳೆಯ ದಾಖಲೆಯನ್ನ ಸುಳ್ಳಾಗಿಸಿ ತಂಡವನ್ನ ಗೆಲುವಿನ ದಡ ಸೇರಿಸೋ ಜವಾಬ್ದಾರಿ ಇದೀಗ ಕ್ಯಾಪ್ಟನ್ ರಜತ್ ಪಟಿದಾರ್ ಮುಂದಿದೆ.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲ್ಲುವ ಫೇವರಿಟ್ ತಂಡ ಯಾವುದು.. ಆರ್ಸಿಬಿನಾ, ಡೆಲ್ಲಿನಾ?
ಕೊಹ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಚಿನ್ನಸ್ವಾಮಿ ವಿರಾಟ್ ಕೊಹ್ಲಿಯ ಫೇವರಿಟ್ ಗ್ರೌಂಡ್. ಈ ಅಂಗಳದಲ್ಲಿ ಕಿಂಗ್ ಕೊಹ್ಲಿ ರನ್ ಸುನಾಮಿಯನ್ನೇ ಸೃಷ್ಟಿಸಿದ್ದಾರೆ. ಈ ಸೀಸನ್ನಲ್ಲೂ ತನ್ನ ಫೇವರಿಟ್ ಗ್ರೌಂಡ್ನಲ್ಲಿ ವಿರಾಟ್ ವೀರಾವೇಶ ಮುಂದುವರಿಸಬೇಕಿದೆ. ತವರಿನ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯಿಟ್ಟಿದ್ದಾರೆ. ಆ ನಿರೀಕ್ಷೆಯನ್ನ ನಿಜವಾಗಿಸಬೇಕಿದೆ.
ವಿದೇಶಿ ಬ್ಯಾಟರ್ಸ್
ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟರ್ಗಳಿಗೆ ಹೇಳಿ ಮಾಡಿಸಿದಂತಿದೆ. ವಿದೇಶಿ ಬ್ಯಾಟ್ಸ್ಮನ್ಸ್ ಈ ಬ್ಯಾಟಿಂಗ್ ಸ್ವರ್ಗದ ಅಡ್ವಾಂಟೇಜ್ ತೆಗೆದುಕೊಳ್ಳಬೇಕಿದೆ. ಆರಂಭದಿಂದಲೇ ಫಿಲ್ ಸಾಲ್ಟ್ ಸಿಡಿಗುಂಡಿನಂತೆ ಸಿಡಿದ್ರೆ, ಮಿಡಲ್ ಓವರ್ ಮತ್ತು ಸ್ಲಾಗ್ ಓವರ್ಗಳಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್, ಟಿಮ್ ಡೇವಿಡ್ ದಂಡಯಾತ್ರೆ ಮಾಡಿದ್ರೆ, ಆರ್ಸಿಬಿ ಗೆಲುವು ಪಕ್ಕಾ.
ಇದನ್ನೂ ಓದಿ: ಆರ್ಸಿಬಿ vs ಮಾಜಿ ಆರ್ಸಿಬಿ ಆಟಗಾರರು.. ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಇವ್ರದ್ದೇ ದರ್ಬಾರ್..!
ಬೌಂಡರಿ ತಡೆಯೋದೇ ಚಾಲೆಂಜ್!
ಚಿಕ್ಕ ಬೌಂಡರಿಗಳಿರೋ ಚಿನ್ನಸ್ವಾಮಿ ಸ್ಟೇಡಿಯಂ ಬೌಲರ್ಗಳ ಪಾಲಿಗೆ ಎಂದಿಗೂ ವಿಲನ್. ಈ ಕಾರಣದಿಂದಲೇ ಆರ್ಸಿಬಿ 17 ವರ್ಷಗಳಿಂದಲೂ ಹಿನ್ನಡೆ ಅನುಭವಿಸಿದೆ. ಈ ಸೀಸನ್ನಲ್ಲಿ ಕೊಲ್ಕತ್ತಾ ಹಾಗೂ ಚೆನ್ನೈನಲ್ಲಿ ಅದ್ಭುತ ದಾಳಿ ಸಂಘಟಿಸಿರೋ ಜೋಶ್ ಹೇಜಲ್ವುಡ್, ಯಶ್ ದಯಾಳ್, ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಹೊಸ ಭರವಸೆ ಮೂಡಿಸಿದ್ದಾರೆ. ಈ ತ್ರಿಮೂರ್ತಿಗಳು ಚಿನ್ನಸ್ವಾಮಿ ಅಂಗಳದಲ್ಲೂ ಬೌಂಡರಿಗಳಿಗೆ ಬ್ರೇಕ್ ಹಾಕಿದ್ರೆ ಆರ್ಸಿಬಿ ಗೆಲುವನ್ನ ತಡಿಯೋರೆ ಇಲ್ಲ.
ಸ್ಪೆಷಲಿಸ್ಟ್ ಸ್ಪಿನ್ನರ್ ಕೊರತೆ ನಿಭಾಯಿಸಬೇಕು!
ಕೃನಾಲ್ ಪಾಂಡ್ಯ, ಸುಯೆಶ್ ಶರ್ಮಾ, ಸ್ವಪ್ನಿಲ್ ಸಿಂಗ್, ಲಿಯಾಮ್ ಲಿವಿಂಗ್ ಸ್ಟೋನ್ RCB ತಂಡದಲ್ಲಿರೋ ಸ್ಪಿನ್ ಬೌಲರ್ಗಳಾಗಿದ್ದಾರೆ. ಈ ಪೈಕಿ ಸುಯೆಶ್ ಶರ್ಮಾ ಚಿನ್ನಸ್ವಾಮಿಯಲ್ಲಿ ಆಡಿದ ಅನುಭವ ಕಡಿಮೆಯಿದೆ. ಉಳಿದವರ್ಯಾರೂ ಸ್ಪೆಷಲಿಸ್ಟ್ ಸ್ಪಿನ್ನರ್ಗಳಲ್ಲ. ಸದ್ಯಕ್ಕಂತೂ ಇವ್ರ ಬೌಲಿಂಗ್ ಚಿನ್ನಸ್ವಾಮಿಯ ಬ್ಯಾಟಿಂಗ್ ಟ್ರ್ಯಾಕ್ನಲ್ಲಿ ಎಫೆಕ್ಟಿವ್ ಆಗುತ್ತೆ ಅನ್ನಿಸ್ತಿಲ್ಲ. ಈ ಸ್ಪಿನ್ನರ್ಗಳನ್ನ ರಜತ್ ಪಾಟಿದಾರ್ ಹೇಗೆ ಬಳಸಿಕೊಳ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಜೊತೆಗೆ ಪರಿಸ್ಥಿತಿಗೆ ಅನುಗುಣವಾಗಿ ಇವ್ರನ್ನ ಬಳಸಿಕೊಳ್ಳೋದ್ರ ಮೇಲೆಯೇ ಆರ್ಸಿಬಿ ಗೆಲುವು ನಿಂತಿದೆ.
ಇದನ್ನೂ ಓದಿ: ಇವತ್ತಿನ RCB ಪಂದ್ಯಕ್ಕೆ ಮಳೆ ಬರುತ್ತಾ..? ಹೇಗಿರಲಿದೆ ಬೆಂಗಳೂರು ವಾತಾವರಣ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್