/newsfirstlive-kannada/media/post_attachments/wp-content/uploads/2025/06/RCB_TEAM_BOWLERS.jpg)
ಬೌಲರ್ಸ್ ವಿನ್ಸ್ ಮ್ಯಾಚಸ್, ಈ ಮಾತನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್ನಲ್ಲಿ ನಿಜವಾಗಿಸಿದೆ. ರೆಡ್ ಆರ್ಮಿಯ ಸಕ್ಸಸ್ಫುಲ್ ಯಾತ್ರೆಯಲ್ಲಿ ಬಾಲಿಂಗ್ ವಿಭಾಗ ಕೀ ರೋಲ್ ಪ್ಲೇ ಮಾಡಿದೆ. ಇದೀಗ ಫೈನಲ್ಗೆ ಎಂಟ್ರಿ ನೀಡಿರೋ ಆರ್ಸಿಬಿ ಟ್ರೋಫಿಗೆ ಮುತ್ತಿಡಬೇಕಾದ್ರೆ, ಈ ಪಂಚ ಪಾಂಡವರ ಆಟ ಮೋಸ್ಟ್ ಕ್ರೂಶಿಯಲ್. ಇವರ ಆಟ ನಡೆದ್ರೆ, ಆರ್ಸಿಬಿ ಟ್ರೋಫಿ ಗೆಲ್ಲೋದು ಶತಸಿದ್ಧ.
ಸೀಸನ್-18ರ ಕಲರ್ಫುಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. 70 ರೋಚಕ ಲೀಗ್ ಮ್ಯಾಚ್ಗಳು.. ಮೂರು ಹೈಟೆನ್ಶನ್ ಪ್ಲೇ-ಆಫ್ ಪಂದ್ಯಗಳ ಕಾದಾಟ. ಮೂರು ತಿಂಗಳ ಅದ್ಧೂರಿ ಮನರಂಜನೆಯ ಜಾತ್ರೆಯ ಅಂತ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. 18 ವರ್ಷಗಳ ವನವಾಸಕ್ಕೆ ಬ್ರೇಕ್ ಹಾಕಿ ಟ್ರೋಫಿಗೆ ಮುತ್ತಿಕ್ಕಲು ಬೆಂಗಳೂರು ಬಾಯ್ಸ್ ರೆಡಿಯಾಗಿದ್ದಾರೆ.
ಪಂಜಾಬ್ಗೆ ಪಂಚ್ ನೀಡಿ ಫೈನಲ್ಗೇರಿರುವ ಆರ್ಸಿಬಿ, ಈ ಸಲ ಶತಯಗತಾಯ ರಣಕಣದಲ್ಲಿ ಕಪ್ ಗೆಲ್ಲಲು ಪಣತೊಟ್ಟಿದೆ. ಇದಕ್ಕಾಗಿ ಇನ್ನಿಲ್ಲದ ಗೇಮ್ ಪ್ಲಾನ್, ಸ್ಟ್ರಾಟರ್ಜಿಗಳನ್ನೇ ರೂಪಿಸಿಕೊಂಡಿದೆ. ಆದ್ರೆ, ನಮೋ ಮೈದಾನದಲ್ಲಿ ಫೈನಲ್ ಫೈಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆರೆದಾಡಬೇಕಾದ್ರೆ, ಆರ್ಸಿಬಿ ಬ್ಯಾಟರ್ಗಳಿಗಿಂತಲೂ ಬೌಲರ್ಗಳ ರೋಲ್ ಮೋಸ್ಟ್ ಕ್ರೂಶಿಯಲ್.
ಈ ಬಾರಿ RCB ಹಣೆಬರಹ ಬದಲಿಸುತ್ತಾ ‘ತ್ರಿವಳಿ ಅಸ್ತ್ರ’..
ಐಪಿಎಲ್ನ ಫೈನಲ್ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ. ನಮೋ ಮೈದಾನದ ರನ್ಭೂಮಿಯಲ್ಲಿ ವೀರಾ ಸೇನಾನಿಗಳಂತೆ ಕಪ್ಗಾಗಿ ತಂಡಗಳು ಹೋರಾಡಲಿವೆ. ಸುಲಭವಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ 2 ತಂಡಗಳದ್ದಲ್ಲ. ಆದ್ರೂ, ಈ ಬಿಗ್ ಬ್ಯಾಟಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಟ್ ಫೇವರಿಟ್ ಅನಿಸಿದೆ. ಬ್ಯಾಟ್ಸ್ಮನ್ಗಳಲ್ಲ, ಬೌಲರ್ಗಳೇ RCBಗೆ ಟ್ರೋಫಿ ಗೆಲ್ಲಿಸಿಕೊಡ್ತಾರೆ ಎಂಬ ಭರವಸೆ ಎಲ್ಲರದ್ದು. ಅದಕ್ಕೆ ಕಾರಣ ಬೌಲರ್ಗಳ ಬೆಂಕಿ ಪರ್ಫಾಮೆನ್ಸ್.
ಹೇಜಲ್ವುಡ್, ಭುವಿ, ದಯಾಳ್ ದರ್ಬಾರ್.. ಹೈ ‘ಜೋಷ್’.!
18 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿ, ಮೊದಲ ಬಾರಿಗೆ ದಿ ಬೆಸ್ಟ್ ಬೌಲಿಂಗ್ ಅಟ್ಯಾಕ್ ಹೊಂದಿದೆ. ಟೂರ್ನಿಯ ಆರಂಭದಿಂದಲೂ ಸಾಲಿಡ್ ಆಟವಾಡಿದ್ದು, RCBಗೆ ಗೆಲುವಿನ ರುಚಿ ಉಣ ಬಡಿಸಿದರಲ್ಲಿ ಮಹತ್ವದ ಪಾತ್ರ ವಹಿಸಿದ್ದೆ ಆರ್ಸಿಬಿಯ ಪೇಸ್ ಅಟ್ಯಾಕ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಪವರ್ಪ್ಲೇ, ಸ್ಲಾಗ್ ಓವರ್ಗಳಲ್ಲಿ ಎಫೆಕ್ಟಿವ್ ಬೌಲಿಂಗ್ ಮಾಡ್ತಿರುವ ಈ ತ್ರಿವಳಿಗಳೂ ಬರೋಬ್ಬರಿ 53 ವಿಕೆಟ್ ಉರುಳಿಸಿದ್ದಾರೆ. ಅಷ್ಟೇ ಅಲ್ಲ, ಎದುರಾಳಿಗಳ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದಾರೆ. ಹೀಗಾಗಿ ಫೈನಲ್ಸ್ನಲ್ಲಿ ಇವರ ದರ್ಬಾರ್ ನಡೆದ್ರೆ, ಎದುರಾಳಿ ಖಲ್ಲಾಸ್ ಆಗೋದು ಗ್ಯಾರಂಟಿ.
ಆರ್ಸಿಬಿಯ ಪೇಸರ್ಸ್ ಬೌಲಿಂಗ್
ಪ್ರಸಕ್ತ ಸೀಸನ್ನಲ್ಲಿ 11 ಪಂದ್ಯಗಳನ್ನಾಡಿರುವ ಜೋಶ್ ಹೇಜಲ್ವುಡ್, 21 ವಿಕೆಟ್ ಬೇಟೆಯಾಡಿದ್ದಾರೆ. ಪ್ರತಿ ಓವರ್ಗೆ 8.30ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಇನ್ನು 13 ಪಂದ್ಯಗಳನ್ನಾಡಿರುವ ಭುವನೇಶ್ವರ್, 9.27ರ ಎಕಾನಮಿಯಲ್ಲಿ ರನ್ ನೀಡಿ 15 ವಿಕೆಟ್ ಕಬಳಿಸಿದ್ದಾರೆ. ಕ್ರೂಶಿಯಲ್ ಮ್ಯಾಚ್ಗಳ ಗೇಮ್ ಚೇಂಜರ್ ಯಶ್ ದಯಾಳ್, 14 ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದಾರೆ.
ಮೆಜಿಶಿಯನ್ಸ್ ಮ್ಯಾಜಿಕ್ ಮಾಡಿದ್ರೆ ಗೆಲುವು ಫಿಕ್ಸ್..!
ಇವ್ರೇ ಅಲ್ಲ.! ಇವರಿಗೆ ಮಿಡಲ್ ಓವರ್ಸ್ನಲ್ಲಿ ಸಾಥ್ ನೀಡುವ ರೊಮಾರಿಯೊ ಶೆಫರ್ಡ್ ಸಹ ಅಪಾಯಕಾರಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಸ್ಪಿನ್ ಟು ವಿನ್ ಆರ್ಸಿಬಿ ಗೆಲುವಿನ ಗುಟ್ಟು ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಬಹುತೇಕ ಪಂದ್ಯಗಳಲ್ಲಿ ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ವಿಕೆಟ್ ಬೇಟೆಯಾಡದಿದ್ದರು. ರನ್ ಗಳಿಕೆಗೆ ಕಡಿವಾಣ ಹಾಕಿ ಇಂಪ್ಯಾಕ್ಟ್ ಮಾಡಿದಿದ್ದೆ. ಅಷ್ಟೇ ಅಲ್ಲ, ಕೆಲವೊಂದು ಮ್ಯಾಚ್ಗಳಲ್ಲಿ ಮ್ಯಾಚ್ ವಿನ್ನರ್ಗಳಾಗಿ ಮೆರೆದಾಡಿದ್ದು ಇದೆ. ಹೀಗಾಗಿ ಕೃನಾಲ್, ಸುಯಶ್ ಕಮಾಲ್ ಮಾಡಿದ್ರೆ, ಆರ್ಸಿಬಿ ಗೆಲುವು ಕಷ್ಟವೇನಲ್ಲ.
ಆರ್ಸಿಬಿಯ ಸ್ಪಿನ್ನರ್ಸ್ ಪ್ರದರ್ಶನ
ಕೃನಾಲ್ ಪಾಂಡ್ಯ 14 ಪಂದ್ಯಗಳಿಂದ 15 ವಿಕೆಟ್ ಉರುಳಿಸಿದ್ದಾರೆ. 8.61ರ ಎಕಾನಮಿಯಲ್ಲಿ ರನ್ ನೀಡಿದ್ಧಾರೆ. ಸುಯಶ್ ಶರ್ಮಾ 13 ಪಂದ್ಯಗಳಿಂದ 8 ವಿಕೆಟ್ ಬೇಟೆಯಾಡಿ 8.81ರ ಎಕಾನಮಿಯಲ್ಲಿ ಕಾಯ್ದುಕೊಂಡಿದ್ದಾರೆ. ಹೀಗಾಗಿ ಫೈನಲ್ಸ್ನಲ್ಲಿ ಇವರಿಬ್ಬರ ಜುಗಲ್ಬಂದಿ ಮುಂದುವರಿದ್ರೆ. ಎದುರಾಳಿ ಖಲ್ಲಾಸ್ ಆಗೋದು ಗ್ಯಾರಂಟಿ.
ಇದನ್ನೂ ಓದಿ:RCB ಸಕ್ಸಸ್ ಹಿಂದಿನ ಕಾರಣ ಏನು.. ತಂಡದಲ್ಲಿ ದೊಡ್ಡ ಬದಲಾವಣೆ ಶುರುವಾಗಿದ್ದು ಯಾವಾಗ..?
87 ವಿಕೆಟ್ ಬೇಟೆ.. ಕಡಿಮೆ ರನ್ ಬಿಟ್ಟುಕೊಟ್ಟ ತಂಡ ಆರ್ಸಿಬಿ..!
ರಾಯಲ್ ಚಾಲೆಂಜರ್ಸ್ ತಂಡ ಬೆಸ್ಟ್ ಬೌಲಿಂಗ್ ಅಟ್ಯಾಕ್ ಹೊಂದಿದೆ. ಅದಕ್ಕೆ 87 ವಿಕೆಟ್ ಸರಮಾಲೇನೆ ಸಾಕ್ಷಿ. ಜಿದ್ದಿಗೆ ಬಿದ್ದವರಂತೆ ಬೌಲಿಂಗ್ ಮಾಡಿರುವ ಈ ಪಂಚ ಪಾಂಡವರು, ಪ್ರಸಕ್ತ ಐಪಿಎಲ್ನಲ್ಲಿ 2422 ರನ್ ಮಾತ್ರವೇ ಬಿಟ್ಟುಕೊಟ್ಟಿದ್ದಾರೆ. ಇದು ಪ್ರಸಕ್ತ ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿಯೂ ಕಡಿಮೆ ರನ್ ಬಿಟ್ಟುಕೊಟ್ಟ 2ನೇ ತಂಡವಾಗಿದೆ.
ಅಷ್ಟೇ ಅಲ್ಲ, ಟೂರ್ನಿಯುದ್ದಕ್ಕೂ ಜವಾಬ್ದಾರಿಯುತ ಆಟವಾಡಿರುವ ಆರ್ಸಿಬಿ ಬೌಲರ್ಸ್, ಫೈನಲ್ ಸಮರದಲ್ಲೇ ಅದೇ ಕಿಚ್ಚಿನ ಪ್ರದರ್ಶನ ಹೊರಹಾಕಿದ್ರೆ. ಟ್ರೋಫಿ ಗೆಲ್ಲೋದ್ರಲ್ಲಿ ಆಶ್ಚರ್ಯಪಡಬೇಕಿಲ್ಲ. ಕ್ವಾಲಿಫೈಯರ್-1ನಲ್ಲಿ ಅಟ್ಯಾಕಿಂಗ್ ಸ್ಪೆಲ್ ಮಾಡಿದ್ದ ಆರ್ಸಿಬಿ ಬೌಲರ್ಸ್, ಫೈನಲ್ಸ್ನಲ್ಲೂ ಅದೇ ಆಟ ಪುನರಾವರ್ತಿಸಿದ್ರೆ. ಗೆಲುವಿನ ಬಾವುಟ ಹಾರಿಸೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ