ಆರ್​​​ಸಿಬಿ ಇನ್ನೂ 3 ಆಟಗಾರರನ್ನು ಉಳಿಸಿಕೊಳ್ಳಬಹುದು; ಲಿಸ್ಟ್​​ನಲ್ಲಿರೋ ಆ ಪ್ಲೇಯರ್ಸ್​ ಯಾರು?

author-image
Ganesh Nachikethu
Updated On
RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ..​ ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?
Advertisment
  • ಭಾರೀ ಕುತೂಹಲ ಮೂಡಿಸಿದ 2025ರ ಐಪಿಎಲ್​ ಲೀಗ್​​​
  • ಮೆಗಾ ಹರಾಜಿಗೆ ಮುನ್ನ ಐಪಿಎಲ್​​ ರೀಟೆನ್ಷನ್​​ ಲಿಸ್ಟ್​ ಔಟ್​​
  • ಆಕ್ಷನ್​​ಗೆ ಆರ್​​ಸಿಬಿ ತಂಡದ ಬಳಿ ಇದೆ ದೊಡ್ಡ ಬ್ರಹ್ಮಾಸ್ತ್ರ..!

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.

ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ.

ಮೂವರು ಉಳಿಸಿಕೊಳ್ಳಲು ಆರ್​​ಸಿಬಿಗೆ ಅವಕಾಶ

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇದೆ. ಎಂದರೆ ಮೆಗಾ ಹರಾಜಿಗೆ ಮುನ್ನ ಆರ್​​ಸಿಬಿ ಮೂವರು ಆಟಗಾರರ ಮೇಲೆ ಆರ್​​ಟಿಎಂ ಕಾರ್ಡ್​ ಬಳಕೆ ಮಾಡಬಹುದು. ಆರ್​​ಟಿಎಂ ಕಾರ್ಡ್​ ಮೂಲಕ ಹರಾಜಿನ ಸಂದರ್ಭದಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದು.

ರೈಟ್‌ ಟು ಮ್ಯಾಚ್‌ ಕಾರ್ಡ್‌ ಆಪ್ಷನ್​​

ಗರಿಷ್ಠ ಆರು ಆಟಗಾರರ ರೀಟೈನ್​​ಗೆ ಅವಕಾಶ ಇತ್ತು. ಅಲ್ಲದೆ ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಕೆ ಮಾಡಬಹುದಾಗಿ ಸಹ ತಿಳಿಸಿತ್ತು. ಯಾವ ಟೀಮ್​ ಎಷ್ಟು ಜನರನ್ನು ರೀಟೈನ್​ ಮಾಡಿಕೊಂಡಿದೆ ಅನ್ನೋದರ ಮೇಲೆ ಆರ್​​ಟಿಎಂ ಕಾರ್ಡ್​​ ಸಂಖ್ಯೆ ಇರಲಿದೆ. ಆರ್‌ಸಿಬಿ ಕೇವಲ ಮೂವರು ಆಟಗಾರರಿಗೆ ಮಾತ್ರ ಮಣೆ ಹಾಕಿದ್ದು, ಇನ್ನೂ ಐಪಿಎಲ್‌ ಮೆಗಾ ಹರಾಜಿನಲ್ಲಿ 3 ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸುವ ಅವಕಾಶ ಹೊಂದಿದೆ.

ಆರ್​​ಸಿಬಿ ಮತ್ತು ಪಂಜಾಬ್‌ ಬಳಿ ಹೆಚ್ಚು ಆರ್‌ಟಿಎಂ

ಪಂಜಾಬ್​​ ಕೇವಲ ಇಬ್ಬರನ್ನು ರೀಟೈನ್​ ಮಾಡಿಕೊಂಡಿದೆ. ಹಾಗಾಗಿ ಈ ತಂಡದ ಬಳಿ ಅತೀ ಹೆಚ್ಚು ಎಂದರೆ 4 ಆರ್​​ಟಿಎಂ ಕಾರ್ಡ್​ಗಳು ಇವೆ. ಡೆಲ್ಲಿ ಕ್ಯಾಪಿಟಲ್ಸ್‌ ಬಳಿ 2, ಆರ್‌ಸಿಬಿ ಬಳಿ 3 ಇದೆ. ಆರ್​​ಸಿಬಿ ಈಗ ಮೂವರು ಆಟಗಾರರಿಗೆ ಆರ್​​ಟಿಎಂ ಕಾರ್ಡ್​ ಬಳಸಬಹುದು. ಇದು ಮೆಗಾ ಹರಾಜಿಗೆ ದೊಡ್ಡ ಬ್ರಹ್ಮಾಸ್ತ್ರ ಆಗಿದೆ.

ಮೂವರನ್ನು ಉಳಿಸಿಕೊಳ್ಳೋದು ಹೇಗೆ?

ಆರ್​ಸಿಬಿ ತಂಡ ಮೊಹಮ್ಮದ್ ಸಿರಾಜ್ ಅವರನ್ನು ಬಿಡುಗಡೆ ಮಾಡಿದೆ. ಹರಾಜಿಗೂ ಮುನ್ನ ಸಿರಾಜ್​ ಮೇಲೆ ಆರ್​ಟಿಎಂ ಆಯ್ಕೆ ಬಳಸಬಹುದು. ಆಗ ಸಿರಾಜ್ ಅವರ ಮೇಲಿನ ಹಕ್ಕು ಆರ್​ಸಿಬಿ ಬಳಿಯೇ ಇರುತ್ತದೆ. ಸಿರಾಜ್​ ಅವರನ್ನು ಯಾರು ಬಿಡ್​ ಮಾಡಿದ್ರೂ ಅಷ್ಟು ದುಡ್ಡು ಕೊಟ್ಟು ಆರ್​​ಸಿಬಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಹೀಗೆ ಫಾಫ್​​, ಮ್ಯಾಕ್ಸ್​ವೆಲ್​​, ಸಿರಾಜ್​ ಅವರನ್ನು ಉಳಿಸಿಕೊಳ್ಳಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment