/newsfirstlive-kannada/media/post_attachments/wp-content/uploads/2024/05/Faf-Duplessis_RCB_1.jpg)
2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಸತತ 6 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​​ನಲ್ಲಿರೋ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಟೀಮ್​​​​​ ಚೆನ್ನೈ ವಿರುದ್ಧ ಮುಂದಿನ ಪಂದ್ಯ ಗೆಲ್ಲಲೇಬೇಕಿದೆ. ಚೆನ್ನೈ ವಿರುದ್ಧ ಕೇವಲ 18 ರನ್​​ನಿಂದ ಗೆದ್ದರೆ ಸಾಕು ಆರ್​​ಸಿಬಿ ಪ್ಲೇ ಆಫ್​ಗೆ ಹೋಗೋದು ಪಕ್ಕಾ. ಈ ಮಧ್ಯೆ ಆರ್​​​ಸಿಬಿ ಕ್ಯಾಪ್ಟನ್​​​​ ಫಾಫ್​ ಡುಪ್ಲೆಸಿಸ್​​ ತಂಡದ ಗೆಲುವಿಗೆ ಕಾರಣ ಯಾರು? ಎಂದು ಬಿಚ್ಚಿಟ್ಟಿದ್ದಾರೆ.
ನಾವು ಬ್ಯಾಕ್​ ಟು ಬ್ಯಾಕ್​ 5 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​ನಲ್ಲಿ ಇದ್ದೇವೆ. ಇದು ನಮಗೆ ಬಹಳ ಸಂತೋಷ ತಂದಿದೆ. ಮೊದಲರ್ಧ ಸೀಸನ್​ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡು ವಿಭಾಗದಲ್ಲೂ ಫೇಲ್ಯೂರ್​ ಆಗಿದ್ದೆವು. ಆದರೆ, ಒಬ್ಬ ಆಟಗಾರನ ಆಗಮನದಿಂದ ಆರ್​​ಸಿಬಿ ಗೆದ್ದು ಪ್ಲೇ ಆಫ್​ ರೇಸ್​ನಲ್ಲಿದೆ ಎಂದರು ಫಾಫ್​​.
/newsfirstlive-kannada/media/post_attachments/wp-content/uploads/2024/05/Swapnil-Singh.jpg)
ಸ್ವಪ್ನಿಲ್​​ ಸಿಂಗ್​ ಆರ್​​ಸಿಬಿ ತಂಡದ ಯುವ ಆಟಗಾರ. ಈತ ಬಂದ ಮೇಲೆ ಆರ್​​ಸಿಬಿ ಸತತ 5 ಪಂದ್ಯ ಗೆದ್ದಿದೆ. ಅವರ ಬೌಲಿಂಗ್​​ನಿಂದಲೇ ತಂಡಕ್ಕೆ ಹೆಚ್ಚಿನ ಶಕ್ತಿ ಸಿಕ್ಕಿದೆ. ಸ್ವಪ್ನಿಲ್​ ಆರ್​​ಸಿಬಿ ತಂಡದಲ್ಲಿರೋದು ನಮ್ಮ ಅದೃಷ್ಟ. ಇವರ ಜತೆಗೆ ದಯಾಳ್​​ ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us