ಕ್ಯಾಪ್ಟನ್ ರಜತ್ ಪಾಟೀದಾರ್​ಗೆ ಬಿಗ್ ಶಾಕ್ ಕೊಟ್ಟ ಭುವನೇಶ್ವರ್​ ಕುಮಾರ್..!

author-image
Ganesh
Updated On
ಕ್ಯಾಪ್ಟನ್ ರಜತ್ ಪಾಟೀದಾರ್​ಗೆ ಬಿಗ್ ಶಾಕ್ ಕೊಟ್ಟ ಭುವನೇಶ್ವರ್​ ಕುಮಾರ್..!
Advertisment
  • ನಾಳೆ ಆರ್​ಸಿಬಿ ಮೂರನೇ ಪಂದ್ಯ ಆಡಲಿದೆ
  • ಗುಜರಾತ್​ ವಿರುದ್ಧ ಬೆಂಗಳೂರಲ್ಲೇ ಪಂದ್ಯ
  • ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಭರ್ಜರಿ ತಾಲೀಮು

ಮೊದಲ 2 ಪಂದ್ಯ ಗೆದ್ದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​ನಲ್ಲಿ ಶುಭಾರಂಭ ಮಾಡಿದೆ. 3ನೇ ಪಂದ್ಯವನ್ನಾಡಲು ಬೆಂಗಳೂರಿಗೆ ಬಂದಿರುವ ಆರ್​​ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ.

ಅಭ್ಯಾಸದ ವೇಳೆ ವೇಗಿ ಭುವನೇಶ್ವರ್​ ಕುಮಾರ್​ ಕರಾರುವಕ್​ ಯಾರ್ಕರ್​ ಹಾಕಿದ್ದಾರೆ. ಭುವನೇಶ್ವರ್​ ಎಸೆತಕ್ಕೆ ಸ್ಟ್ರೈಕ್​ನಲ್ಲಿದ್ದ ಕ್ಯಾಪ್ಟನ್​ ರಜತ್​ ಪಟಿದಾರ್​​ ಸ್ಟನ್​ ಆಗಿದ್ದಾರೆ. ಆರ್​ಸಿಬಿ ನಾಳೆ ತನ್ನ ಮೂರನೇ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ: ಹ್ಯಾಟ್ರಿಕ್​ ಸೋಲಿನಿಂದ ಮುಂಬೈ ಇಂಡಿಯನ್ಸ್ ಪಾರು​.. ಹಾರ್ದಿಕ್​ ಪಾಂಡ್ಯ ಪಡೆಗೆ ಮೊದಲ ಗೆಲುವು

ಗುಜರಾತ್ ಟೈಟನ್ಸ್ ವಿರುದ್ಧ ಆರ್​​ಸಿಬಿ ಸೆಣಸಾಟ ನಡೆಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7.30 ರಿಂದ ಪಂದ್ಯ ಆರಂಭವಾಗಲಿದೆ. ಅದಕ್ಕಾಗಿ ಆರ್​ಸಿಬಿ ಭರ್ಜರಿ ತಯಾರಿ ನಡೆಸಿದೆ. ಎರಡು ಪಂದ್ಯಗಳನ್ನು ಆಡಿರುವ ಆರ್​ಸಿಬಿ ಎರಡಲ್ಲೂ ಗೆದ್ದುಕೊಂಡಿರುವ ಆರ್​ಸಿಬಿ ಪಾಯಿಂಟ್ಸ್​ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಒಂದು ಪಂದ್ಯದಲ್ಲಿ ಸೋತು, ಇನ್ನೊಂದು ಪಂದ್ಯದಲ್ಲಿ ಗೆದ್ದಿರುವ ಗುಜರಾತ್ ಟೈಟನ್ಸ್ ಪಾಯಿಂಟ್ಸ್​ ಟೇಬಲ್​​ನಲ್ಲಿ 4ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: 4, 4, 4, 4, 6, 6, 6, 6; ರೋಹಿತ್ ಶರ್ಮಾ ಅದೇ ರಾಗ, ಅದೇ ಹಾಡು.. ಭರ್ಜರಿ ಅರ್ಧಶತಕ ಸಿಡಿಸಿದ ರಯಾನ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment