/newsfirstlive-kannada/media/post_attachments/wp-content/uploads/2025/06/Rajat_Patidar.jpg)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತೂ ಫೈನಲ್ನಲ್ಲಿ ಗೆದ್ದು 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ. ಪಂಜಾಬ್ ವಿರುದ್ಧ ಕೇವಲ 6 ರನ್ಗಳಿಂದ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಪಂದ್ಯದ ಬಳಿಕ ಮಾತನಾಡಿದ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಯಾರು ಉತ್ತಮವಾಗಿ ಪ್ರದರ್ಶನ ನೀಡಿದರು ಎಂದು ಮಾತನಾಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಅವರು, ಇಂದು ಅತ್ಯಂತ ವಿಶೇಷವಾದ ದಿನ. ನನಗೆ, ವಿರಾಟ್ ಕೊಹ್ಲಿ ಹಾಗೂ ಹಲವು ವರ್ಷಗಳಿಂದ ಬೆಂಬಲ ನೀಡಿದ ಎಲ್ಲ ಫ್ಯಾನ್ಸ್ಗೆ ತುಂಬಾ ತುಂಬಾ ವಿಶೇಷವಾಗಿದೆ. ಟ್ರೋಫಿಗೆ ಅಭಿಮಾನಿಗಳ ಕೊಟ್ಟ ಬೆಂಬಲ ಮುಖ್ಯ. ಹೀಗಾಗಿ ಈ ಸಂಭ್ರಮಕ್ಕೆ ಅವರು ಅರ್ಹರು ಎಂದು ಹೇಳಿದ್ದಾರೆ.
ಇದನ್ನೂ ಓದಿ:RCB ಫೈನಲ್ನಲ್ಲಿ ಗೆದ್ದರೆ ಎಷ್ಟು ಕೋಟಿ ದುಡ್ಡು ಸಿಗುತ್ತೆ..? ರನ್ನರ್ ಅಪ್ಗೂ ಭಾರೀ ಹಣ!
ಕ್ವಾಲಿಫೈಯರ್-1ರಲ್ಲಿ ಗೆದ್ದ ಮೇಲೆ ಫೈನಲ್ನಲ್ಲಿ 190 ರನ್ ಗಳಿಸಿದರೆ ಅತ್ಯುತ್ತಮ ರನ್ಗಳು ಎಂದು ನಾವು ಮೊದಲೇ ಭಾವಿಸಿದ್ದೇವು. ಅದರಂತೆ ಪಂದ್ಯದಲ್ಲಿ ಬೌಲಿಂಗ್ ಪ್ರದರ್ಶನ ಅದ್ಭುತವಾಗಿ ಮೂಡಿ ಬಂತು. ಕೃನಾಲ್ ಪಾಂಡ್ಯ ವಿಕೆಟ್ ಟೇಕರ್ ಆಟಗಾರ. ಯಾವಾಗ ನಮಗೆ ಒತ್ತಡ ಹೆಚ್ಚಾಯಿತೋ ಅವಾಗ ಕೃನಾಲ್ ಪಾಂಡ್ಯ ಕೈಗೆ ಬಾಲ್ ನೀಡಿದೆ. ಇದರ ಜೊತೆ ಸುಯಶ್ ಶರ್ಮಾ ಈ ಸೀಸನ್ನಲ್ಲಿ ಒಳ್ಳೆಯ ಬೌಲಿಂಗ್ ಮಾಡಿದರು ಎಂದು ಹೇಳಿದರು.
ಭುವಿ, ಯಶ್, ಹ್ಯಾಜಲ್ವುಡ್ ಹಾಗೂ ರೊಮೊರಿಯೋ ಶೆಫರ್ಡ್ ಎಲ್ಲರೂ ಎದುರಾಳಿ ಮೇಲೆ ಪರಾಕ್ರಮ ತೋರಿಸಿದರು. ಈ ಎಲ್ಲರೂ ಇರುವ ತಂಡದ ನಾಯಕತ್ವ ವಹಿಸಿರುವುದು ನನಗೆ ಒಂದು ಉತ್ತಮ ಅವಕಾಶ. ಇಲ್ಲಿ ನಾನು ಸಾಕಷ್ಟು ಕಲಿತುಕೊಂಡೆ. ತಂಡಕ್ಕೆ ಬೆಂಬಲ ಕೊಟ್ಟ ಪ್ರತಿಯೊಬ್ಬರೂ ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ, ಆಟಗಾರರು ಹಾಗೂ ಪ್ರತಿ ಅಭಿಮಾನಿಗೂ ಧನ್ಯವಾದಗಳು. ಈಗ ಮತ್ತೆ ಅಭಿಮಾನಿಗಳಿಗೆ ನಾನು ಒಂದೇ ಒಂದು ಮಾತು ಹೇಳುತ್ತೇನೆ- ಈ ಸಲಾ ಕಪ್ ನಮ್ದು ಅಂತ ರಜತ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ