RCB ಬೌಲಿಂಗ್ ಓಕೆ.. ಬ್ಯಾಟಿಂಗ್​ನಲ್ಲಿ ಇಂದು ಕ್ಯಾಪ್ಟನ್​, ವಿಕೆಟ್​ ಕೀಪರ್ ಸಿಡಿದೇಳಬೇಕು!

author-image
Bheemappa
Updated On
RCB ಬೌಲಿಂಗ್ ಓಕೆ.. ಬ್ಯಾಟಿಂಗ್​ನಲ್ಲಿ ಇಂದು ಕ್ಯಾಪ್ಟನ್​, ವಿಕೆಟ್​ ಕೀಪರ್ ಸಿಡಿದೇಳಬೇಕು!
Advertisment
  • ಮುಂದಿನ 2 ಪಂದ್ಯಗಳನ್ನ ಗೆದ್ದರೇ ಕಪ್ ಗೆಲ್ಲೋದು ದೊಡ್ಡ ವಿಷ್ಯವಲ್ಲ
  • ವಿರಾಟ್ ಕೊಹ್ಲಿ ಬ್ಯಾ ಟಿಂಗ್ ಮೇಲೆ ಹೆಚ್ಚು ಡಿಪೆಂಡ್ ಆದ ಆರ್​ಸಿಬಿ
  • ಆರ್​ಸಿಬಿ ಕ್ಯಾಂಪ್​ನಲ್ಲಿನ ಸಮಸ್ಯೆಗಳು, ಗೆಲುವಿಗೆ ಅಡ್ಡಿ ಆಗುತ್ತವೆಯಾ?

ಪ್ಲೇ ಆಫ್​​​ಗೂ ಮುನ್ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ, ಕೆಲ ಸಮಸ್ಯೆಗಳು ಶುರುವಾಗಿವೆ. ಬೌಲಿಂಗ್​ನಲ್ಲಿ ಆರ್​ಸಿಬಿ ಅತ್ಯುತ್ತಮ ಅಟ್ಯಾಕ್​​ ಹೊಂದಿದೆ. ಆದ್ರೆ, ಬ್ಯಾಟಿಂಗ್​ನಲ್ಲಿ ಬೆಂಗಳೂರು ತಂಡಕ್ಕೆ ಇನ್​ಕನ್ಸಿಸ್ಟೆನ್ಸಿ ಕಾಡ್ತಿದೆ. ಟೂರ್ನಿಯುದ್ದಕ್ಕೂ ರನ್​ಗಳಿಸುತ್ತಿರುವ ಕಿಂಗ್ ಕೊಹ್ಲಿ ಮೇಲೆ, ಆರ್​ಸಿಬಿ ಹೆಚ್ಚು ಡಿಪೆಂಡ್ ಆಗಿದೆ. ತಂಡದಲ್ಲಿ ಸೂಪರ್​ಸ್ಟಾರ್ ಬ್ಯಾಟರ್ಸ್​ ಇದ್ದರೂ, ಇಲ್ಲದಂತಾಗಿದೆ.

ಲೀಗ್​​ ಸ್ಟೇಜ್​​ನಲ್ಲಿ 12 ಪಂದ್ಯಗಳನ್ನ ಯಶಸ್ವಿಯಾಗಿ ಮುಗಿಸಿರುವ ಆರ್​ಸಿಬಿಗೆ, ಉಳಿದೆರೆಡು ಪಂದ್ಯಗಳು ಅತ್ಯಂತ ಮಹತ್ವದಾಗಿದೆ. ಈ 2 ಪಂದ್ಯಗಳನ್ನ ಗೆದ್ರೆ, ಆರ್​ಸಿಬಿ ಕಪ್ ಗೆದ್ದಂತೆ. ಹಾಗಾಗಿ ಬೆಂಗಳೂರು ತಂಡ, ಹೈದ್ರಾಬಾದ್ ಮತ್ತು ಲಕ್ನೋ ತಂಡಗಳ ವಿರುದ್ಧ ಗೆಲ್ಲಲೇಬೇಕು ಅಂತ ಹೆಚ್ಚು ತಲೆ ಕೆಡಿಸಿಕೊಂಡಿದೆ. ಆದ್ರೆ ಆರ್​ಸಿಬಿ ಕ್ಯಾಂಪ್​ನಲ್ಲಿರುವ ಸಮಸ್ಯೆಗಳು, ತಂಡದ ಗೆಲುವಿಗೆ ಅಡ್ಡಿಯಾಗುತ್ತಿದೆ. ಎಸ್​​ಆರ್​ಹೆಚ್​​ ಪಂದ್ಯಕ್ಕೂ ಮುನ್ನ ಈ ಪ್ರಾಬ್ಲಂ ಸಾಲ್ವ್ ಆದ್ರೆ, ಬೆಂಗಳೂರು ತಂಡವನ್ನ ಹಿಡಿರೋರೇ ಇಲ್ಲ.

publive-image

ವಿರಾಟ್ ಕೊಹ್ಲಿ- 11 ಪಂದ್ಯ- 505 ರನ್ಸ್

ವಿರಾಟ್​​​ ಕೊಹ್ಲಿ, ಆರ್​ಸಿಬಿಯ ಬ್ಯಾಟಿಂಗ್ ಸೂಪರ್​ಸ್ಟಾರ್. ಈ ಸೀಸನ್​ನಲ್ಲಿ ಕೊಹ್ಲಿ ಕನ್ಸಿಸ್ಟೆಂಟ್ ಬ್ಯಾಟಿಂಗ್ ಜೊತೆಗೆ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡುತ್ತಾ ಬಂದಿದ್ದಾರೆ. ಈಗಾಗಲೇ ಆಡಿರೋ 11 ಪಂದ್ಯಗಳಲ್ಲಿ 500ಕ್ಕಿಂತ ಹೆಚ್ಚು ರನ್​ಗಳಿಸಿರುವ ಕೊಹ್ಲಿ ಮೇಲೆ, ಆರ್​ಸಿಬಿ ಹೆಚ್ಚು ಡಿಪೆಂಡ್ ಆಡಗಿದೆ. ಇದೇ ನೋಡಿ ಆರ್​ಸಿಬಿಗೆ, ಬಿಗ್ ಸೆಟ್​ಬ್ಯಾಕ್ ಆಗಿರೋದು. ಕೊಹ್ಲಿ ಹೊರತುಪಡಿಸಿದ್ರೆ ಉಳಿದ್ಯಾವ ಬ್ಯಾಟರ್ಸ್​, ಈ ಟೂರ್ನಿಯಲ್ಲಿ ಕನ್ಸಿಸ್ಟೆನ್ಸಿ ತೋರಲಿಲ್ಲ. ಇದೇ ಆರ್​ಸಿಬಿ ಮ್ಯಾನೇಜ್ಮೆಂಟ್​​ಗೆ ದೊಡ್ಡ ತಲೆನೋವಾಗಿರೋದು.

ರಜತ್ ಪಟಿದಾರ್- 11 ಪಂದ್ಯ- 239 ರನ್ಸ್

ಕ್ಯಾಪ್ಟನ್ ರಜತ್ ಪಟಿದಾರ್, ಆರಂಭದಲ್ಲಿ ಅಗ್ರೆಸಿವ್ ಬ್ಯಾಟಿಂಗ್ ನಡೆಸಿದ್ರು. ತಂಡಕ್ಕೆ ವೇಗವಾಗಿ ರನ್ ಕಾಂಟ್ರಿಬ್ಯೂಟ್ ಕೂಡ ಮಾಡಿದರು. ಆದ್ರೆ ಇದಕ್ಕಿದಂತೆ ಪಟಿದಾರ್​ ಬ್ಯಾಟ್​​, ಸೈಲೆಂಟ್ ಆಗಿಬಿಡ್ತು. ಆರ್​ಸಿಬಿ ನಾಯಕ, ರನ್​ಗಳಿಸೋಕೂ ಪರದಾಡಿದರು. ಒಂದೆರೆಡು ಪಂದ್ಯಗಳಲ್ಲಿ ಬಿಟ್ರೆ, ಪಟಿದಾರ್​​ ಕಾಣಿಕೆ ಏನೇನೂ ಇಲ್ಲ. ಸದ್ಯ ಟಾಪ್ ಆರ್ಡರ್​ನಲ್ಲಿ ಪಡಿಕ್ಕಲ್​​ ಇಲ್ಲ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಪಟಿದಾರ್, ತಂಡಕ್ಕೆ ರನ್​ ಕಾಣಿಕೆ ನೀಡಲೇಬೇಕು. ಇಲ್ದಿದ್ರೆ ಆರ್​ಸಿಬಿಗೆ ಸಂಕಷ್ಟ ಎದುರಾಗಬಹುದು.​​​​

ಟಿಮ್ ಡೇವಿಡ್- 11 ಪಂದ್ಯ- 186 ರನ್ಸ್

ಬೆಂಗಳೂರು ತಂಡದ ಆಪದ್ಬಾಂಧವ ಟಿಮ್ ಡೇವಿಡ್.! ಟಾಪ್ ಮತ್ತು ಮಿಡಲ್ ಆರ್ಡರ್ ಕೈಕೊಟ್ಟಾಗಲೆಲ್ಲ, ಟಿಮ್ ಡೇವಿಡ್ ತಂಡದ ಕೈಹಿಡಿಯುತ್ತಾರೆ. ಮ್ಯಾಚ್​ ಫಿನಿಷರ್ ಮತ್ತು ಗೇಮ್​ ಚೇಂಜರ್​ ಆಗಿ ಟಿಮ್, ತಂಡಕ್ಕೆ ನೆರವಾಗಿದ್ದಾರೆ. ಆಡಿರೋ 11 ಪಂದ್ಯಗಳಲ್ಲಿ ಆಸಿಸ್ ಬಿಗ್​ಹಿಟ್ಟರ್ 186 ರನ್​ಗಳಿಸಿದ್ದಾರೆ. ಹೆಚ್ಚು ಕಡಿಮೆ 200ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ ಟಿಮ್ ಡೇವಿಡ್ ಬ್ಯಾಟ್ ಬೀಸಿದ್ದಾರೆ.

'ಏಕ್ ದಿನ್ ಕಾ ಸುಲ್ತಾನ್' ಆದ ಆರ್​ಸಿಬಿಯ ಕೆಲ ಬ್ಯಾಟರ್ಸ್..!

ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜಿತೇಶ್ ಶರ್ಮಾ, ಆರ್​ಸಿಬಿಯ ಭರವಸೆಯ ಬ್ಯಾಟ್ಸ್​ಮನ್. ಆದ್ರೆ ಜಿತೇಶ್, ಯಾವಾಗ ಆಡ್ತಾರೋ ಯಾವಾಗ ಆಡಲ್ವೋ ಗೊತ್ತಿಲ್ಲ. ಸಿಕ್ಕ ಅವಕಾಶಗಳನ್ನ ಜಿತೇಶ್ ಕೈಚೆಲ್ಲುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ 19 ಎಸೆತಗಳಲ್ಲಿ ಅಜೇಯ 40 ರನ್​ಗಳಿಸಿದ್ದು ಬಿಟ್ರೆ, ಜಿತೇಶ್​ ಇನ್ಯಾವ ಇನ್ನಿಂಗ್ಸ್​ ಕೂಡ ಆಡಲಿಲ್ಲ. ಉಳಿದಂತೆ ಜೇಕಬ್ ಬೆಥಲ್, ಲಿವಿಂಗ್​ಸ್ಟನ್ ಎಲ್ಲರೂ ತಲಾ ಒಂದೊಂದು ಮ್ಯಾಚ್​ನಲ್ಲಿ ಮಿಂಚಿ ಮರೆಯಾಗಿದ್ದಾರೆ. ರೊಮಾರಿಯೋ ಶೆಫರ್ಡ್​ ಹೊಸ ಭರವಸೆಯಾಗಿದ್ದಾರೆ.

ಇದನ್ನೂ ಓದಿ:RCBಗೆ ಸುವರ್ಣಾವಕಾಶ; ಟಾಪ್​ ಸ್ಥಾನ ಬೇಕಂದ್ರೆ ಈ ಪಂದ್ಯಗಳು ಇಂಪಾರ್ಟೆಂಟ್​!

publive-image

ಸಮಾಧಾನ ತಂದ ಬೌಲರ್​ಗಳ ಪರ್ಫಾಮೆನ್ಸ್..!

ಬೌಲಿಂಗ್​ನಲ್ಲಿ ಆರ್​ಸಿಬಿ ಬ್ಯಾಲೆನ್ಸ್​ಡ್ ಆಗಿದೆ. ಅನುಭವಿ ವೇಗಿ ಜೋಷ್ ಹೇಝಲ್​ವುಡ್ ಇಲ್ಲದಿದ್ರೂ, ಆರ್​ಸಿಬಿ ಬೌಲಿಂಗ್ ಅಟ್ಯಾಕ್ ಸ್ಟೇಬಲ್ ಆಗಿ ಕಾಣ್ತಿದೆ. ಎಡಗೈ ಸ್ಪಿನ್ನರ್ ಕೃನಾಲ್ ಪಾಂಡ್ಯ 14 ವಿಕೆಟ್, ಭುವನೇಶ್ವರ್ ಕುಮಾರ್ 12 ವಿಕೆಟ್ ಮತ್ತು ಯಶ್ ದಯಾಳ್ ಟೂರ್ನಿಯಲ್ಲಿ 10 ವಿಕೆಟ್ ಪಡೆದು, ಆರ್​ಸಿಬಿಯ ಮ್ಯಾಚ್ ವಿನ್ನರ್ಸ್ ಆಗಿದ್ದಾರೆ. ಪವರ್​ ಪ್ಲೇನಲ್ಲಿ ಆರ್​ಸಿಬಿ ಬೌಲರ್ಸ್​ ಎಫೆಕ್ಟೀವ್ ಆಗಿರೋದು, ಕ್ಯಾಪ್ಟನ್ ಮತ್ತು ಕೋಚ್​ಗೆ ಸಮಾಧಾನ ತರಿಸಿದೆ.

ಈ ಸೀಸನ್​ನಲ್ಲಿ ಆರ್​ಸಿಬಿ ಒಳ್ಳೆ ತಂಡವನ್ನ ಆಯ್ಕೆ ಮಾಡಿದೆ. ಇದುವರೆಗೂ 16 ಆಟಗಾರರನ್ನ ಮೈದಾನಕ್ಕಿಳಿಸಿರುವ ಬೆಂಗಳೂರು ತಂಡ, ಬ್ಯಾಟಿಂಗ್​ನಲ್ಲಿ ಮಾತ್ರ ಸ್ವಲ್ಪ ಡಲ್ ಆಗಿದೆ. ಉಳಿದಂತೆ ಬೆಂಗಳೂರು ತಂಡ ಎಲ್ಲಾ ಬಾಕ್ಸ್​ಗಳನ್ನ ಟಿಕ್ ಮಾಡಿ, ಬಲಿಷ್ಠವಾಗಿ ಕಾಣುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment