/newsfirstlive-kannada/media/post_attachments/wp-content/uploads/2025/04/RCB_RAJAT.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ರಜತ್ ಪಾಟಿದಾರ್ ಕೂಡ ಕೈಕೊಟ್ಟಿರುವುದು ಆರ್ಸಿಬಿ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ. ತಂಡದ ಸ್ಥಿತಿ ನೋಡಿಕೊಂಡು ಕ್ಯಾಪ್ಟನ್ ಬ್ಯಾಟಿಂಗ್ ಮಾಡುತ್ತಾರೆ ಎಂದರೆ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಎಲ್ಬಿಗೆ ಔಟ್ ಆಗಿರುವುದು ತಂಡಕ್ಕೆ ತೀವ್ರ ಸಂಕಷ್ಟವಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್ಸಿಬಿ ತಂಡದ ಬ್ಯಾಟ್ಸ್ಮನ್ಗಳ ವಿಕೆಟ್ ಬ್ಯಾಕ್ ಟು ಬ್ಯಾಕ್ ಉದುರುತ್ತಿವೆ. ತಂಡಕ್ಕೆ ಆಶ್ರಯವಾಗಿ ಬ್ಯಾಟಿಂಗ್ ಮಾಡುತ್ತಾರೆ ಎನ್ನಲಾಗಿದ್ದ ನಾಯಕ ರಜತ್ ಪಾಟಿದಾರ್ ಕೂಡ ಬೇಗನೇ ವಿಕೆಟ್ ಒಪ್ಪಿಸಿದ್ದಾರೆ. ಗುಜರಾತ್ ಬೌಲರ್ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: ತವರಲ್ಲಿ RCBಗೆ ಭಾರೀ ಅವಮಾನ.. ಸ್ಫೋಟಕ ಬ್ಯಾಟರ್ ಸಾಲ್ಟ್ ಕ್ಲೀನ್ ಬೋಲ್ಡ್
ವಿರಾಟ್ ಕೊಹ್ಲಿ, ಪಡಿಕ್ಕಲ್ ಹಾಗೂ ಫಿಲ್ ಸಾಲ್ಟ್ ವಿಕೆಟ್ ಹೋದ ಮೇಲೆ ತಂಡದ ಸ್ಥಿತಿ ನೋಡಿಕೊಂಡು ರಜತ್ ಬ್ಯಾಟ್ ಬೀಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ 12 ಎಸೆತಗಳಲ್ಲಿ 2 ಬೌಂಡರಿಯಿಂದ 12 ರನ್ ಗಳಿಸಿ ಆಡುವಾಗ ಗುಜರಾತ್ ಬೌಲರ್ ಇಶಾಂತ್ ಶರ್ಮಾ ಎಲ್ಬಿ ಬಲೆಗೆ ಕೆಡವಿದ್ದಾರೆ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರಜತ್ ಪಾಟಿದಾರ್ ಗುಜರಾತ್ ವಿರುದ್ಧ ಬೇಗನೇ ವಿಕೆಟ್ ಒಪ್ಪಿಸಿದ್ದಾರೆ.
ವಿರಾಟ್ ಕೊಹ್ಲಿ ಕೇವಲ 7 ರನ್, ದೇವದತ್ ಪಡಿಕ್ಕಲ್ 4, ಸ್ಫೋಟಕ ಬ್ಯಾಟ್ಸ್ಮನ್ ಸಾಲ್ಟ್ 14, ಜಿತೇಶ್ ಶರ್ಮಾ 33 ರನ್ಗಳಿಗೆ ಔಟ್ ಆಗಿದ್ದಾರೆ. ಗುಜರಾತ್ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದು ಸಂಭ್ರಮಿಸಿದರು. ಸದ್ಯ ಆರ್ಸಿಬಿ 13.3 ಓವರ್ನಲ್ಲಿ 5 ವಿಕೆಟ್ಗೆ 97 ರನ್ಗಳಿಂದ ಬ್ಯಾಟಿಂಗ್ ಮಾಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ