ಟ್ರೋಫಿ ಗೆಲ್ಲಿಸಿಕೊಟ್ಟ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ.. ಝೀರೋ ಟು ಹೀರೋ..!

author-image
Ganesh
Updated On
ಟ್ರೋಫಿ ಗೆಲ್ಲಿಸಿಕೊಟ್ಟ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ.. ಝೀರೋ ಟು ಹೀರೋ..!
Advertisment
  • ಅನ್​ಸೋಲ್ಡ್​ ರಜತ್ ಪಾಟೀದಾರ್​ ನಾಯಕನಾಗಿದ್ದೇಗೆ..?
  • 2022ರಲ್ಲಿ RCBಗಾಗಿ ಮದುವೆ ಮುಂದೂಡಿದ್ದ ರಜತ್
  • ನಾಯಕನಾಗಿ ಅಪರೂಪದ ದಾಖಲೆ ಬರೆದ ರಜತ್

ರಾಯಲ್​ ಚಾಲೆಂಜರ್ಸ್​ ಬೆಂಗಳೂರು. IPL​ನ ಮೋಸ್ಟ್​ ಫ್ಯಾನ್ ಫಾಲೋಯಿಂಗ್ ಟೀಮ್. ಇಂಥ ಟೀಮ್​​ಗೆ ರಜತ್ ಪಟಿದಾರ್​​ ನಾಯಕನಾಗೋದು ಇರಲಿ, ತಂಡದಲ್ಲಿ ಇರ್ತಾನೋ ಇಲ್ವೋ ಅನ್ನೋದು ಸಹ ಗೊತ್ತಿರಲಿಲ್ಲ. ಆರ್​ಸಿಬಿಯ ನಾಯಕನಾಗಿ 18 ವರ್ಷಗಳ ಕನಸು ನನಸಾಗಿಸಿದ್ದಾರೆ. ಅದರ ಹಿಂದೆ ತ್ಯಾಗ, ಪರಿಶ್ರಮದ ಕಥೆಯಿದೆ.

18 ವರ್ಷಗಳಿಂದ ಆರ್​ಸಿಬಿ ಕಂಡಿದ್ದು ಜಸ್ಟ್​ ದಿಗ್ಗಜ ಆಟಗಾರನ್ನು ಮಾತ್ರವಲ್ಲ. ರಾಹುಲ್​ ದ್ರಾವಿಡ್​, ಅನಿಲ್​ ಕುಂಬ್ಳೆ, ವಿರಾಟ್​ ಕೊಹ್ಲಿರಂಥ ದಿಗ್ಗಜ ನಾಯಕರನ್ನು ಕಂಡಿತ್ತು. 8ನೇ ನಾಯಕನಾಗಿ ಆರ್​ಸಿಬಿ ಪಟ್ಟಾಭಿಷೇಕ ವಹಿಸಿಕೊಂಡ ರಜತ್​​ ಪಟಿದಾರ್​, ನಿಜಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡವನ್ನು ಯಶಸ್ವಿಯಾಗಿ ಮುನ್ನಡೆಸ್ತಾರಾ ಎಂಬ ಅನುಮಾನ ಕಾಡಿತ್ತು. ಕೊಹ್ಲಿಗೆ ನಾಯಕತ್ವದ ಪಟ್ಟ ನೀಡಬೇಕಿತ್ತು ಎಂಬ ಕೂಗು ಇತ್ತು. ಆದ್ರೀಗ ಪಟಿದಾರ್​ಗೆ ಪಟ್ಟ ಕಟ್ಟಿರುವ ನಿರ್ಧಾರಕ್ಕೆ ಫಲ ಸಿಕ್ಕಿದೆ. ನಾಯಕನಾಗಿ ಮೊದಲ ಸೀಸನ್​ನಲ್ಲೇ ಟ್ರೋಫಿ ಗೆಲ್ಲಿಸಿಕೊಟ್ಟ ಪಟಿದಾರ್, ಜರ್ನಿಯೇ ಆಸಕ್ತಿದಾಯಕ.

ಇದನ್ನೂ ಓದಿ: ರಸ್ತೆಯಲ್ಲಿ ಮಲಗಿ ರಾತ್ರಿ ಕಳೆದ ಸ್ಪೀಕರ್ ಯು.ಟಿ ಖಾದರ್; ಹಜ್ ಪ್ರವಾಸದಲ್ಲಿ ವಿಶೇಷ ಪ್ರಾರ್ಥನೆ

publive-image

2021ರಲ್ಲಿ RCBಗೆ ಎಂಟ್ರಿ..

ರಜತ್​ ಪಟೀದಾರ್​ ಐಪಿಎಲ್​ ಜರ್ನಿ ಆರಂಭವಾಗಿದ್ದೇ ಆರ್​​ಸಿಬಿಯಲ್ಲಿ. 2021ರ ಮೆಗಾ ಆಕ್ಷನ್​ನಲ್ಲಿ ಆರ್​​ಸಿಬಿ ಸೇರಿದ್ದ ಪಟಿದಾರ್​, ಆ ಸೀಸನ್​​ನಲ್ಲಿ ಸಿಕ್ಕ 4 ಪಂದ್ಯಗಳಲ್ಲಿ ಫ್ಲಾಪ್​ ಶೋ ನೀಡಿದ್ರು. ಪರಿಣಾಮ ತಂಡದಿಂದ ರಿಲೀಸ್ ಮಾಡ್ತು. ಅದೃಷ್ಟ ಹೇಗಿತ್ತು ಅಂದ್ರೆ ಅನ್​ಸೋಲ್ಡ್​ ಆದ ರಜತ್​ಗೆ ಮತ್ತೊಂದು ಚಾನ್ಸ್​ ಸಿಗುವಂತಾಯ್ತು.

2022ರ ಮೆಗಾ ಹರಾಜಿನಲ್ಲಿ​ ಅನ್​​ಸೋಲ್ಡ್​ ಆಗಿದ್ದ ಪಟಿದಾರ್​​​​​​​​, ಐಪಿಎಲ್​ಗೆ ಮರು ಎಂಟ್ರಿ ನೀಡುವ ನಿರೀಕ್ಷೆಯೇ ಇರಲಿಲ್ಲ. ವಿಧಿ ಆಡಿದ ಆಟವೇ ಬೇರೆಯಾಗಿತ್ತು. ಲವ್​ನೀತ್​ ಸಿಸೋಡಿಯಾ ಇಂಜುರಿಯಿಂದ ಬದಲಿ ಆಟಗಾರನಾಗಿ ಆರ್​ಸಿಬಿಗೆ ರೀ ಎಂಟ್ರಿ ನೀಡಿದ್ರು. ಅದ್ಭುತ ಪ್ರದರ್ಶನದಿಂದ ಆರ್‌ಸಿಬಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ರಜತ್​, ಅಂದಿನಿಂದ ಹಿಂತಿರುಗಿ ನೋಡಿದಿಲ್ಲ.

ವಿವಾಹವೇ ಪೋಸ್ಟ್​ಪೋನ್​

ಅನ್​​ಸೋಲ್ಡ್ ಆಗಿದ್ದ ರಜತ್ 2022ರ ಮೇ9 ರಂದು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆರ್​​ಸಿಬಿ ಮ್ಯಾನೇಜ್​ಮೆಂಟ್​​ನ ಒಂದು ಕರೆಯಿಂದ ಮದುವೆಯನ್ನೇ ಪೋಸ್ಟ್ ಫೋನ್ ಮಾಡಿದ ರಜತ್​, ಸಿಕ್ಕ ಗೋಲ್ಡನ್​ ಚಾನ್ಸ್​ ಎರಡೂ ಕೈಯಿಂದ ಬಾಚಿಕೊಂಡ್ರು. ಆ ಸೀಸನ್​ನಲ್ಲಿ ಚಾನ್ಸ್​ ಗಿಟ್ಟಿಸಿಕೊಂಡ ರಜತ್​, ಲಕ್ನೋ ಎದುರಿನ ಎಲಿಮಿನೇಟರ್‌ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇದರಿಂದ ​ಆರ್​​ಸಿಬಿ ಮ್ಯಾನೇಜ್​ಮೆಂಟ್ ನಂಬಿಕೆ ಉಳಿಸಿಕೊಂಡಿದ್ದ ಪಟಿದಾರ್​, 2023ರಲ್ಲಿ ದುರಾದೃಷ್ಟವಶಾತ್​ ಇಂಜುರಿಯಿಂದಾಗಿ ಟೂರ್ನಿಯಿಂದಲೇ ಹೊರಬಿದ್ದರು ಬ್ಯಾಕ್ ಮಾಡಿತ್ತು.

ಇದನ್ನೂ ಓದಿ: NEET-PG 2025 ಪರೀಕ್ಷೆಗೆ ಹೊಸ ದಿನಾಂಕ ನಿಗದಿ; ಮಹತ್ವದ ಬದಲಾವಣೆಗಳು ಪ್ರಕಟ

publive-image

2024ರಲ್ಲಿ ಕಮ್​​ಬ್ಯಾಕ್​..

2024ರ ಐಪಿಎಲ್​ಗೆ ಕಮ್​ಬ್ಯಾಕ್​ ಮಾಡಿದ್ದ ರಜತ್​ ಪಾಟಿದಾರ್, ಆ ಸೀಸನ್​​ನಲ್ಲಿ ಸಾಲಿಡ್​ ಆಟವಾಡಿದ್ದರು. ಮಿಡಲ್​ ಆರ್ಡರ್​​ನಲ್ಲಿ ಬೊಂಬಾಟ್​ ಬ್ಯಾಟಿಂಗ್​ ಮಾಡಿದ್ದ ಪಟಿದಾರ್​, 13 ಇನ್ನಿಂಗ್ಸ್​ಗಳಲ್ಲಿ 177.13ರ ಸ್ಟ್ರೈಕ್​ರೇಟ್​ನಲ್ಲಿ 395 ರನ್​ ಸಿಡಿಸಿದ್ರು. ಇದರ ಪ್ರತಿಫಲವಾಗಿ 11 ಕೋಟಿ ನೀಡಿ ರಿಟೈನ್ ಮಾಡಿಕೊಂಡಿದ್ದ ಆರ್​ಸಿಬಿ, ನಾಯಕತ್ವದ ಪಟ್ಟವನ್ನು ಕಟ್ತು.

ನಾಯಕತ್ವದ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ ರಜತ್ ಪಟಿದರ್​, ಟೂರ್ನಿಯುದಕ್ಕೂ ಅದ್ಭುತ ಆಟವೂ ಆಡಿದರು. ಕೂಲ್ ಅಂಡ್ ಕಾಮ್​ ನಾಯಕತ್ವದಿಂದ ಎಲ್ಲರ ಗಮನ ಸೆಳೆದಿದ ರಜತ್ ಪಟಿದಾರ್​, 15 ಪಂದ್ಯಗಳಿಂದ 312 ರನ್‌ ಮಾತ್ರವೇ ಗಳಿಸಲಿಲ್ಲ. ಆರ್​ಸಿಬಿಯ ಯಶಸ್ವಿ ನಾಯಕನಾಗಿ ಹೊರಹೊಮ್ಮಿದರು. ಕೋಟ್ಯಾಂತರ ಅಭಿಮಾನಿಗಳ ಬೇಡಿಕೆ ಈಡೇರಿಸಿದರು. 18 ವರ್ಷಗಳಿಂದ ಕಪ್ ಗೆಲುವಿಗೆ ಕಾದಿದ್ದ ವಿರಾಟ್​​ ಕೊಹ್ಲಿಗೆ ಟ್ರೋಫಿಯ ಗಿಫ್ಟ್ ನೀಡಿದರು. ಆರ್​ಸಿಬಿ ಅಭಿಮಾನಿಗಳ ಪಾಲಿನ ರಣಧೀರನಾಗಿ ಕಾಣ್ತಿರುವುದು ಸತ್ಯ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್​.. RCB ಮಾರ್ಕೆಟಿಂಗ್ ಮುಖ್ಯಸ್ಥ ಸೇರಿ ಮೂವರು ಅರೆಸ್ಟ್​

publive-image

ಚೊಚ್ಚಲ ಸೀಸನ್​​ನಲ್ಲೇ ನಾಯಕನಾಗಿ ಟ್ರೋಫಿ

ಐಪಿಎಲ್​ನಂತ ಬಿಗ್ ಗೇಮ್​ನಲ್ಲಿ ಟ್ರೋಫಿ ಗೆಲ್ಲುವುದು ನಿಜಕ್ಕೂ ಸುಲಭವಲ್ಲ. ದಿಗ್ಗಜರು ಎಂದು ಕರೆಸಿಕೊಂಡವರೇ ವರ್ಷನುಗಟ್ಟಲೇ ತಂಡವನ್ನ ಮುನ್ನಡೆಸಿ ಟ್ರೋಫಿ ಗೆದ್ದಿದ್ದಿಲ್ಲ. ನಾಯಕನಾಗಿ ತಂಡವನ್ನು ಮುನ್ನಡೆಸಿದ ಮೊದಲ ಸೀಸನ್​ನಲ್ಲೇ ರಜತ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಶೇನ್ ವಾರ್ನ್​, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಬಳಿಕ ಮಾಡಿದ 4ನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಜತ್​ ಪಟಿದಾರ್, ಈಗ ಆರ್‌ಸಿಬಿ ಅಭಿಮಾನಿಗಳಿಗೆ ಹೊಸ ಭರವಸೆ ಹುಟ್ಟಿಹಾಕಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕಪ್‌ ಗೆಲ್ಲಿಸಲಿ ಎಂಬುವುದೇ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment