ಚಿನ್ನಸ್ವಾಮಿಯಲ್ಲಿ ಕ್ಯಾಪ್ಟನ್​ ರಜತ್​ಗೆ ದಕ್ಕದ ಟಾಸ್​.. ಪ್ಲೇಯಿಂಗ್- 11ರಲ್ಲಿ ಯಾರ್​ ಯಾರಿಗೆ ಚಾನ್ಸ್​?

author-image
Bheemappa
Updated On
ಕಿಂಗ್ ಕೊಹ್ಲಿ ಬ್ರ್ಯಾಂಡ್​ ವ್ಯಾಲ್ಯೂ ಮತ್ತಷ್ಟು ದುಬಾರಿ.. ಈ ಏರಿಕೆ ಹಿಂದಿದೆ ಸ್ಪೆಷಲ್ ರೀಸನ್​​!
Advertisment
  • ತವರಿನಲ್ಲಿ ಗೆಲುವಿನ ಖಾತೆ ತೆರೆಯಲು ಆರ್​ಸಿಬಿ ದೊಡ್ಡ ಹೋರಾಟ
  • ಬಲಿಷ್ಠ ಪಂಜಾಬ್​ ಅನ್ನು ಬಗ್ಗು ಬಡಿಯಬೇಕಿದೆ ಬೆಂಗಳೂರು ತಂಡ
  • ಕ್ಯಾಪ್ಟನ್​ ರಜತ್ ಪಾಟಿದಾರ್​ಗೆ ಹೋಮ್​ ಗ್ರೌಂಡ್​ ಕೈ ಇಡಿಯುತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಅವರು ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೆ ಟಾಸ್ ಸೋತಿದ್ದಾರೆ. ಪಂಜಾಬ್ ಕಿಂಗ್ಸ್​ ತಂಡದ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಅವರು ಟಾಸ್ ಗೆದ್ದು ಆರ್​ಸಿಬಿಯನ್ನ ಮೊದಲ ಬ್ಯಾಟಿಂಗ್​ಗೆ ಆಹ್ವಾನ ಮಾಡಿದ್ದಾರೆ. ಮಳೆ ಬಂದ ಕಾರಣ 20 ಓವರ್​ ಬದಲಿಗೆ 14 ಓವರ್​ಗಳ ಪಂದ್ಯ ಇದಾಗಿದೆ.

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್​ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್​ ತೆಗೆದುಕೊಂಡಿದ್ದಾರೆ. ಆರ್​ಸಿಬಿ ತಂಡವನ್ನು​ ಮೊದಲ ಬ್ಯಾಟಿಂಗ್​​ಗೆ ಆಹ್ವಾನ ಮಾಡಿದ್ದಾರೆ. ಈಗಾಗಲೇ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದವರೇ ಈ ಪಿಚ್​ನಲ್ಲಿ ಬಾಸ್ ಆಗಿದ್ದಾರೆ. ಹೀಗಾಗಿ ಪಂಜಾಬ್​ ತಂಡದ ನಾಯಕನ ನಿರ್ಧಾರ ಮತ್ತೆ ಸರಿಯಾಗಿದೆ ಎಂದು ಊಹೆ ಮಾಡಬಹುದು.

ಪಂದ್ಯದಲ್ಲಿ ಆರ್​ಸಿಬಿ ಪರ​ ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ ಓಪನರ್​ಗಳಾಗಿ ಕ್ರೀಸ್​ನಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕೆ ಇಳಿಯಲಿದ್ದಾರೆ. ಈ ಪಂದ್ಯದಲ್ಲಿ ಪಡಿಕ್ಕಲ್ ಇಂಪ್ಯಾಕ್ಟ್​ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಲಿದ್ದಾರೆ. ಇವರ ಬದಲಿಗೆ ಸುಯಶ್ ಶರ್ಮಾ ಫೀಲ್ಡಿಂಗ್​ ವೇಳೆ ಮೈದಾನದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ನಾಯಕ ರಜತ್ ಪಾಟಿದಾರ್ ಪಂದ್ಯದಲ್ಲಿ ನಿರ್ಣಾಯಕ ಬ್ಯಾಟಿಂಗ್ ಮಾಡಿ ತಂಡದ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಜಿತೇಶ್ ಶರ್ಮಾ ಅವರು ವಿಕೆಟ್​ ಕೀಪರ್ ಕಮ್ ಬ್ಯಾಟ್ಸ್​ಮನ್ ಆಗಿ ಕಣದಲ್ಲಿದ್ದಾರೆ. ತವರಿನಲ್ಲಿ ಸೋಲಗಳನ್ನ ಕಂಡಿರುವ ಆರ್​ಸಿಬಿ ಈಗ ಪಂಜಾಬ್ ವಿರುದ್ಧ ಗೆಲುವಿನ ಟ್ರ್ಯಾಕ್​ಗೆ ಬರಬೇಕಿದೆ.

ಇದನ್ನೂ ಓದಿ:RCB vs PBKS ನಡುವಿನ ಜಿದ್ದಾಜಿದ್ದಿ ಹೇಗಿದೆ.. ಹೆಚ್ಚು ಬಾರಿ ಮ್ಯಾಚ್​ ಗೆದ್ದವರು ಯಾರು?

publive-image

ಆರ್​​ಸಿಬಿಯಲ್ಲಿ ಲೈಮ್ ಲಿವಿಂಗ್​ಸ್ಟನ್, ಕೃನಾಲ್ ಪಾಂಡ್ಯ ಆಲೌರೌಂಡರ್ ಆಗಿ ಬ್ಯಾಟಿಂಗ್, ಬೌಲಿಂಗ್​ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಭುವನೇಶ್ವರ್, ಯಶ್ ದಯಾಳ್ ಹಾಗೂ ಜೋಶ್ ಹ್ಯಾಜಲ್ವುಡ್ ಅವರು ತಂಡದ ಬೌಲಿಂಗ್ ಬಲವಾಗಿದ್ದಾರೆ. ಎದುರಾಳಿ ತಂಡ ಪಂಜಾಬ್ ಕೂಡ ಭಾರೀ ಬಲಿಷ್ಠವಾಗಿದ್ದು ಆರ್​ಸಿಬಿಯಂತೆ ಎರಡು ಸೋಲುಗಳನ್ನು ನೋಡಿದೆ. ಓಪನರ್ ಬ್ಯಾಟಿಂಗ್ ಅಬ್ಬರ ಚೆನ್ನಾಗಿಯೇ ಇದೆ. 3ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬರುವ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್​ ಅನ್ನು ಕಟ್ಟಿ ಹಾಕಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11

ರಜತ್ ಪಾಟಿದಾರ್ (ನಾಯಕ), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಶ್ ಶರ್ಮಾ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment