/newsfirstlive-kannada/media/post_attachments/wp-content/uploads/2025/04/RAJAT-2.jpg)
ತವರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ರಜತ್ ಪಾಟಿದಾರ್ ಮತ್ತೊಮ್ಮೆ ಟಾಸ್ ಸೋತಿದ್ದಾರೆ. ಹೀಗಾಗಿ ಆರ್ಸಿಬಿ ಮೊದಲ ಬ್ಯಾಟಿಂಗ್ ಮಾಡಲಿದ್ದು ರಾಜಸ್ಥಾನ್ ತಂಡ ಫೀಲ್ಡಿಂಗ್ಗೆ ಆಗಮಿಸಲಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ರಿಯಾನ್ ಪರಾಗ್ ಫೀಲ್ಡಿಂಗ್ ತೆಗೆದುಕೊಂಡಿದ್ದಾರೆ. ತವರಿನಲ್ಲಿ ಮತ್ತೆ ಟಾಸ್ ಕೈಕೊಟ್ಟಿದ್ದರಿಂದ ಆರ್ಸಿಬಿ ಪರ ಆಟಗಾರರು ಮೊದಲ ಬ್ಯಾಟಿಂಗ್ ಮಾಡಲಿದ್ದಾರೆ. ತಂಡದಲ್ಲಿ ಲಿವಿಂಗ್ಸ್ಟೋನ್ ಬದಲಿಗೆ ರೊಮಾರಿಯೋ ಶೆಫರ್ಡ್ ಅಖಾಡಕ್ಕೆ ಧುಮಕಲಿದ್ದಾರೆ. ದೇವದತ್ ಪಡಿಕ್ಕಲ್ ಎಂದಿನಂತೆ ಬ್ಯಾಟಿಂಗ್ಗೆ ಆಗಮಿಸುವರು.
ಪಂದ್ಯದಲ್ಲಿ ಆರ್ಸಿಬಿ ಪರ ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ ಆರಂಭಿಕರಾಗಿ ಕ್ರೀಸ್ಗೆ ಬರಲಿದ್ದಾರೆ. 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಮೊದಲಿನಂತೆ ಬ್ಯಾಟಿಂಗ್ ಮುಂದುವರೆಸುವರು. ಸುಯಶ್ ಶರ್ಮಾಗೆ ಬೆಂಚ್ಗೆ ಸೀಮಿತ ಮಾಡಿ ಪಡಿಕಲ್ಗೆ ಅವಕಾಶ ಕೊಡಲಾಗಿದೆ. ನಾಯಕ ರಜತ್ ಪಾಟಿದಾರ್ ಅಬ್ಬರದ ಬ್ಯಾಟಿಂಗ್ ಈಗ ಅತ್ಯಂತ ಮುಖ್ಯವಾಗಿದೆ. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿ ಜಿತೇಶ್ ಶರ್ಮಾ ಇದ್ದಾರೆ. ತವರಿನಲ್ಲಿ ಸೋಲನ್ನು ಅನುಭವಿಸಿರುವ ಆರ್ಸಿಬಿ ಈಗ ರಾಜಸ್ಥಾನ್ ವಿರುದ್ಧ ಗೆಲುವಿನ ನಗೆ ಬೀರಬೇಕಿದೆ.
ಇದನ್ನೂ ಓದಿ: ಪ್ಲೇ ಆಫ್ಗಾಗಿ 6 ಟೀಮ್ಗಳ ನಡುವೆ ಬಿಗ್ ಫೈಟ್.. RCBಯ ಮುಂದಿನ ದಾರಿ ಕಷ್ಟ.. ಕಷ್ಟ!
ಆಲೌರೌಂಡರ್ ಆಗಿ ಕೃನಾಲ್ ಪಾಂಡ್ಯ ಅವರ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಪರಾಕ್ರಮ ತೋರಬೇಕಿದೆ. ಜೋಶ್ ಹ್ಯಾಜಲ್ವುಡ್, ಯಶ್ ದಯಾಳ್ ಹಾಗೂ ಭುವನೇಶ್ವರ್ ಅವರ ಬೌಲಿಂಗ್ ಆರ್ಸಿಬಿ ಗೆಲುವಿಗೆ ಶಕ್ತಿಯಾಗಬೇಕಿದೆ. ಎದುರಾಳಿ ತಂಡ ರಾಜಸ್ಥಾನ್ ಕೂಡ ಪ್ರಬಲವಾಗಿದೆ. ಓಪನರ್ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಆರ್ಸಿಬಿಗೆ ಮುಳುವಾಗಬಹುದು. ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್ ಅಂತಹ ಬ್ಯಾಟ್ಸ್ಮನ್ಗಳು ಘರ್ಜನೆ ಮಾಡುವ ಅವಕಾಶ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11
ರಜತ್ ಪಾಟಿದಾರ್ (ನಾಯಕ), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಯಶ್ ದಯಾಳ್.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ