/newsfirstlive-kannada/media/post_attachments/wp-content/uploads/2025/04/RAJAT-PATIDAR-1.jpg)
ಬೆಂಗಳೂರಲ್ಲಿ ಆರ್ಸಿಬಿ ಸತತ ಎರಡನೇ ಬಾರಿಗೆ ಸೋತಿದೆ. ನಿನ್ನೆಯ ದಿನ ಡೆಲ್ಲಿ ಕ್ಯಾಪಿಟಲ್ಸ್ಗೆ ರಜತ್ ಪಾಟೀದಾರ್ ಪಡೆ ಶರಣಾಗಿದೆ. ಟಾಸ್ ಸೋತು ಬ್ಯಾಟ್ ಮಾಡಿದ್ದ ಆರ್ಸಿಬಿ 7 ವಿಕೆಟ್ ಕಳೆದುಕೊಂಡು 163 ರನ್ಗಳನ್ನು ಕಲೆ ಹಾಕಿತ್ತು. ಈ ಗುರಿ ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್, 17.5 ಓವರ್ನಲ್ಲಿ ನಿಗದಿತ ಗುರಿ ಮುಟ್ಟಿತು.
ಸೋಲಿನ ಬಳಿಕ ಮಾತನಾಡಿರುವ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್.. ಆರಂಭದಲ್ಲಿ ವಿಕೆಟ್ ತುಂಬಾ ಭಿನ್ನವಾಗಿತ್ತು. ಬ್ಯಾಟಿಂಗ್ಗೆ ಉತ್ತಮವಾಗಿದೆ ಎಂದು ಭಾವಿಸಿದ್ದೇವು. ಆದರೆ ನಾವು ಚೆನ್ನಾಗಿ ಬ್ಯಾಟ್ ಮಾಡಲಿಲ್ಲ. ಅತಿಯಾದ ಆತ್ಮವಿಶ್ವಾಸ ನಮ್ಮಲ್ಲಿತ್ತು ಅನ್ನೋದನ್ನ ನಾನೊಪ್ಪಲ್ಲ ಎಂದರು.
ಇದನ್ನೂ ಓದಿ: ತವರಲ್ಲಿ ಕೆ.ಎಲ್ ರಾಹುಲ್ ಬ್ಯಾಟಿಂಗ್ ಆರ್ಭಟ.. ಕನ್ನಡಿಗನಿಂದ RCBಗೆ ಭಾರೀ ಮುಖಭಂಗ, ಸೋಲು
ಪ್ರತಿಯೊಬ್ಬ ಬ್ಯಾಟರ್ ಉತ್ತಮ ಮನಸ್ಥಿತಿಯಲ್ಲಿದ್ದರು. ಸರಿಯಾದ ಇಂಟೆಂಟ್ ತೋರಿಸುತ್ತಿದ್ದರು. ಆರಂಭದಲ್ಲಿ ತಂಡದ ಸ್ಕೋರ್ 80 ರನ್ವರೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದೇವು. ಆ 80 ರಿಂದ 90 ರನ್ ತಲುಪುವ ವೇಳೆಗೆ ನಾಲ್ಕು ವಿಕೆಟ್ ಕಳೆದುಕೊಳ್ಳುವುದನ್ನ ಸ್ವೀಕರಿಸಲು ಸಾಧ್ಯವಿಲ್ಲ.
ನಮ್ಮಲ್ಲಿ ಉತ್ತಮ ಬ್ಯಾಟಿಂಗ್ ಲೈನ್-ಅಪ್ ಇದೆ. ಪರಿಸ್ಥಿತಿಗೆ ತಕ್ಕಂತೆ ಆಡಬೇಕಾಗಿದೆ. ಹಾಗಾದರೆ ಮಾತ್ರ ತಂಡಕ್ಕೆ ಒಳ್ಳೆಯದು. ಟಿಮ್ ಡೇವಿಡ್ ರನ್ ವೇಗ ಹೆಚ್ಚಿಸಿದ ರೀತಿ ಅದ್ಭುತವಾಗಿದೆ. ಪವರ್ಪ್ಲೇನಲ್ಲಿ ಬೌಲಿಂಗ್ ವಿಶೇಷವಾಗಿತ್ತು. ನಾವು ಉತ್ತಮ ಕ್ರಿಕೆಟ್ ಆಡಬೇಕು, ಅದನ್ನು ಸರಳವಾಗಿ ಇಡಬೇಕು ಎಂದರು.
ಇದನ್ನೂ ಓದಿ: ಇದು ನನ್ನ ಮೈದಾನ, ನನ್ನ ಮನೆ -ಆರ್ಸಿಬಿ ಸೋಲಿಸಿ KL ರಾಹುಲ್ ಸ್ಫೋಟಕ ಹೇಳಿಕೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್