ರಜತ್ KKR ವಿರುದ್ಧ ಆಡೋದು ಡೌಟ್.. ಆರ್​ಸಿಬಿ ಕ್ಯಾಪ್ಟನ್ ಪಾಟೀದಾರ್​ಗೆ ಆಗಿದ್ದೇನು..?

author-image
Ganesh
Updated On
ಆರ್​ಸಿಬಿ ಸೋಲಿಗೆ 5 ಪ್ರಮುಖ ಕಾರಣ.. ಕೊಹ್ಲಿ ಒಬ್ಬರೇ ಅಲ್ಲ..!
Advertisment
  • ಮೇ 17 ರಂದು ಕೆಕೆಆರ್ ವಿರುದ್ಧ ಆರ್​ಸಿಬಿ ಮ್ಯಾಚ್
  • ರಜತ್ ಪಾಟೀದಾರ್ ಆಡೋದು ಅನುಮಾನ ಎನ್ನಲಾಗ್ತಿದೆ
  • ರಜತ್ ಬದಲಿಗೆ ತಂಡ ಮುನ್ನಡೆಸೋದು ಯಾರು ಗೊತ್ತಾ?

ಐಪಿಎಲ್​ ಪ್ಲೇ-ಆಫ್​ಗೆ ಅಧಿಕೃತ ಎಂಟ್ರಿಗಾಗಿ ಕಾಯುತ್ತಿರುವ ಆರ್​ಸಿಬಿಗೆ ಆಘಾತ ಉಂಟಾಗಿದೆ. ಸೀಸನ್​ 18 ಆವೃತ್ತಿಯಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದ, ರಜತ್ ಪಾಟೀದಾರ್ ಮುಂದಿನ ಪಂದ್ಯ ಆಡೋದು ಡೌಟ್ ಎನ್ನಲಾಗುತ್ತಿದೆ.

ಭಾರತ ಮತ್ತು ಪಾಕ್ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆಯಲ್ಲಿ ಐಪಿಎಲ್​ನ ಎಲ್ಲಾ ಪಂದ್ಯಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಮೇ 17 ರಿಂದ ಪಂದ್ಯಗಳು ಪುನರಾರಂಭದ ಜೊತೆಗೆ ಉಳಿದ ಮ್ಯಾಚ್​ಗಳ ರಿಶೆಡ್ಯೂಲ್ ಕೂಡ ಆಗಿದೆ. ಅತೆಯೇ ಮೇ 17 ರಂದು ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್​ಸಿಬಿ ಸೆಣಸಾಟ ನಡೆಸಲಿವೆ.

ಇದನ್ನೂ ಓದಿ: RCBಗೆ ವಿದೇಶಿ ಆಟಗಾರರಿಂದ ಭಾರೀ ಹೊಡೆತ.. ಐಪಿಎಲ್​ನ ಟಾಪ್​- 5 ತಂಡಗಳಿಗೆ ಸಂಕಷ್ಟ!

ಈ ಪಂದ್ಯಕ್ಕೆ ನಾಯಕ ರಜತ್ ಪಾಟೀದಾರ್ ಆಡೋದು ಅನುಮಾನ ಎಂದು ಹೇಳಲಾಗುತ್ತಿದೆ. ಪಾಟೀದಾರ್​ಗೆ ಆಗಿದ್ದೇನು ಅಂತಾ ನೋಡೋದಾದರೆ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್​ಸಿಬಿ ಎದುರಿಸಿತ್ತು. ಈ ವೇಳೆ ನಾಯಕ ಪಾಟೀದಾರ್, ಬೆರಳಿಗೆ ಗಾಯವಾಗಿದೆ. ಈ ಗಾಯವು ಇನ್ನೂ ಸರಿಯಾಗಿ ವಾಸಿ ಆಗಿಲ್ಲ ಎಂದು ಹೇಳಲಾಗುತ್ತಿದೆ.

ಹಾಗಾಗಿ ಕೆಕೆಆರ್ ವಿರುದ್ಧ ಆಡಲ್ಲ ಎನ್ನಲಾಗುತ್ತಿದೆ. ರಜತ್ ಬದಲಿಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆರ್​ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆರ್​ಸಿಬಿ ಮ್ಯಾನೇಜ್ಮೆಂಟ್ ಈ ಬಗ್ಗೆ ಉತ್ತರ ನೀಡಬೇಕಿದೆ.

ಇದನ್ನೂ ಓದಿ: ಕಿಂಗ್​ ಕೊಹ್ಲಿಗಾಗಿ RCB ಅಭಿಮಾನಿಗಳು ಮಾಸ್ಟರ್ ಪ್ಲಾನ್​.. ಚಿನ್ನಸ್ವಾಮಿಯಲ್ಲಿ ಸ್ಪೆಷಲ್​ ಡೇ, ಏನು ಗೊತ್ತಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment