/newsfirstlive-kannada/media/post_attachments/wp-content/uploads/2025/04/Rajat-1.jpg)
ಐಪಿಎಲ್​ ಪ್ಲೇ-ಆಫ್​ಗೆ ಅಧಿಕೃತ ಎಂಟ್ರಿಗಾಗಿ ಕಾಯುತ್ತಿರುವ ಆರ್​ಸಿಬಿಗೆ ಆಘಾತ ಉಂಟಾಗಿದೆ. ಸೀಸನ್​ 18 ಆವೃತ್ತಿಯಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದ, ರಜತ್ ಪಾಟೀದಾರ್ ಮುಂದಿನ ಪಂದ್ಯ ಆಡೋದು ಡೌಟ್ ಎನ್ನಲಾಗುತ್ತಿದೆ.
ಭಾರತ ಮತ್ತು ಪಾಕ್ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆಯಲ್ಲಿ ಐಪಿಎಲ್​ನ ಎಲ್ಲಾ ಪಂದ್ಯಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಮೇ 17 ರಿಂದ ಪಂದ್ಯಗಳು ಪುನರಾರಂಭದ ಜೊತೆಗೆ ಉಳಿದ ಮ್ಯಾಚ್​ಗಳ ರಿಶೆಡ್ಯೂಲ್ ಕೂಡ ಆಗಿದೆ. ಅತೆಯೇ ಮೇ 17 ರಂದು ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್​ಸಿಬಿ ಸೆಣಸಾಟ ನಡೆಸಲಿವೆ.
ಇದನ್ನೂ ಓದಿ: RCBಗೆ ವಿದೇಶಿ ಆಟಗಾರರಿಂದ ಭಾರೀ ಹೊಡೆತ.. ಐಪಿಎಲ್​ನ ಟಾಪ್​- 5 ತಂಡಗಳಿಗೆ ಸಂಕಷ್ಟ!
ಈ ಪಂದ್ಯಕ್ಕೆ ನಾಯಕ ರಜತ್ ಪಾಟೀದಾರ್ ಆಡೋದು ಅನುಮಾನ ಎಂದು ಹೇಳಲಾಗುತ್ತಿದೆ. ಪಾಟೀದಾರ್​ಗೆ ಆಗಿದ್ದೇನು ಅಂತಾ ನೋಡೋದಾದರೆ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್​ಸಿಬಿ ಎದುರಿಸಿತ್ತು. ಈ ವೇಳೆ ನಾಯಕ ಪಾಟೀದಾರ್, ಬೆರಳಿಗೆ ಗಾಯವಾಗಿದೆ. ಈ ಗಾಯವು ಇನ್ನೂ ಸರಿಯಾಗಿ ವಾಸಿ ಆಗಿಲ್ಲ ಎಂದು ಹೇಳಲಾಗುತ್ತಿದೆ.
ಹಾಗಾಗಿ ಕೆಕೆಆರ್ ವಿರುದ್ಧ ಆಡಲ್ಲ ಎನ್ನಲಾಗುತ್ತಿದೆ. ರಜತ್ ಬದಲಿಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆರ್​ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆರ್​ಸಿಬಿ ಮ್ಯಾನೇಜ್ಮೆಂಟ್ ಈ ಬಗ್ಗೆ ಉತ್ತರ ನೀಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us