ಡೆಲ್ಲಿಯಲ್ಲಿ RCB ಶುಭಾರಂಭ, ಟಾಸ್ ಗೆದ್ದ ರಜತ್​​; ಪ್ಲೇಯಿಂಗ್​- 11ನಲ್ಲಿ ದೊಡ್ಡ ಬದಲಾವಣೆ

author-image
Bheemappa
Updated On
ಆರ್​ಸಿಬಿಗೆ ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್.. ಇನ್ನೂ ಎಷ್ಟು ಪಂದ್ಯ ಬಾಕಿ ಇದೆ..?
Advertisment
  • ತನ್ನ ತವರಿನಲ್ಲಿ ಮುಯ್ಯುಗೆ ಮುಯ್ಯು ತೀರಿಸ್ತಾರಾ ಕಿಂಗ್ ಕೊಹ್ಲಿ
  • ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಬಲಿಷ್ಠ ತಂಡ ಕಟ್ಟಿರುವ ಆರ್​​ಸಿಬಿ
  • ತವರಿನಲ್ಲಿ ಸೋತಿರುವ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು?

ಭಾನುವಾರದ ಡಬಲ್​ ಹೆಡ್ಡರ್​ನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್ ರಜತ್ ಪಾಟಿದಾರ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದ್ದು ಸ್ಫೋಟಕ ಬ್ಯಾಟರ್​ ಫಿಲ್ ಸಾಲ್ಟ್​ ಬದಲಿಗೆ ವಿದೇಶದ ಯುವ ಆಟಗಾರನಿಗೆ ಸ್ಥಾನ ನೀಡಲಾಗಿದೆ.

ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಫೀಲ್ಡಿಂಗ್​ ತೆಗೆದುಕೊಂಡು ಡೆಲ್ಲಿ ಕ್ಯಾ​ಪಿಟಲ್ಸ್​ ಅನ್ನು ಮೊದಲ ಬ್ಯಾಟಿಂಗ್​​ಗೆ ಆಹ್ವಾನ ಮಾಡಿದ್ದಾರೆ. ರಜತ್​ ಅವರ ನಿರ್ಣಯ ಇಲ್ಲಿ ಉತ್ತಮವಾಗಿದೆ ಎನ್ನಬಹುದು, ಏಕೆಂದರೆ ಈ ಮೈದಾನದಲ್ಲಿ ರನ್​ಗಳ ಹೊಳೆ ಹರಿಸಬಹುದು. ಇದರಿಂದ ಈಜಿಯಾಗಿ ಎದುರಾಳಿ ನೀಡಿದ ರನ್​ಗಳನ್ನ ಚೇಸ್ ಮಾಡಬಹುದು ಎಂದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆರ್​ಸಿಬಿ ಪರವಾಗಿ​ ಓಪನರ್​ ಆಗಿ ಸಾಲ್ಟ್ ಬದಲಿಗೆ ಯುವ ಪ್ಲೇಯರ್​​ ಜಾಕೋಬ್ ಬೆಥೆಲ್ ಅವರು ವಿರಾಟ್ ಕೊಹ್ಲಿ ಜೊತೆ ಮೈದಾನಕ್ಕೆ ಆಗಮಿಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕೆ ಇಳಿಯಲಿದ್ದು ಕಳೆದ ಪಂದ್ಯದಲ್ಲಿ ಅಬ್ಬರಿಸಿದಂತೆ ಡೆಲ್ಲಿ ವಿರುದ್ಧ ಕನ್ನಡಿಗ ಕಮಾಲ್ ಮಾಡೋದು ಪಕ್ಕಾ ಎನ್ನಲಾಗುತ್ತಿದೆ. ಸದ್ಯ ಪಂದ್ಯದಲ್ಲಿ ಪಡಿಕ್ಕಲ್ ಇಂಪ್ಯಾಕ್ಟ್​ ಪ್ಲೇಯರ್ ಆಗಿದ್ದು ಸುಯಾಶ್​ ಶರ್ಮಾ ಫೀಲ್ಡಿಂಗ್​ ಮಾಡಲಿದ್ದಾರೆ.

ಇದನ್ನೂ ಓದಿ:ಕನ್ನಡಿಗ KL ರಾಹುಲ್​ ನೋಡಿ ಆರ್​ಸಿಬಿ ಸ್ಟಾರ್​ ಕಿಂಗ್​​​ ಕೊಹ್ಲಿ ಡ್ಯಾನ್ಸ್​.. ಪಂದ್ಯಕ್ಕೂ ಮೊದಲೇ ಹೀಗೆ ಮಾಡಿದ್ದೇಕೆ? -Video

publive-image

ಕಳೆದ ಪಂದ್ಯದಲ್ಲಿ ವಿಫಲ ಬ್ಯಾಟಿಂಗ್ ಮಾಡಿದ್ದ ನಾಯಕ ರಜತ್ ಪಾಟಿದಾರ್ ಈ ಪಂದ್ಯದಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಬೇಕಿದೆ. ಜಿತೇಶ್ ಶರ್ಮಾ ವಿಕೆಟ್​ ಕೀಪರ್ ಜೊತೆಗೆ ಬ್ಯಾಟಿಂಗ್​ ಅನ್ನು ನಿರ್ವಹಿಸಲಿದ್ದಾರೆ. ಡೆಲ್ಲಿ ಜೊತೆ ತವರಲ್ಲಿ ಸೋಲನ್ನು ಅನುಭವಿಸಿದ್ದ ಆರ್​ಸಿಬಿ, ಈಗ ಅವರ ನೆಲದಲ್ಲೇ ಅವರನ್ನು ಬಗ್ಗು ಬಡಿಯಬೇಕಿದೆ.

ಆಲೌರೌಂಡರ್ ಕೃನಾಲ್ ಪಾಂಡ್ಯ ತಂಡದಲ್ಲಿ ಮಹತ್ವ ಸ್ಥಾನ ನಿರ್ವಹಿಸಲಿದ್ದಾರೆ. ಭುವನೇಶ್ವರ್, ಸುಯಶ್ ಶರ್ಮಾ, ಯಶ್ ದಯಾಳ್ ಹಾಗೂ ಜೋಶ್ ಹ್ಯಾಜಲ್ವುಡ್ ಬೌಲಿಂಗ್ ಬಲವಾಗಿದ್ದಾರೆ. ಎದುರಾಳಿ ತಂಡ ಡೆಲ್ಲಿ ಕ್ಯಾಪಿಟಲ್ಸ್​ ಕೂಡ ಬಲಿಷ್ಠವಾಗಿದೆ. ಓಪನರ್ ಫಾಫ್ ಡುಪ್ಲಿಸಿಸ್​​​ ಹಾಗೂ ಅಭಿಷೇಕ್ ಪೊರೆಲ್​ ಬ್ಯಾಟಿಂಗ್​ ಅನ್ನು ಆರ್​ಸಿಬಿ ಕಟ್ಟಿ ಹಾಕಬೇಕಿದೆ. ಕನ್ನಡಿಗರಾದ ಕೆ.ಎಲ್ ರಾಹುಲ್​ ಹಾಗೂ ಕರುಣ್ ನಾಯರ್ ಬ್ಯಾಟಿಂಗ್​​, ಡೆಲ್ಲಿಗೆ ಅತಿ ಮುಖ್ಯವಾಗಿದೆ. ಹೀಗಾಗಿ ಆರ್​ಸಿಬಿ ಬೌಲರ್ಸ್​ ಈ ಕನ್ನಡಿಗರ ಬ್ಯಾಟಿಂಗ್​​ಗೂ ಕಡಿವಾಣ ಹಾಕಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11

ರಜತ್ ಪಾಟಿದಾರ್ (ನಾಯಕ), ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಶ್ ಶರ್ಮಾ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment