RCBಗೆ ಲಕ್, ಟಾಸ್ ಗೆದ್ದ ಕ್ಯಾಪ್ಟನ್​​.. ಪ್ಲೇಯಿಂಗ್​- 11ರಲ್ಲಿ ದೊಡ್ಡ ಬದಲಾವಣೆ!

author-image
Bheemappa
Updated On
ಇವತ್ತು ಶಾಕಿಂಗ್ ನ್ಯೂಸ್ ಕೊಡ್ತಾರಾ ಕೊಹ್ಲಿ.. ವಿರಾಟ್ ಅಭಿಮಾನಿಗಳಿಗೆ ಢವಢವ..!
Advertisment
  • ಐಪಿಎಲ್​ ಲೀಗ್​ನ ಕೊನೆಯ ಪಂದ್ಯ ಆಡುತ್ತಿರುವ ಆರ್​ಸಿಬಿ ತಂಡ
  • ಲಕ್ನೋ ಟೀಮ್ ಈ ಪಂದ್ಯ ಗೆದ್ದರೂ ಯಾವುದೇ ಪ್ರಯೋಜನ ವಿಲ್ಲ
  • ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದ ಜಿತೇಶ್​ ನೇತೃತ್ವದ ಪಡೆ

2025ರ ಐಪಿಎಲ್​ ಸೀಸನ್​ 18ರ ಲೀಗ್​ನ ಕೊನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೆಂಟ್ಸ್​ ತಂಡ ಸೆಣಸಾಟ ನಡೆಸುತ್ತಿವೆ. ಈ ಮಹತ್ತರ ಪಂದ್ಯದಲ್ಲಿ ಆರ್​ಸಿಬಿ ಕ್ಯಾಪ್ಟನ್ ಜಿತೇಶ್ ಶರ್ಮಾ ಅವರು ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.​

ಉತ್ತರ ಪ್ರದೇಶದ ಲಕ್ನೋದಲ್ಲಿರುವ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಜಿತೇಶ್ ಶರ್ಮಾ ಫೀಲ್ಡಿಂಗ್​ ತೆಗೆದುಕೊಂಡಿದ್ದಾರೆ. ಆರ್​ಸಿಬಿ ಕ್ಯಾಂಪ್​ನಿಂದ ಈಗಾಗಲೇ ಜಾಕೋಬ್​ ಬೆಥೆಲ್ ಹಾಗೂ ಲುಂಗಿ ಎನ್​​ಗಿಡಿ ಹೊರ ನಡೆದಿದ್ದಾರೆ. ತಮ್ಮ ತಮ್ಮ ದೇಶದ ಪರವಾಗಿ ಆಡಲು ತವರಿಗೆ ಮರಳಿದ್ದಾರೆ. ಇದರ ಜೊತೆಗೆ ಜೋಶ್ ಹ್ಯಾಜಲ್ವುಡ್​, ಟಿಮ್ ಡೇವಿಡ್​ ಅವರು ಪಂದ್ಯದಿಂದ ಹೊರಗುಳಿದಿದ್ದು ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಪ್ಲೇಯಿಂಗ್​-11 ರಲ್ಲಿ ಭಾರೀ ಬದಲಾವಣೆ ಆಗಿದೆ.

ರಜತ್ ಪಾಟಿದಾರ್ ಅವರ ಕೈಗೆ ಗಾಯವಾಗಿದ್ದರಿಂದ ಅವರ ಬದಲಿಗೆ ಜಿತೇಶ್ ಶರ್ಮಾ ಅವರು ಆರ್​ಸಿಬಿಯ ನಾಯಕ ಹಾಗೂ ವಿಕೆಟ್​ ಕೀಪರ್ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಎಂದಿನಂತೆ ತಂಡದಲ್ಲಿ ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ ಅವರು ಓಪನರ್ ಆಗಿ ಕಣಕ್ಕೆ ಇಳಿಯಲಿದ್ದು ಬ್ಯಾಟಿಂಗ್​ನಲ್ಲಿ ಆರ್ಭಟಿಸಲಿದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ಕನ್ನಡಿಗ ಮಯಾಂಕ್ ಅಗರವಾಲ್ ಬ್ಯಾಟಿಂಗ್ ಮಾಡಲಿದ್ದು ಮಧ್ಯಮ ಬ್ಯಾಟಿಂಗ್​ನಲ್ಲಿ ರಜತ್ ಪಾಟಿದಾರ್ ಮಹತ್ತರ ಪಾತ್ರ ವಹಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ:IPL ಅಂತಿಮ ಲೀಗ್​ ಪಂದ್ಯದಲ್ಲಿ ಈ 2 ಐಕಾನಿಕ್​ ರೆಕಾರ್ಡ್ ಮಾಡ್ತಾರಾ ಕಿಂಗ್​ ಕೊಹ್ಲಿ?

publive-image

ಆಲ್​ರೌಂಡರ್​ಗಳಾಗಿ ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ ತಂಡದಲ್ಲಿದ್ದು ಎದುರಾಳಿಗೆ ಸವಾಲು ಹಾಕಲಿದ್ದಾರೆ. ಆರ್​ಸಿಬಿಯ ಬೌಲಿಂಗ್​ ಪಡೆಯನ್ನು ಜೋಶ್ ಹೆಜಲ್ವುಡ್ ಬದಲಿಗೆ ಭುವನೇಶ್ವರ್ ಕುಮಾರ್ ಅವರು ಮುನ್ನಡೆಸಲಿದ್ದಾರೆ. ಭುವನೇಶ್ವರ್​​ಗೆ ಯಶ್ ದಯಾಲ್, ನುವಾನ್ ತುಷಾರ ಅವರು ಸಾಥ್ ಕೊಡಲಿದ್ದಾರೆ. ಇನ್ನು ಟಿಮ್ ಡೇವಿಡ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ಆರ್​ಸಿಬಿಯ ಪ್ಲೇಯಿಂಗ್- 11ರಲ್ಲಿ ದೊಡ್ಡ ಬದಲಾವಣೆ ಆಗಿದೆ ಎನ್ನಬಹುದು.

ಈ ಸೀಸನ್​ನ ಕೊನೆ ಪಂದ್ಯ ಆಡುತ್ತಿರುವ ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡ ಕೂಡ ಬಲಿಷ್ಠವಾಗಿದೆ. ಓಪನರ್​​ ಮಿಚೆಲ್ ಮಾರ್ಷ್ ಈಗಾಗಲೇ ಒಂದು ಶತಕ ಸಿಡಿಸಿ ದಾಖಲೆ ಮಾಡಿದ್ದಾರೆ. ಇದರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ನಿಕೋಲಸ್ ಪೂರನ್ ರನ್​ ವೇಗ ನೀಡಲಿದ್ದಾರೆ. ಆಯುಷ್ ಬದೋನಿ ಕೂಡ ಕೊನೆ ಹಂತದಲ್ಲಿ ಲಕ್ನೋಗೆ ನೆರವಾಗಲಿದ್ದಾರೆ. ಇದರ ಜೊತೆಗೆ ಬೌಲರ್​ಗಳು ಬಿರುಸಿನ ದಾಳಿ ಮಾಡುವ ನಿರೀಕ್ಷೆ ಇದೆ. ​

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11

ಜಿತೇಶ್ ಶರ್ಮಾ (ನಾಯಕ, ವಿಕೆಟ್ ಕೀಪರ್), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ನುವಾನ್ ತುಷಾರ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment