ಇಂದು ಆರ್ಸಿಬಿ-ರಾಜಸ್ಥಾನ್ ರಾಯಲ್ಸ್ ಮುಖಾಮುಖಿ
ಪಿಂಕ್ ಸಿಟಿ ಜೈಪುರದಲ್ಲಿ RCBಗೆ ರಾಯಲ್ ಸವಾಲ್..!
ಇಂದಾದ್ರೂ ಗೆಲುವಿನ ಹಳಿಗೆ ಮರಳುತ್ತಾ ನಮ್ಮ ಆರ್ಸಿಬಿ?
ಐಪಿಎಲ್ ಸೀಸನ್ 17ರಲ್ಲೂ ಆರ್ಸಿಬಿಯ ಹಳೆ ಸಂಪ್ರದಾಯ ಮುಂದುವರೆದಿದೆ. ಹೋಮ್ಗ್ರೌಂಡ್ನಲ್ಲಿ ಬ್ಯಾಕ್ ಡು ಬ್ಯಾಕ್ ಸೋಲುಂಡು ಅಪಮಾನಕ್ಕೊಳಗಾಗಿದೆ. ಅಷ್ಟಕ್ಕೂ ಆರ್ಸಿಬಿ ಹೀನಾಯ ಪ್ರದರ್ಶನಕ್ಕೆ ಕಾರಣ ಏನು? ಸ್ಟಾರ್ ಕ್ರಿಕೆಟರ್ಸ್ ದಂಡೇ ಇರೋ ಆರ್ಸಿಬಿ ಎಡವುತ್ತಿರೋದೆಲ್ಲಿ? ಕಂಪ್ಲೀಟ್ ಡಿಟೇಲ್ಸ್..
ಐಪಿಎಲ್ ಟೂರ್ನಿಯ 19 ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಪಿಂಕ್ ಸಿಟಿ ಜೈಪುರದಲ್ಲಿ ರಾಯಲ್ ಚಾಂಲೆಜರ್ಸ್ ಬೆಂಗಳೂರು-ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗ್ತಿವೆ. ಹ್ಯಾಟ್ರಿಕ್ ಜಯ ಸಾಧಿಸಿರೋ ರಾಜಸ್ಥಾನ್ ಹೋಮ್ಗ್ರೌಂಡ್ನಲ್ಲಿ ಮತ್ತೊಂದು ದಿಗ್ವಿಜಯದ ನಿರೀಕ್ಷೆಯಲ್ಲಿದೆ. ಸತತ 2 ಸೋಲಿನಿಂದ ಕಂಗೆಟ್ಟಿರೋ ಆರ್ಸಿಬಿ ಕಥೆ ಅಯೋಮಯವಾಗಿದೆ.
ಆರ್ಸಿಬಿ ಹೊಸ ಅಧ್ಯಾಯ ಅಂತಾ ಅಭಿಯಾನ ಆರಂಭಿಸಿದ ಆರ್ಸಿಬಿಯ ಅಸಲಿ ಆಟ ಮೊದಲ 4 ಪಂದ್ಯಗಳಲ್ಲೇ ಬಟಾಬಯಲಾಗಿದೆ. 1 ಪಂದ್ಯ ಗೆದ್ದು 3 ಪಂದ್ಯಗಳಲ್ಲಿ ಹೀನಾಯ ಸೋಲಿಗೆ ಶರಣಾಗಿದೆ. ಲಾಯಲ್ ಫ್ಯಾನ್ಸ್ ಆರ್ಸಿಬಿ ಆಟಕ್ಕೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ನೋಡೋಕೆ ಆರ್ಸಿಬಿ ಬಲಿಷ್ಠವಾಗೇ ಇದೆ. ವರ್ಲ್ಡ್ ಕ್ಲಾಸ್ ಪ್ಲೇಯರ್ಸ್ ಇದ್ದಾರೆ. ಆದ್ರೂ, ಫಲಿತಾಂಶ ಸೋಲು.
ಪವರ್ ಪ್ಲೇ, ಡೆತ್ ಓವರ್ ಓಕೆ.. ಮಿಡಲ್ ಓವರ್ನದ್ದೇ ಸಮಸ್ಯೆ..!
ಈ ಸೀಸನ್ನಲ್ಲಿ ಪವರ್ ಪ್ಲೆ ಹಾಗೂ ಡೆತ್ ಓವರ್ಗಳಲ್ಲಿ ಆರ್ಸಿಬಿ ಪರ್ಫಾಮೆನ್ಸ್ ಅಬ್ಬಬ್ಬಾ ಅನ್ನುವಂತಿಲ್ಲ. ಆದ್ರೂ, ಒಕೆ ಒಕೆ ಅನ್ಬೋದು. ತಂಡದ ಅಸಲಿ ಸಮಸ್ಯೆ ಇರೋದು ಮಿಡಲ್ ಓವರ್ನಲ್ಲಿ. 7ರಿಂದ 16ರವರೆಗಿನ ಓವರ್ಗಳಲ್ಲಿ ಆಡ್ತಿರುವ ಸ್ಲೋ ಬ್ಯಾಟಿಂಗ್ ತಂಡಕ್ಕೆ ಹಿನ್ನಡೆಯಾಗ್ತಿದೆ.
ಮಿಡಲ್ ಓವರ್ಗಳಲ್ಲಿ ಆರ್ಸಿಬಿ ಬ್ಯಾಟಿಂಗ್
4 ಪಂದ್ಯಗಳಿಂದ ಮಿಡಲ್ ಓವರ್ನಲ್ಲಿ ಆಡಿದ 40 ಓವರ್ಗಳಲ್ಲಿ ಆರ್ಸಿಬಿ ಬ್ಯಾಟರ್ಸ್ಗಳಿಸಿರೋದು ಕೇವಲ 309 ರನ್.! ಇಲ್ಲೇ 10 ವಿಕೆಟ್ ಕಳೆದುಕೊಂಡಿದ್ದು, 7.72ರ ರನ್ರೇಟ್ ಹೊಂದಿದೆ. ಮಿಡಲ್ ಓವರ್ನಲ್ಲಿ 40 ಓವರ್ ಅಂದ್ರೆ, 240 ಎಸೆತಗಳನ್ನ ಆರ್ಸಿಬಿ ಬ್ಯಾಟರ್ಸ್ ಎದುರಿಸಿದ್ದಾರೆ. ಈ 240 ಎಸೆತಗಳ ಪೈಕಿ 13 ಓವರ್ ಅಂದ್ರೆ, 78 ಎಸೆತಗಳು ಡಾಟ್ ಬಾಲ್ಸ್. ಉಳಿದ ಎಸೆತಗಳಲ್ಲಿ ಸಿಂಗಲ್ ತೆಗೆದುಕೊಳ್ತಾ ಸ್ಟ್ರೈಕ್ ರೊಟೇಟ್ ಮಾಡಿದ್ದು, ಬೌಂಡರಿ-ಸಿಕ್ಸರ್ಗಳು ಅಪರೂಪಕ್ಕೊಂದು ಬಂದಿವೆ. ಹೀಗಾದ್ರೆ ಹೇಗ್ ರನ್ ಬರುತ್ತೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಫೀಲ್ಡಿಂಗ್ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್..!
RCB ಮಿಡಲ್ ಓವರ್ ರನ್ ಲೆಕ್ಕಾಚಾರ
ಮಿಡಲ್ ಓವರ್ನಲ್ಲಿ ಎದುರಿಸಿರೋ 240 ಎಸೆತಗಳ ಪೈಕಿ 78 ಎಸೆತಗಳು ಡಾಟ್ ಆಗಿವೆ. ಉಳಿದಂತೆ 107 ಸಿಂಗಲ್ಗಳು, 17 ಡಬಲ್ಸ್, 17 ಬೌಂಡರಿ ಹಾಗೂ ಕೇವಲ 13 ಸಿಕ್ಸರ್ಗಳು ಬಂದಿವೆ. ಆರ್ಸಿಬಿಯ ಮಿಡಲ್ ಓವರ್ ರನ್ ಬರಕ್ಕೆ ತಂಡದ ಬ್ಯಾಟಿಂಗ್ ಲೈನ್ಅಪ್ ಕಾರಣವಾಗಿದೆ. ಟಾಪ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡ್ತಿರೋ ಅನುಭವಿಗಳು ಹಾಗೂ ಸ್ಟಾರ್ಗಳು ಬಹು ಬೇಗ ಪೆವಿಲಿಯನ್ ಸೇರ್ತಿದ್ದಾರೆ. ಒತ್ತಡದಲ್ಲಿ ಕಣಕ್ಕಿಳಿಯೋ ಅನಾನುಭವಿಗಳು ರನ್ಗಳಿಗೆ ಪರದಾಡ್ತಿದ್ದಾರೆ.
ನೀವು ನೋಡಬಹುದು ಒತ್ತಡದಲ್ಲಿ ಯಾರು ಬ್ಯಾಟಿಂಗ್ ಮಾಡ್ತಿದ್ದಾರೆ. ಭಾರತದ ಯುವ ಆಟಗಾರರು ಮತ್ತು ದಿನೇಶ್ ಕಾರ್ತಿಕ್. ಒತ್ತಡದಲ್ಲಿ ಆಡಬೇಕಾದ ಇಂಟರ್ನ್ಯಾಷನಲ್ ಕ್ರಿಕೆಟರ್ಸ್ ಎಲ್ಲಿದ್ದಾರೆ. ಎಲ್ರೂ ಡ್ರೆಸ್ಸಿಂಗ್ ರೂಮ್ನಲ್ಲಿದ್ದಾರೆ. ಇವತ್ತಲ್ಲ, ಹಲವು ವರ್ಷಗಳಿಂದ ಇದೇ ಕಥೆ. ಒತ್ತಡ ಇದ್ದಾಗ ದೊಡ್ಡ ಆಟಗಾರರು ಒಬ್ಬರೂ ಇರಲ್ಲ. ಯುವ ಆಟಗಾರರು ಕೆಳ ಕ್ರಮಾಂಕದಲ್ಲಿ ಆಡ್ತಿರ್ತಾರೆ. ದೊಡ್ಡ ಆಟಗಾರರು ಟಾಪ್ ಆರ್ಡರ್ನಲ್ಲಿ ಆಡಿ ಬರ್ತಾರೆ. ಇದಕ್ಕಾಗಿಯೇ ಆರ್ಸಿಬಿ ಇಷ್ಟು ವರ್ಷದಿಂದ ಐಪಿಎಲ್ ಗೆದ್ದಿಲ್ಲ-ಅಂಬಟಿ ರಾಯುಡು, ಮಾಜಿ ಕ್ರಿಕೆಟಿಗ
ರಾಯುಡು ಹೇಳಿರೋ ಈ ಮಾತು 100ಕ್ಕೆ 100ರಷ್ಟು ಸತ್ಯ. ಟಾಪ್ ಆರ್ಡರ್ ಸ್ಟಾರ್ಗಳೆಲ್ಲಾ ಆರಂಭಿಕ ಓವರ್ಗಳಲ್ಲೇ ವಿಕೆಟ್ ಒಪ್ಪಿಸ್ತಾರೆ. ಪ್ರೆಶರ್ ಟೈಮ್ನಲ್ಲಿ ಯಂಗ್ಸ್ಟರ್ಸ್ನ ಬಿಟ್ಟು ಆಡಿ ಅಂತಾರೆ. ಒತ್ತಡದಲ್ಲಿ ಅವ್ರು ಹೇಗ್ ಆಡೋಕೆ ಸಾಧ್ಯ. ಮುಂದಾದ್ರೂ ಆರ್ಸಿಬಿಯ ಸ್ಟಾರ್ಗಳು ಎಚ್ಚೆತ್ತುಕೊಂಡು ಪರ್ಫಾಮ್ ಮಾಡಿ ಮಿಡಲ್ ಆರ್ಡರ್ ರನ್ ಬರಕ್ಕೆ ಮದ್ದಾಗಬೇಕಿದೆ. ಮ್ಯಾನೇಜ್ಮೆಂಟ್ ಕೂಡ ಬ್ಯಾಟಿಂಗ್ ಆರ್ಡರ್ಗೆ ಸರ್ಜರಿ ಮಾಡಿ, ಮ್ಯಾಕ್ಸ್ವೆಲ್ರಂಥ ಆಟಗಾರರನ್ನ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳಿಸಿದ್ರೂ, ತಂಡದ ದೃಷ್ಟಿಯಿಂದ ಒಳ್ಳೆಯದೇ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂದು ಆರ್ಸಿಬಿ-ರಾಜಸ್ಥಾನ್ ರಾಯಲ್ಸ್ ಮುಖಾಮುಖಿ
ಪಿಂಕ್ ಸಿಟಿ ಜೈಪುರದಲ್ಲಿ RCBಗೆ ರಾಯಲ್ ಸವಾಲ್..!
ಇಂದಾದ್ರೂ ಗೆಲುವಿನ ಹಳಿಗೆ ಮರಳುತ್ತಾ ನಮ್ಮ ಆರ್ಸಿಬಿ?
ಐಪಿಎಲ್ ಸೀಸನ್ 17ರಲ್ಲೂ ಆರ್ಸಿಬಿಯ ಹಳೆ ಸಂಪ್ರದಾಯ ಮುಂದುವರೆದಿದೆ. ಹೋಮ್ಗ್ರೌಂಡ್ನಲ್ಲಿ ಬ್ಯಾಕ್ ಡು ಬ್ಯಾಕ್ ಸೋಲುಂಡು ಅಪಮಾನಕ್ಕೊಳಗಾಗಿದೆ. ಅಷ್ಟಕ್ಕೂ ಆರ್ಸಿಬಿ ಹೀನಾಯ ಪ್ರದರ್ಶನಕ್ಕೆ ಕಾರಣ ಏನು? ಸ್ಟಾರ್ ಕ್ರಿಕೆಟರ್ಸ್ ದಂಡೇ ಇರೋ ಆರ್ಸಿಬಿ ಎಡವುತ್ತಿರೋದೆಲ್ಲಿ? ಕಂಪ್ಲೀಟ್ ಡಿಟೇಲ್ಸ್..
ಐಪಿಎಲ್ ಟೂರ್ನಿಯ 19 ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಪಿಂಕ್ ಸಿಟಿ ಜೈಪುರದಲ್ಲಿ ರಾಯಲ್ ಚಾಂಲೆಜರ್ಸ್ ಬೆಂಗಳೂರು-ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗ್ತಿವೆ. ಹ್ಯಾಟ್ರಿಕ್ ಜಯ ಸಾಧಿಸಿರೋ ರಾಜಸ್ಥಾನ್ ಹೋಮ್ಗ್ರೌಂಡ್ನಲ್ಲಿ ಮತ್ತೊಂದು ದಿಗ್ವಿಜಯದ ನಿರೀಕ್ಷೆಯಲ್ಲಿದೆ. ಸತತ 2 ಸೋಲಿನಿಂದ ಕಂಗೆಟ್ಟಿರೋ ಆರ್ಸಿಬಿ ಕಥೆ ಅಯೋಮಯವಾಗಿದೆ.
ಆರ್ಸಿಬಿ ಹೊಸ ಅಧ್ಯಾಯ ಅಂತಾ ಅಭಿಯಾನ ಆರಂಭಿಸಿದ ಆರ್ಸಿಬಿಯ ಅಸಲಿ ಆಟ ಮೊದಲ 4 ಪಂದ್ಯಗಳಲ್ಲೇ ಬಟಾಬಯಲಾಗಿದೆ. 1 ಪಂದ್ಯ ಗೆದ್ದು 3 ಪಂದ್ಯಗಳಲ್ಲಿ ಹೀನಾಯ ಸೋಲಿಗೆ ಶರಣಾಗಿದೆ. ಲಾಯಲ್ ಫ್ಯಾನ್ಸ್ ಆರ್ಸಿಬಿ ಆಟಕ್ಕೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ನೋಡೋಕೆ ಆರ್ಸಿಬಿ ಬಲಿಷ್ಠವಾಗೇ ಇದೆ. ವರ್ಲ್ಡ್ ಕ್ಲಾಸ್ ಪ್ಲೇಯರ್ಸ್ ಇದ್ದಾರೆ. ಆದ್ರೂ, ಫಲಿತಾಂಶ ಸೋಲು.
ಪವರ್ ಪ್ಲೇ, ಡೆತ್ ಓವರ್ ಓಕೆ.. ಮಿಡಲ್ ಓವರ್ನದ್ದೇ ಸಮಸ್ಯೆ..!
ಈ ಸೀಸನ್ನಲ್ಲಿ ಪವರ್ ಪ್ಲೆ ಹಾಗೂ ಡೆತ್ ಓವರ್ಗಳಲ್ಲಿ ಆರ್ಸಿಬಿ ಪರ್ಫಾಮೆನ್ಸ್ ಅಬ್ಬಬ್ಬಾ ಅನ್ನುವಂತಿಲ್ಲ. ಆದ್ರೂ, ಒಕೆ ಒಕೆ ಅನ್ಬೋದು. ತಂಡದ ಅಸಲಿ ಸಮಸ್ಯೆ ಇರೋದು ಮಿಡಲ್ ಓವರ್ನಲ್ಲಿ. 7ರಿಂದ 16ರವರೆಗಿನ ಓವರ್ಗಳಲ್ಲಿ ಆಡ್ತಿರುವ ಸ್ಲೋ ಬ್ಯಾಟಿಂಗ್ ತಂಡಕ್ಕೆ ಹಿನ್ನಡೆಯಾಗ್ತಿದೆ.
ಮಿಡಲ್ ಓವರ್ಗಳಲ್ಲಿ ಆರ್ಸಿಬಿ ಬ್ಯಾಟಿಂಗ್
4 ಪಂದ್ಯಗಳಿಂದ ಮಿಡಲ್ ಓವರ್ನಲ್ಲಿ ಆಡಿದ 40 ಓವರ್ಗಳಲ್ಲಿ ಆರ್ಸಿಬಿ ಬ್ಯಾಟರ್ಸ್ಗಳಿಸಿರೋದು ಕೇವಲ 309 ರನ್.! ಇಲ್ಲೇ 10 ವಿಕೆಟ್ ಕಳೆದುಕೊಂಡಿದ್ದು, 7.72ರ ರನ್ರೇಟ್ ಹೊಂದಿದೆ. ಮಿಡಲ್ ಓವರ್ನಲ್ಲಿ 40 ಓವರ್ ಅಂದ್ರೆ, 240 ಎಸೆತಗಳನ್ನ ಆರ್ಸಿಬಿ ಬ್ಯಾಟರ್ಸ್ ಎದುರಿಸಿದ್ದಾರೆ. ಈ 240 ಎಸೆತಗಳ ಪೈಕಿ 13 ಓವರ್ ಅಂದ್ರೆ, 78 ಎಸೆತಗಳು ಡಾಟ್ ಬಾಲ್ಸ್. ಉಳಿದ ಎಸೆತಗಳಲ್ಲಿ ಸಿಂಗಲ್ ತೆಗೆದುಕೊಳ್ತಾ ಸ್ಟ್ರೈಕ್ ರೊಟೇಟ್ ಮಾಡಿದ್ದು, ಬೌಂಡರಿ-ಸಿಕ್ಸರ್ಗಳು ಅಪರೂಪಕ್ಕೊಂದು ಬಂದಿವೆ. ಹೀಗಾದ್ರೆ ಹೇಗ್ ರನ್ ಬರುತ್ತೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಫೀಲ್ಡಿಂಗ್ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್..!
RCB ಮಿಡಲ್ ಓವರ್ ರನ್ ಲೆಕ್ಕಾಚಾರ
ಮಿಡಲ್ ಓವರ್ನಲ್ಲಿ ಎದುರಿಸಿರೋ 240 ಎಸೆತಗಳ ಪೈಕಿ 78 ಎಸೆತಗಳು ಡಾಟ್ ಆಗಿವೆ. ಉಳಿದಂತೆ 107 ಸಿಂಗಲ್ಗಳು, 17 ಡಬಲ್ಸ್, 17 ಬೌಂಡರಿ ಹಾಗೂ ಕೇವಲ 13 ಸಿಕ್ಸರ್ಗಳು ಬಂದಿವೆ. ಆರ್ಸಿಬಿಯ ಮಿಡಲ್ ಓವರ್ ರನ್ ಬರಕ್ಕೆ ತಂಡದ ಬ್ಯಾಟಿಂಗ್ ಲೈನ್ಅಪ್ ಕಾರಣವಾಗಿದೆ. ಟಾಪ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡ್ತಿರೋ ಅನುಭವಿಗಳು ಹಾಗೂ ಸ್ಟಾರ್ಗಳು ಬಹು ಬೇಗ ಪೆವಿಲಿಯನ್ ಸೇರ್ತಿದ್ದಾರೆ. ಒತ್ತಡದಲ್ಲಿ ಕಣಕ್ಕಿಳಿಯೋ ಅನಾನುಭವಿಗಳು ರನ್ಗಳಿಗೆ ಪರದಾಡ್ತಿದ್ದಾರೆ.
ನೀವು ನೋಡಬಹುದು ಒತ್ತಡದಲ್ಲಿ ಯಾರು ಬ್ಯಾಟಿಂಗ್ ಮಾಡ್ತಿದ್ದಾರೆ. ಭಾರತದ ಯುವ ಆಟಗಾರರು ಮತ್ತು ದಿನೇಶ್ ಕಾರ್ತಿಕ್. ಒತ್ತಡದಲ್ಲಿ ಆಡಬೇಕಾದ ಇಂಟರ್ನ್ಯಾಷನಲ್ ಕ್ರಿಕೆಟರ್ಸ್ ಎಲ್ಲಿದ್ದಾರೆ. ಎಲ್ರೂ ಡ್ರೆಸ್ಸಿಂಗ್ ರೂಮ್ನಲ್ಲಿದ್ದಾರೆ. ಇವತ್ತಲ್ಲ, ಹಲವು ವರ್ಷಗಳಿಂದ ಇದೇ ಕಥೆ. ಒತ್ತಡ ಇದ್ದಾಗ ದೊಡ್ಡ ಆಟಗಾರರು ಒಬ್ಬರೂ ಇರಲ್ಲ. ಯುವ ಆಟಗಾರರು ಕೆಳ ಕ್ರಮಾಂಕದಲ್ಲಿ ಆಡ್ತಿರ್ತಾರೆ. ದೊಡ್ಡ ಆಟಗಾರರು ಟಾಪ್ ಆರ್ಡರ್ನಲ್ಲಿ ಆಡಿ ಬರ್ತಾರೆ. ಇದಕ್ಕಾಗಿಯೇ ಆರ್ಸಿಬಿ ಇಷ್ಟು ವರ್ಷದಿಂದ ಐಪಿಎಲ್ ಗೆದ್ದಿಲ್ಲ-ಅಂಬಟಿ ರಾಯುಡು, ಮಾಜಿ ಕ್ರಿಕೆಟಿಗ
ರಾಯುಡು ಹೇಳಿರೋ ಈ ಮಾತು 100ಕ್ಕೆ 100ರಷ್ಟು ಸತ್ಯ. ಟಾಪ್ ಆರ್ಡರ್ ಸ್ಟಾರ್ಗಳೆಲ್ಲಾ ಆರಂಭಿಕ ಓವರ್ಗಳಲ್ಲೇ ವಿಕೆಟ್ ಒಪ್ಪಿಸ್ತಾರೆ. ಪ್ರೆಶರ್ ಟೈಮ್ನಲ್ಲಿ ಯಂಗ್ಸ್ಟರ್ಸ್ನ ಬಿಟ್ಟು ಆಡಿ ಅಂತಾರೆ. ಒತ್ತಡದಲ್ಲಿ ಅವ್ರು ಹೇಗ್ ಆಡೋಕೆ ಸಾಧ್ಯ. ಮುಂದಾದ್ರೂ ಆರ್ಸಿಬಿಯ ಸ್ಟಾರ್ಗಳು ಎಚ್ಚೆತ್ತುಕೊಂಡು ಪರ್ಫಾಮ್ ಮಾಡಿ ಮಿಡಲ್ ಆರ್ಡರ್ ರನ್ ಬರಕ್ಕೆ ಮದ್ದಾಗಬೇಕಿದೆ. ಮ್ಯಾನೇಜ್ಮೆಂಟ್ ಕೂಡ ಬ್ಯಾಟಿಂಗ್ ಆರ್ಡರ್ಗೆ ಸರ್ಜರಿ ಮಾಡಿ, ಮ್ಯಾಕ್ಸ್ವೆಲ್ರಂಥ ಆಟಗಾರರನ್ನ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳಿಸಿದ್ರೂ, ತಂಡದ ದೃಷ್ಟಿಯಿಂದ ಒಳ್ಳೆಯದೇ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್