ಇನ್ನೂ ನಡೆಯದ ದಿವ್ಯಾಂಶಿ ಅಂತ್ಯಕ್ರಿಯೆ; ಕಾಲ್ತುಳಿತದಲ್ಲಿ ಜೀವ ಬಿಟ್ಟ ಅಭಿಮಾನಿ ಮನೆಯಲ್ಲಿ ಶೋಕ ಸಾಗರ

author-image
admin
Updated On
ಇನ್ನೂ ನಡೆಯದ ದಿವ್ಯಾಂಶಿ ಅಂತ್ಯಕ್ರಿಯೆ; ಕಾಲ್ತುಳಿತದಲ್ಲಿ ಜೀವ ಬಿಟ್ಟ ಅಭಿಮಾನಿ ಮನೆಯಲ್ಲಿ ಶೋಕ ಸಾಗರ
Advertisment
  • ಚಿನ್ನಸ್ವಾಮಿ ಸ್ಟೇಡಿಯಂ ದುರಂತವಾಗಿ 48 ಗಂಟೆಗಳು ಕಳೆದಿದೆ
  • ನನ್ನ ಮಗಳು ಬರೀ ಮಗಳಲ್ಲ.. ಅವಳು ನನ್ನ ಸ್ನೇಹಿತೆ ಎಂದ ತಾಯಿ
  • ವಿರಾಟ್ ಕೊಹ್ಲಿ, ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿದ್ದ ದಿವ್ಯಾಂಶಿ

ಬೆಂಗಳೂರು: RCB ವಿಜಯೋತ್ಸವದಲ್ಲಿ ಭಾಗಿಯಾಗಲು ತೆರಳಿದ್ದ 14 ವರ್ಷದ ದಿವ್ಯಾಂಶಿ ಪ್ರಾಣ ಕಳೆದುಕೊಂಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ದುರಂತವಾಗಿ 48 ಗಂಟೆಗಳೇ ಕಳೆದಿದೆ. ಜೀವ ಬಿಟ್ಟ 11 ಅಮಾಯಕ RCB ಅಭಿಮಾನಿಗಳ ಮನೆಯಲ್ಲಿ ನೀರವ ಮೌನ ಆವರಿಸಿದೆ.

ವಿರಾಟ್ ಕೊಹ್ಲಿ, ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿದ್ದ ದಿವ್ಯಾಂಶಿ ಕೂಡ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಕೊನೆಯುಸಿರೆಳೆದಿದ್ದಾರೆ. ದುರಂತವಾಗಿ 2 ದಿನ ಕಳೆದರೂ ದಿವ್ಯಾಂಶಿ ಅವರ ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ.

ದಿವ್ಯಾಂಶಿ ಪಾರ್ಥಿವ ಶರೀರವನ್ನು ಕಣ್ಣೂರಿನ ನಿವಾಸದಿಂದ ಆಂಧ್ರಪ್ರದೇಶಕ್ಕೆ ರವಾನೆ ಮಾಡಲಾಗಿದೆ. ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯ ರಾಯಚೋಟಿಯಲ್ಲಿ ಇಂದು ದಿವ್ಯಾಂಶಿ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

[caption id="attachment_126567" align="aligncenter" width="800"]ದಿವ್ಯಾನ್ಷಿ ದಿವ್ಯಾಂಶಿ[/caption]

ದಿವ್ಯಾಂಶಿ ಕುಟುಂಬಸ್ಥರು ನ್ಯೂಸ್ ಫಸ್ಟ್‌ ಪ್ರತಿನಿಧಿಯ ಜೊತೆ ಮಾತನಾಡಿದ್ದು, ದಿವ್ಯಾಂಶಿ ಅವರ ಚಿಕ್ಕಮ್ಮ ಅಮೆರಿಕಾದಲ್ಲಿದ್ದಾರೆ. ಕುಟುಂಬಸ್ಥರು ಅಮೆರಿಕದಲ್ಲಿರುವ ಚಿಕ್ಕಮ್ಮನ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್​.. RCB ಮಾರ್ಕೆಟಿಂಗ್ ಮುಖ್ಯಸ್ಥ ಸೇರಿ ಮೂವರು ಅರೆಸ್ಟ್​ 

ನನ್ನ ಮಗಳು ಬರೀ ಮಗಳಲ್ಲ. ಅವಳು ನನ್ನ ಸ್ನೇಹಿತೆ. ನನ್ನ ಸಂಗಾತಿಯಾಗಿದ್ದಳು. ಓದಿನಲ್ಲೂ, ಕ್ರೀಡೆಯಲ್ಲೂ ಎಲ್ಲದರಲ್ಲೂ ಮುಂದೆ ಇದ್ದಳು. ಪೈಲೆಟ್ ಆಗಬೇಕು, ವೆಟರ್ನರಿ ಡಾಕ್ಟರ್ ಆಗಬೇಕು ಅನ್ನೋ ಕನಸು ಕಂಡಿದ್ದಳು ಎಂದು ದಿವ್ಯಾಂಶಿ ತಾಯಿ ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment