/newsfirstlive-kannada/media/post_attachments/wp-content/uploads/2025/06/rcb10.jpg)
ಐಪಿಎಲ್-18ರ ಆವೃತ್ತಿಯ ಫೈನಲ್ಗೆ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಅಂತಿಮ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಹೀಗಾಗಿ ಈ ಸಲ ಕಪ್​ ನಮಗೆ ಸಿಗಬೇಕು ಅಂತ ಆರ್ಸಿಬಿ ತಂಡದ ಗೆಲುವಿಗೆ ಅಭಿಮಾನಿಗಳು ಪ್ರಾರ್ಥನೆ ಆರಂಭಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರ್​ಸಿಬಿ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/rcb12.jpg)
ಆದ್ರೆ ಇಲ್ಲೋಬ್ಬ ಅಭಿಮಾನಿ ಆರ್​ಸಿಬಿ ಗೆಲುವಿಗಾಗಿ ತಿರುಪತಿ ತಿಮ್ಮಪ್ಪನಿಗೆ ಮಂಡಿಸೇವೆ ಸಲ್ಲಿಸಿದ್ದಾನೆ. ಹೌದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಚಿನ್ ತಿರುಪತಿ ತಿಮ್ಮಪ್ಪನಿಗೆ ಮಂಡಿಸೇವೆ ಸಲ್ಲಿಸಿದ್ದಾನೆ. ಆಂಧ್ರಪ್ರದೇಶದಲ್ಲಿರುವ ತಿರುಪತಿ ತಮ್ಮಪ್ಪನ ದೇಗುಲಕ್ಕೆ ಭೇಟಿ ಕೊಟ್ಟ ಸಚಿನ್​ ಆರ್ಸಿಬಿ ಗೆಲುವಿಗಾಗಿ ದೇವಸ್ಥಾನದ 51 ಮೆಟ್ಟಿಲುಗಳನ್ನ ಮಂಡಿಯಿಂದಲೇ ಹತ್ತಿ, ಆರ್​ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲಿ ಎಂದು ಪ್ರಾರ್ಥಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/06/rcb11.jpg)
ಈ ಬಗ್ಗೆ ನ್ಯೂಸ್​ಫಸ್ಟ್​ ದೂರವಾಣಿ ಕರೆಯಲ್ಲಿ ಮಾತಾಡಿದ ಅಭಿಮಾನಿ ಸಚಿನ್​, ಇಷ್ಟು ವರ್ಷದಿಂದ ನಾವು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಲೇ ಬಂದಿದ್ದೇವೆ. ಈ ಬಾರಿ ಪಕ್ಕಾ ಆರ್​ಸಿಬಿ ಕಪ್​ ಎತ್ತಿಕೊಳ್ಳುತ್ತೆ. ಹೀಗಾಗಿ ಈ ಬಾರಿ ಆರ್​ಸಿಬಿ ಕಪ್​ ಗೆಲ್ಲಲೇ ಬೇಕು ಅಂತ ತಿರುಪತಿ ತಿಮ್ಮಪ್ಪನಿಗೆ ಮಂಡಿಸೇವೆ ಮಾಡಿ ಹರಕೆ ಮುಟ್ಟಿಸಿದ್ದೀನಿ. ಆರ್​ಸಿಬಿಗೆ ಜೈ.. ಈ ಸಲ ಕಪ್​ ನಮ್ದೇ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us