ಆರ್​ಸಿಬಿಗೆ ಸೋಲು.. ಚಿನ್ನದಂಥ ಅವಕಾಶ ಕೈಚೆಲ್ಲಿದ ಕನ್ನಡಿಗ ಮನೋಜ್ ಭಾಂಡಗೆ..!

author-image
Ganesh
Updated On
ಆರ್​ಸಿಬಿಗೆ ಸೋಲು.. ಚಿನ್ನದಂಥ ಅವಕಾಶ ಕೈಚೆಲ್ಲಿದ ಕನ್ನಡಿಗ ಮನೋಜ್ ಭಾಂಡಗೆ..!
Advertisment
  • ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಹ್ಯಾಟ್ರಿಕ್ ಸೋಲು
  • ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ ಕನ್ನಡಿಗ
  • ಪಡಿಕ್ಕಲ್ ಸ್ಥಾನದಲ್ಲಿ ಮನೋಜ್​​​ಗೆ ಅವಕಾಶ ಸಿಕ್ಕಿತ್ತು

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆರ್​ಸಿಬಿ ಮತ್ತೊಮ್ಮೆ ಮುಗ್ಗರಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುವ ಮೂಲಕ ತವರಿನಲ್ಲಿ ಸತತ ಮೂರನೇ ಬಾರಿಗೆ ಸೋಲನ್ನು ಕಂಡಿದೆ.

ವಿಶೇಷ ಅಂದರೆ ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ ಸಣ್ಣ ಬದಲಾವಣೆ ಮಾಡಿತ್ತು. ಚಿನ್ನಸ್ವಾಮಿಯಲ್ಲಿ ರನ್​ ಗಳಿಸಲು ಪರಾದಡಿದ ದೇವದತ್ ಪಡಿಕ್ಕಲ್ ಅವರನ್ನು ಪ್ಲೇಯಿಂಗ್-11ನಿಂದ ಹೊರಗಿಟ್ಟಿತ್ತು. ಬದಲಿಗೆ ಕನ್ನಡಿಗ ಮನೋಜ್ ಭಾಂಡಗೆ ಅವಕಾಶ ಮಾಡಿಕೊಟ್ಟಿತ್ತು. ಹೋಂಗ್ರೌಂಡ್ ಹಿನ್ನೆಲೆಯಲ್ಲಿ ಮನೋಜ್ ಭಾಂಡಗೆ ಸಾಕಷ್ಟು ಅಭಿಮಾನಿಗಳ ಬೆಂಬಲ ಕೂಡ ಸಿಕ್ಕಿತ್ತು.

ಇದನ್ನೂ ಓದಿ: ಮತ್ತೊಂದು ಹೀನಾಯ ಸೋಲು.. ಆರ್​ಸಿಬಿ ನಾಯಕ ಪಾಟೀದಾರ್ ಕೊಟ್ಟ ಕಾರಣ ಏನು..?

publive-image

ಆದರೆ ಮನೋಜ್ ಭಾಂಡಗೆ ಚಿನ್ನದಂಥ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಡೆಬ್ಯು ಮಾಡಿದ್ದ ಮನೋಜ್, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್​​ಸಿಬಿಗೆ ಆಸೆಯಾಗಬೇಕಿದ್ದ ಮನೋಜ್, ಕೇವಲ 4 ಬಾಲ್ ಎದುರಿಸಿ ಪೆವಿಲಿಯನ್​​ಗೆ ಹೋದರು. ಕೇವಲ ಒಂದು ರನ್​ ಗಳಿಸಿದ ಭಾಂಡಗೆ, ಜಾನ್ಸನ್ ಅವರ ಎಲ್​​ಬಿಡಬ್ಲ್ಯೂ ಬಲೆಗೆ ಔಟ್​​ ಆದರು.

ಇನ್ನು, ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ 9 ವಿಕೆಟ್ ಕಳೆದುಕೊಂಡು ಕೇವಲ 95 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಪಂಜಾಬ್ ಕಿಂಗ್ಸ್, ಐದು ವಿಕೆಟ್ ಕಳೆದುಕೊಂಡು 11 ಬಾಲ್ ಬಾಕಿ ಇರುವಾಗ ಗುರಿ ಮುಟ್ಟಿತು.

ಇದನ್ನೂ ಓದಿ: ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ- ರಿಕ್ಕಿ ರೈ ಆರೋಗ್ಯ ಹೇಗಿದೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment