/newsfirstlive-kannada/media/post_attachments/wp-content/uploads/2025/05/MAYANK-YADAV.jpg)
ಕನ್ನಡಿಗ ದೇವದತ್ ಪಡಿಕ್ಕಲ್ ನಿರ್ಗಮನದೊಂದಿಗೆ ಮಯಾಂಕ್, ಆರ್ಸಿಬಿಗೆ ಎಂಟ್ರಿ ನೀಡಿದ್ದಾರೆ. ಮತ್ತೋರ್ವ ಕನ್ನಡಿಗನ ಎಂಟ್ರಿಯಿಂದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಖುಷಿಯ ಜೊತೆಗೆ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.
ಇನ್ನು, ಮಯಾಂಕ್ ಅಗರ್ವಾಲ್ ಮರಳಿ ಗೂಡು ಸೇರಿದ ಬೆನ್ನಲ್ಲೇ ನಾನಾ ಡಿಬೇಟ್ಗಳು, ಲಾಭ ನಷ್ಟದ ಚರ್ಚೆಗಳು ಶುರುವಾಗಿವೆ. 14 ವರ್ಷಗಳ ಕಾಲ ಐಪಿಎಲ್ ಆಡಿ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ರೂ, ಮೆಗಾ ಹರಾಜಿನಲ್ಲಿ ಕನ್ನಡಿಗ ಮಯಾಂಕ್ ಅನ್ಸೋಲ್ಡ್ ಆಗಿದ್ದರು. ಹರಾಜಿನಲ್ಲಿ ಅನ್ಸೋಲ್ಡ್ ಆಗಿ ರಿಪ್ಲೇಸ್ಮೆಂಟ್ ಆಟಗಾರರಾಗಿ ಬಂದ ಆಟಗಾರರು ಸದ್ಯ ಐಪಿಎಲ್ನಲ್ಲಿ ಅಬ್ಬರಿಸ್ತಿದ್ದಾರೆ.
ಇದನ್ನೂ ಓದಿ: IPL ಟೀಮ್ ಓನರ್ ಇಂದ ತಿಮ್ಮಪ್ಪನಿಗೆ ಭಾರೀ ಮೌಲ್ಯದ ಚಿನ್ನ, ವಜ್ರ ಖಚಿತ ಆಭರಣಗಳು ದಾನ
ಚೆನ್ನೈನ ಆಯುಷ್ ಮ್ಹಾತ್ರೆ, ಡೆವಾಲ್ಡ್ ಬ್ರೇವಿಸ್, ಊವ್ರಿಲ್ ಪಟೇಲ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಇದೀಗ ಆರ್ಸಿಬಿಗೆ ರೀ ಎಂಟ್ರಿಯಾಗಿರೋ ಮಯಾಂಕ್ ಮೇಲೂ ಅದೇ ನಿರೀಕ್ಷೆಯಿದೆ. ಕಳೆದ ಮಹಾರಾಜ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸಿದ್ದ ಮಯಾಂಕ್, ಮೆಗಾ ಹರಾಜಿನಲ್ಲಿ ಕಡೆಗಣಿಸಿದವರಿಗೆ ಬ್ಯಾಟ್ನಿಂದ ಆನ್ಸರ್ ಕೊಡ್ತಾರಾ.? ಆರ್ಸಿಬಿ ಭರವಸೆ ಉಳಿಸಿಕೊಳ್ತಾರಾ? ಕಾದು ನೋಡೋಣ.
ಇದನ್ನೂ ಓದಿ: ಇಂದು ಫ್ಯಾನ್ಸ್ಗೆ ಸ್ಪೆಷಲ್ ಗಿಫ್ಟ್ ಕೊಡ್ತಾರಾ ಕಿಂಗ್ ಕೊಹ್ಲಿ.. ವಿರಾಟ್ನ ಆ ಉಡುಗೊರೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ