/newsfirstlive-kannada/media/post_attachments/wp-content/uploads/2025/04/RAJAT_PATIDHAR.jpg)
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಇನ್ನೇನು ಕೆಲವೇ ಕ್ಷಣಗಳಲ್ಲಿ ಅಖಾಡಕ್ಕೆ ಧುಮಕಲಿದೆ. ಇದರ ನಡುವೆ ಆರ್​ಸಿಬಿಯ ಪ್ಲೇಯಿಂಗ್​- 11 ರಲ್ಲಿ ಬದಲಾವಣೆ ಏನಾದರು ಮಾಡುತ್ತಾ ಎನ್ನುವ ಕುತೂಹಲವಿದೆ. ಕನ್ನಡಿಗನಿಗೆ ಬೆಂಚ್​ ಕಾಯ್ದಿರಿಸಿ ಇನ್ನೊಬ್ಬ ಯುವ ಕನ್ನಡಿಗನಿಗೆ ಸ್ಥಾನ ಕೊಡವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಅದ್ಭುತವಾಗಿ ಬ್ಯಾಟ್ ಬೀಸಿದ್ದ ಆರ್​ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಪಡಿಕ್ಕಲ್​ ಅವರನ್ನು ಬೆಂಚ್​ಗೆ ಕೂರಿಸಬಹುದು. ಏಕೆಂದರೆ ಈ ಹಿಂದಿನ ಪಂದ್ಯಗಳಲ್ಲಿ ಪಡಿಕ್ಕಲ್ ಬ್ಯಾಟಿಂಗ್​ ಹೇಳುವಂತೆ ಏನು ಇರಲಿಲ್ಲ. ಹೀಗಾಗಿ ಇವರ ಬದಲಿಗೆ ಯುವ ಕನ್ನಡಿಗ ಮನೋಜ್ ಭಾಂಡಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಆರ್​ಸಿಬಿ ತಂಡದ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮನೋಜ್ ಭಾಂಡಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/04/MANOJ_BANDHAGE.jpg)
ರಾಜಸ್ಥಾನ್ ಜೊತೆಗಿನ ಪಂದ್ಯದಲ್ಲಿ ದೇವದತ್ ಪಡಿಕ್ಕಲ್​ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕೆ ಇಳಿಸಲಾಗಿತ್ತು. ಇವರ ಬದಲಿಗೆ ಬೌಲರ್​ ಸುಯಶ್ ಶರ್ಮಾಗೆ ಅವಕಾಶ ನೀಡಲಾಗಿತ್ತು. ಅದರಂತೆ ಇಂದಿನ ಪಂದ್ಯದಲ್ಲಿ ಪಡಿಕ್ಕಲ್ ಬದಲಿಗೆ ಮನೋಜ್ ಭಾಂಡಗೆ ಚಾನ್ಸ್​ ಸಿಗುತ್ತೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಪಂದ್ಯ ಆರಂಭದ ನಂತರವೇ ಉತ್ತರ ಸಿಗಲಿದೆ. ಮನೋಜ್ ಭಾಂಡಗೆ ಆಲ್​​ರೌಂಡರ್​ ಆಗಿದ್ದು ಬೌಲಿಂಗ್, ಬ್ಯಾಟಿಂಗ್​ ಎರಡರಲ್ಲೂ ಅಬ್ಬರಿಸಬಲ್ಲರು. ಏಕೆಂದರೆ ಇವರು 2024ರ ಮಹಾರಾಜ ಟಿ20 ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು.
ಮನೋಜ್ ಭಾಂಡಗೆ ಈ ಹೆಸರು RCB ಅಭಿಮಾನಿಗಳಿಗೆ ಚಿರಪರಿಚಿತ. ಕಳೆದ ಮೂರು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಯುವ ಕನ್ನಡಿಗ ಸ್ಥಾನ ಪಡೆದಿದ್ದಾರೆ. ಆದರೆ 2023, 2024 ಹಾಗೂ ಈ ವರ್ಷನೂ ಬೆಂಚ್​ಗೆ ಸೀಮಿತವಾಗಿದ್ದು ಒಂದೇ ಒಂದು ಅವಕಾಶಕ್ಕಾಗಿ ಶಬರಿಯಂತೆ ಕಾಯುತ್ತಿದ್ದಾರೆ. ಆರ್​ಸಿಬಿಯ ತವರಿನಲ್ಲೇ ಮನೋಜ್ ಭಾಂಡಗೆ ಅವರ ಆಸೆ ನೆರವೇರುತ್ತಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us