ಹೊಸ ಕ್ಯಾಪ್ಟನ್​ಗಾಗಿ ಮುಂಬೈ ಜತೆ RCB ಮೆಗಾ ಟ್ರೇಡ್​​; ಬೆಂಗಳೂರು ತಂಡಕ್ಕೆ ಸೂರ್ಯ ಎಂಟ್ರಿ!

author-image
Ganesh Nachikethu
Updated On
ಹೊಸ ಕ್ಯಾಪ್ಟನ್​ಗಾಗಿ ಮುಂಬೈ ಜತೆ RCB ಮೆಗಾ ಟ್ರೇಡ್​​; ಬೆಂಗಳೂರು ತಂಡಕ್ಕೆ ಸೂರ್ಯ ಎಂಟ್ರಿ!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ
  • ಮುಂದಿನ ಸೀಸನ್ ಕಪ್​​​ ಗೆಲ್ಲಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಣ
  • ಕ್ಯಾಪ್ಟನ್​ಗಾಗಿ ಮುಂಬೈ ಇಂಡಿಯನ್ಸ್​ ಜತೆ ಆರ್​​ಸಿಬಿ ಟೀಮ್​ ಮೆಗಾ ಟ್ರೇಡ್​​!

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ಆರ್​​ಸಿಬಿ ತಂಡದ ಮೆಂಟರ್​ ಮತ್ತು ಬ್ಯಾಟಿಂಗ್​ ಕೋಚ್​ ಆಗಿ ದಿನೇಶ್​ ಕಾರ್ತಿಕ್​ ಅವರನ್ನು ನೇಮಿಸಿದೆ. ಈ ಮಧ್ಯೆ ಮತ್ತೋರ್ವ ಸ್ಫೋಟಕ ಬ್ಯಾಟರ್​ ಆರ್​​ಸಿಬಿಗೆ ಎಂಟ್ರಿ ಆಗೋ ಸೂಚನೆ ಸಿಕ್ಕಿದೆ.

ವರ್ಷದ ಕೊನೆ ಡಿಸೆಂಬರ್​ನಲ್ಲಿ 2025ರ ಐಪಿಎಲ್​​​​ ಮೆಗಾ ಆಕ್ಷನ್​ ನಡೆಯಲಿದೆ. ಮೆಗಾ ಆಕ್ಷನ್​ನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲು ಆರ್​​ಸಿಬಿ ಮುಂದಾಗಿದೆ. ಕ್ವಾಲಿಟಿ ಆಟಾಗರರ ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟು ಪ್ಲಾನ್​ ಆರ್​​ಸಿಬಿಯದ್ದು. ಹಾಗಾಗಿ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್​​ ಅವರನ್ನು ಖರೀದಿ ಮಾಡಬೇಕು ಎಂಬುದು ಆರ್​​ಸಿಬಿ ಪ್ಲಾನ್​​.

ಮುಂದಿನ ಸೀಸನ್​ ವೇಳೆಗೆ ಮುಂಬೈ ತಂಡವನ್ನು ಸೂರ್ಯಕುಮಾರ್​ ಯಾದವ್​​ ಬಿಡೋದು ಪಕ್ಕಾ ಆಗಿದೆ. ಈ ಮುನ್ನವೇ ಆರ್​​ಸಿಬಿ ಟ್ರೇಡ್​ ಮೂಲಕ ಸೂರ್ಯ ಅವರನ್ನು ಖರೀದಿ ಮಾಡೋ ಸಾಧ್ಯತೆ ಇದೆ.

ಸೂರ್ಯಗೆ ಆರ್​​ಸಿಬಿ ಕ್ಯಾಪ್ಟನ್ಸಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​. ಇವರು ಇದೇ ತಿಂಗಳು 13ನೇ ತಾರೀಕು 40 ವರ್ಷಕ್ಕೆ ಕಾಲಿಟ್ಟರು. ಹಾಗಾಗಿ ಫಾಫ್​​ಗೆ ಕೊಕ್​ ಕೊಟ್ಟು, ಸೂರ್ಯಗೆ ಮಣೆ ಹಾಕಲು ಆರ್​​ಸಿಬಿ ಮುಂದಾಗಿದೆ. ಸದ್ಯ ಸೂರ್ಯಕುಮಾರ್​​ ಯಾದವ್​ ಭಾರತ ಟಿ20 ಕ್ರಿಕೆಟ್​ ತಂಡದ ಕ್ಯಾಪ್ಟನ್​ ಆಗಿದ್ದು, ಇವರು ಆರ್​​ಸಿಬಿ ತಂಡದ ನಾಯಕರಾಗಬಹುದು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment