ಆರ್​​ಸಿಬಿ ಕ್ಯಾಪ್ಟನ್ಸಿಗೆ ಮೇಜರ್​ ಟ್ವಿಸ್ಟ್​​; ಇವರೇ ಮುಂದಿನ ನಾಯಕ ಎಂದ ಮುಖ್ಯ ಕೋಚ್​​

author-image
Ganesh Nachikethu
Updated On
ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
  • ಆರ್​​ಸಿಬಿ ಕ್ಯಾಪ್ಟನ್​ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಆ್ಯಂಡಿ
  • ಮುಖ್ಯ ಕೋಚ್​​​ ಆ್ಯಂಡಿ ಫ್ಲವರ್​ ಕೊಟ್ಟ ಸ್ಫೋಟಕ ಸುಳಿವು

ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಮುಂದಿನ ಸೀಸನ್​ನಲ್ಲಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್​​ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಇದಕ್ಕೂ ಮುನ್ನ ಆರ್​​ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್‌ ದಯಾಳ್‌ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್​​ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ. ಇದರ ಮಧ್ಯೆ ಒಂದು ವೇಳೆ ಕೊಹ್ಲಿ ಕೈ ಕೊಟ್ಟರೆ ಆರ್​​ಸಿಬಿ ತಂಡವನ್ನು ಲೀಡ್​ ಮಾಡೋರು ಯಾರು? ಅನ್ನೋ ಚರ್ಚೆ ಶುರುವಾಗಿದೆ.

ರಜತ್​ ಪಾಟಿದಾರ್​​ಗೆ ಕ್ಯಾಪ್ಟನ್ಸಿ

ಆರ್​​​ಸಿಬಿ ತಂಡದ ಸ್ಟಾರ್​ ಬ್ಯಾಟರ್​​ ರಜತ್​ ಪಾಟಿದಾರ್​ಗೆ ನಾಯಕತ್ವ ಪಟ್ಟ ಕಟ್ಟುವ ಬಗ್ಗೆ ಮುಖ್ಯ ಕೋಚ್​​​ ಆ್ಯಂಡಿ ಫ್ಲವರ್​ ಮಾತಾಡಿದ್ದಾರೆ. ರಜತ್​ ಪಾಟಿದಾರ್​​ ಹೊಡಿಬಡಿ ಆಟಗಾರ. ಇವರು ಸ್ಪಿನ್ನರ್​​ಗಳ ವಿರುದ್ಧ ಸಖತ್​ ಆಗಿ ಬ್ಯಾಟ್​ ಬೀಸುತ್ತಾರೆ. ಪಾಟಿದಾರ್​ ಒಳ್ಳೆಯ ಲೀಡರ್​​. ದೂರದೃಷ್ಟಿಯಿಂದ ರಜತ್​ ಪಾಟಿದಾರ್​ ಅವರಲ್ಲಿ ಲೀಡರ್​ಶೀಪ್​ ಕ್ವಾಲಿಟಿ ಬೆಳೆಸೋದು ಮುಖ್ಯ ಎಂದರು. ಈ ಮೂಲಕ ಪಾಟಿದಾರ್​ ಮುಂದಿನ ಕ್ಯಾಪ್ಟನ್​ ರೇಸ್​ನಲ್ಲಿದ್ದಾರೆ ಅನ್ನೋ ಸ್ಫೋಟಕ ಸುಳಿವು ನೀಡಿದ್ರು.

ಯಾರು ಈ ರಜತ್​ ಪಾಟಿದಾರ್​​?

2024ರ ಐಪಿಎಲ್‌ನಲ್ಲಿ ಆರ್​​ಸಿಬಿ ತಂಡದ ಬ್ಯಾಟಿಂಗ್‌ ಬಲವಾಗಿದ್ದವರು ರಜತ್ ಪಟಿದಾರ್. ಆರಂಭದ ಕೆಲವು ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾದ್ರೂ ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿ ಅಬ್ಬರಿಸಿದ್ರು. ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲರ್​ಗಳಿಗೆ ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ.

ಪಾಟಿದಾರ್​ ಐಪಿಎಲ್​ ಸಾಧನೆ

ಇದುವರೆಗೂ 27 ಐಪಿಎಲ್ ಪಂದ್ಯಗಳನ್ನು ಆಡಿರುವ ಪಟಿದಾರ್, 37.74 ಸರಾಸರಿ, 158.85 ಸ್ಟ್ರೈಕ್‌ರೇಟ್‌ನಲ್ಲಿ 799 ರನ್ ಗಳಿಸಿದ್ದಾರೆ. 112 ರನ್ ಅವರ ಹೈಎಸ್ಟ್​ ಸ್ಕೋರ್​ ಆಗಿದೆ. ಇದರ ಜೊತೆ 7 ಅರ್ಧಶತಕ ಕೂಡ ಬಾರಿಸಿದ್ದಾರೆ. ಈ ಪೈಕಿ 51 ಫೋರ್​​, 54 ಸಿಕ್ಸರ್ ಬಾರಿಸೋ ಮೂಲಕ ಗಮನ ಸೆಳೆದಿದ್ದಾರೆ. 2025ರ ಐಪಿಎಲ್‌ನಲ್ಲಿ ಆರ್​ಸಿಬಿ ತಂಡದ ಪ್ರಮುಖ ಬ್ಯಾಟರ್ ಆಗಿದ್ದು, ಕೊಹ್ಲಿ ಒಪ್ಪದೇ ಇದ್ದರೆ ಪಟಿದಾರ್ ಕೂಡ ನಾಯಕತ್ವದ ರೇಸ್‌ನಲ್ಲಿ ಇರಲಿದ್ದಾರೆ.

ಇದನ್ನೂ ಓದಿ:ಕೆ.ಎಲ್​ ರಾಹುಲ್​ಗೆ ಸುವರ್ಣಾವಕಾಶ; ಟೀಮ್​ ಇಂಡಿಯಾದಲ್ಲಿ ಮಹತ್ವದ ಜವಾಬ್ದಾರಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment