/newsfirstlive-kannada/media/post_attachments/wp-content/uploads/2025/04/VIRAT_KOHLI_RCB_COACH.jpg)
ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಎಂಟ್ರಿಗೆ 6 ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯುತ್ತಿದೆ. ಇದರಿಂದ ತವರಿನ ಸೋಲಿಗೆ ಆರ್ಸಿಬಿ ಇಂದು ಬ್ರೇಕ್ ಹಾಕಲೇಬೇಕಿದೆ. 8 ಪಂದ್ಯಗಳ ಪೈಕಿ 5 ಗೆದ್ದಿರುವ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿದೆ. ಆದರೆ ಚಿನ್ನಸ್ವಾಮಿಯಲ್ಲಿ ಆಡಿದ 3 ಪಂದ್ಯಗಳಲ್ಲೂ ನೆಲಕಚ್ಚಿರುವುದು ಬೇಸರದ ಸಂಗತಿ.
ಇಂದಿನ ರಾಜಸ್ಥಾನ್ ವಿರುದ್ಧದ ಪಂದ್ಯ ಸೇರಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಒಟ್ಟು 4 ಪಂದ್ಯಗಳನ್ನ ಆಡಲಿದೆ. ಇವುಗಳಲ್ಲಿ ಕನಿಷ್ಠ ಎಂದರೂ 3 ಪಂದ್ಯಗಳನ್ನಾದರೂ ಗೆಲ್ಲಬೇಕಿದೆ. ಇಲ್ಲದಿದ್ರೆ ಕಳೆದ ಬಾರಿಯಂತೆ ಈ ಬಾರಿಯೂ ಆರ್ಸಿಬಿಗೆ ಪ್ಲೇ ಆಫ್ ಹಾದಿ ಕಷ್ಟವಾಗುತ್ತದೆ. ಪ್ಲೇ ಆಫ್ ಹಿನ್ನೆಲೆಯಲ್ಲಿ ತವರಿನಲ್ಲೇ ನಡೆಯುವ ಎಲ್ಲ ಪಂದ್ಯಗಳು ಆರ್ಸಿಬಿ ಈಗ ಅತ್ಯಂತ ಮುಖ್ಯವಾಗಿವೆ.
ಇದನ್ನೂ ಓದಿ: ಹಿಟ್ಮ್ಯಾನ್ ಸ್ಫೋಟಕ ಬ್ಯಾಟಿಂಗ್.. ರೋಹಿತ್, ಸೂರ್ಯ ಹೊಡೆತಕ್ಕೆ SRHಗೆ ಸೋಲು
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೇಸಿಂಗ್ ಮಾಡುವ ಟೀಮ್ಗೆ ಅಡ್ವಾಂಟೇಜ್ ಇದೆ. ಇಲ್ಲಿ ಆಡಿದ 3 ಪಂದ್ಯಗಳಲ್ಲಿ ಆರ್ಸಿಬಿ ಈಗಾಗಲೇ ಸೋತಿರೋದಕ್ಕೆ ಟಾಸ್ ಕೂಡ ಮುಖ್ಯ ಕಾರಣ. ಹಾಗಂತ ಟಾಸ್ ಅನ್ನು ನಂಬಲು ಆಗಲ್ಲ. ಇಂದಿನ ಪಂದ್ಯದಲ್ಲೂ ಟಾಸ್ ಸೋತ್ರೆ, ಬ್ಯಾಟ್ಸ್ಮನ್ಗಳು ಜವಾಬ್ಧಾರಿಯುತ ಆಟವಾಡಬೇಕಿದೆ. ಅಟ್ಯಾಕಿಂಗ್ ಆಟದ ಜೊತೆಗೆ ಸ್ವಲ್ಪ ಎಚ್ಚರಿಕೆಯ ಆಟವಾಡಿ ಬಿಗ್ ಟಾರ್ಗೆಟ್ ಸೆಟ್ ಮಾಡಿದ್ರೆ, ಬೌಲರ್ಗಳಿಗೆ ರಿಲೀಫ್ ಪಕ್ಕಾ.
ಇಂದಿನ ಪಂದ್ಯದಲ್ಲಿ ಆರ್ಸಿಬಿ ಪ್ಲೇಯಿಂಗ್- 11ನಲ್ಲಿ ಬದಲಾವಣೆ ಆಗೋ ಸಾಧ್ಯತೆಯಿದೆ. ಪಂಜಾಬ್ ವಿರುದ್ಧ ಆಡಿದ ತಂಡವನ್ನೇ ಇಂದು ಮುಂದುವರೆಸೋ ಸಾಧ್ಯತೆಯಿದೆ. ಬಿಗ್ಹಿಟ್ಟರ್ ರೊಮಾರಿಯೋ ಶೆಫರ್ಡ್ ಎಂಟ್ರಿ ತಂಡದ ಸ್ಟ್ರೆಂಥ್ ಹೆಚ್ಚಿಸಿದೆ. ಚಿನ್ನಸ್ವಾಮಿಯಲ್ಲಿ ಆಡಿದ ಹಿಂದಿನ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಬದಲಿಗೆ ಮನೋಜ್ ಬಾಂಡಗೆಗೆ ಚಾನ್ಸ್ ನೀಡಿ ಮ್ಯಾನೇಜ್ಮೆಂಟ್ ಕೈ ಸುಟ್ಟುಕೊಂಡಿತ್ತು. ಆದ್ರೆ, ಇಂದು ಫಾರ್ಮ್ನಲ್ಲಿರೋ ಪಡಿಕ್ಕಲ್ ಮುಂದುವರೆಯಲಿದ್ದಾರೆ. ಕೃನಾಲ್ ಪಾಂಡ್ಯ ದುಬಾರಿ ಆಗ್ತಿರೋದ್ರಿಂದ ಸ್ವಪ್ನಿಲ್ ಸಿಂಗ್ ಎಂಟ್ರಿಯಾದ್ರೆ ಅಚ್ಚರಿ ಪಡಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ