ಫೈನಲ್​ಗೆ ಎಂಟ್ರಿ ಕೊಟ್ಟ ಆರ್​ಸಿಬಿ.. ಕರ್ನಾಟಕದಲ್ಲಿ ಸಂಭ್ರಮ ಹೇಗಿತ್ತು..? Photos

author-image
Ganesh
Updated On
RCB ಅಭಿಮಾನಿಗಳೇ ಹುಷಾರ್..!​ ಹದ್ದುಮೀರಿ ವರ್ತಿಸಿದರೆ ಕಾದಿದೆ ಬಿಗ್ ಶಾಕ್​!
Advertisment
  • ಫೈನಲ್​ಗೆ ರಾಯಲ್​ ಎಂಟ್ರಿ ಕೊಟ್ಟ ಬೆಂಗಳೂರು ಬಾಯ್ಸ್​
  • ಕ್ವಾಲಿ‘ಫೈಯರ್​​’ ಪಂದ್ಯದಲ್ಲಿ ಆರ್​ಸಿಬಿ ಭರ್ಜರಿ ಪ್ರದರ್ಶನ
  • ಬೆಂಗಳೂರಿನಲ್ಲಿ ಆರ್​ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

ಪಂಜಾಬ್​ ವಿರುದ್ಧದ ಕ್ವಾಲಿಫೈಯರ್​​ ಕಾದಾಟದಲ್ಲಿ ಆರ್​​ಸಿಬಿ ನಿಜಕ್ಕೂ ಬೆಂಕಿಯಂಥ ಆಟವಾಡಿದೆ. ಆರ್​​ಸಿಬಿ ಬೌಲರ್​​ಗಳಂತೂ ಬಿರುಗಾಳಿಯಂತಹ ಬೌಲಿಂಗ್​ ದಾಳಿ ನಡೆಸಿದ್ರು. ಆರ್​​ಸಿಬಿ ಅಬ್ಬರದ ಮುಂದೆ ಹೋಮ್​​ಗ್ರೌಂಡ್​ನಲ್ಲಿ ಪಂಜಾಬ್​ ಪಡೆ ಠುಸ್​ ಆಯ್ತು. ಗೆದ್ದ ಆರ್​​ಸಿಬಿ ಫೈನಲ್​ಗೆ ರಾಯಲ್​ ಎಂಟ್ರಿ ಕೊಡ್ತು. ಇದಕ್ಕೆ ಸರಿಸಮನಾಗಿ ಆರ್​ಸಿಬಿ ಫ್ಯಾನ್ಸ್​ನ ಸಂಭ್ರಮ ಮುಗಿಲುಮುಟ್ಟಿತ್ತು.

publive-image

ಫೈನಲ್​ಗೆ ರಾಯಲ್​ ಎಂಟ್ರಿ ಕೊಟ್ಟ ಬೆಂಗಳೂರು ಬಾಯ್ಸ್​

ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಆರ್​​ಸಿಬಿ ರಜತ್​ ಪಟಿದಾರ್​ ಪ್ಲಾನ್ ಆರಂಭದಲ್ಲೇ ಸಕ್ಸಸ್​ ಕಾಣ್ತು. ಪಂಜಾಬ್​ ಓಪನರ್​ಗಳು ಬಾಲ ಬಿಚ್ಚೋಕೆ ಆರ್​​ಸಿಬಿ ಬೌಲರ್ಸ್​ ಬಿಡಲಿಲ್ಲ. ಕಮ್​ಬ್ಯಾಕ್​ ಪಂದ್ಯದಲ್ಲಿ ಫುಲ್​ ಜೋಷ್​ನಲ್ಲಿ ಹೇಜಲ್​ವುಡ್​.. ಬ್ಯಾಕ್​ ಟು ಬ್ಯಾಕ್​ ಇಬ್ಬರ ವಿಕೆಟ್​ ಉರುಳಿಸಿ ಪಂಜಾಬ್​ ಪವರ್​ ಕಟ್​ ಮಾಡಿದ್ರು. ಸುಯಶ್​ ಶರ್ಮಾ ಅಕ್ಷರಶಃ ಸ್ಪಿನ್​ ಜಾದೂ ಮಾಡಿದ್ರು. 14.1 ಓವರ್​​ಗಳಲ್ಲಿ 101 ರನ್​ಗಳಿಸಿ ಪಂಜಾಬ್​ ಆಲೌಟ್​​ ಆಯ್ತು.

publive-image

ಈ ಟಾರ್ಗೆಟ್​ ಬೆನ್ನತ್ತಿದ ಆರ್​​ಸಿಬಿ, ವಿರಾಟ್​​ ಕೊಹ್ಲಿ 2 ಬೌಂಡರಿ ಬಾರಿಸಿ 12 ರನ್​ಗಳಿಸಿ ಆಟ ಮುಗಿಸಿದ್ರು. ಅಗ್ರೆಸ್ಸಿವ್​ ಆಟವಾಡಿದ ಫಿಲ್​ ಸಾಲ್ಟ್​​ ಕ್ಲಾಸ್​ ಬೌಂಡರಿಗಳನ್ನ ಬಾರಿಸಿ ಕೇವಲ 23 ಎಸೆತಗಳಲ್ಲಿ 56 ರನ್ ಸಿಡಿಸಿ ಸಂಭ್ರಮಿಸಿದ್ರು. 60 ಎಸೆತಗಳು ಇರುವಂತೆ ಭರ್ಜರಿ ಜಯಭೇರಿ ಬಾರಿಸಿ 4ನೇ ಬಾರಿಗೆ ಫೈನಲ್​ಗೆ ಆರ್​ಸಿಬಿ ರಾಯಲ್​ ಎಂಟ್ರಿ ಕೊಡ್ತು.

publive-image

ಬೆಂಗಳೂರಿನಲ್ಲಿ ಸಂಭ್ರಮಾಚರಣೆ

ಆರ್​ಸಿಬಿ ನಡೆಸಿದ ದಂಗಲ್​ಗೆ ಪಂಜಾಬ್ ಕಂಗಾಲ್​ ಆಗಿದೆ. ಆರ್​ಸಿಬಿ ಅಬ್ಬರಿಸಿದಷ್ಟೇ ಅವರ ಅಭಿಮಾನಿಗಳೂ ಅಬ್ಬರಿಸಿದ್ದಾರೆ. ಬೆಂಗಳೂರಿನಲ್ಲಿ ಬೆಂಗಳೂರು ಬಾಯ್ಸ್​ ಫ್ಯಾನ್ಸ್​ ಸೆಲೆಬ್ರೇಷನ್​ನ ಬೇರೆ ಲೆವೆಲ್​ಗೆ ಇತ್ತು.. ನಗರದ ಪಟಾಕಿಗಳು ಒಂದ್ಕಡೆ ಸಿಡೀತಿದ್ರೆ.. ರಸ್ತೆ ಮಧ್ಯೆ ಜನ ಸೇರಿ ಆರ್​ಸಿಬಿ.. ಆರ್​ಸಿಬಿ ಅನ್ನೋ ಕೂಗು ಕಿವಿಯಲ್ಲಿ ಗುಂಯ್​ ಗುಡುತ್ತಿತ್ತು.

publive-image

ಬೆಂಗಳೂರಿನ ವಿಜಯನಗರದಲ್ಲೂ ಆರ್​ಸಿಬಿ ಅಭಿಮಾನಕ್ಕೆ ಪಾರವೇ ಇರಲಿಲ್ಲ. ಮಹಿಳೆಯರು.. ಯುವಕ.. ಯುವತಿಯರು.. ಮಕ್ಕಳ ಸಮೇತ ಎಲ್ಲರೂ ರಸ್ತೆ ಮಧ್ಯೆ ಕುಣಿದು ಕುಪ್ಪಳಿಸಿದ್ರು.

publive-image

ಇತ್ತ ಆರ್​.ಆರ್​ ನಗರದಲ್ಲಿ ಪಟಾಕಿ ಸರಗಳನ್ನ ಸಿಡಿಸಿ ಸಂಭ್ರಮಿಸಿದ್ರು.. ಆರ್​ಸಿಬಿ ಕ್ವಾಲಿಫೈಯರ್ ಆದ ಫೈಯರ್ ಇಲ್ಲಿ ಎದ್ದು ಕಾಣ್ತಿತ್ತು..

publive-image

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಸಂಭ್ರಮದ ಜೊತೆ ಪಟಾಕಿ ಸದ್ದು ಜೋರಾಗಿತ್ತು. ಆರ್​ಸಿಬಿ ಫೈನಲ್​ಗೆ ಪ್ರವೇಶ ಮಾಡುತ್ತಿದ್ದಂತೆಯೇ ಅಭಿಮಾನಿಗಳ ಹರ್ಷಕ್ಕೆ ಪಾರವೇ ಇರಲಿಲ್ಲ. ಒಟ್ಟಾರೆ ಆರ್​ಸಿಬಿ ಆರ್​ಸಿಬಿ ಅನ್ನೋ ಘೋಷವಾಕ್ಯ ಕ್ರೀಡಾಂಗಣದಲ್ಲಿ ಮಾತ್ರವಲ್ಲದೇ ನಾಡಿನೆಲ್ಲೆಡೆ ಮೊಳಗಿತ್ತು.

publive-image

ಪಂಜಾಬ್​ ವರ್ಸಸ್​ ಮುಂಬೈ ನಡುವೆ ಇಂದು ಎಲಿಮಿನಟೇರ್​ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದವರು ಜೂನ್​ 3ರಂದು ಅಹಮದಾಬಾದ್​ನಲ್ಲಿ ನಡೆಯುವ ಫೈನಲ್​ನಲ್ಲಿ ಕಾದಾಡಲಿದ್ದಾರೆ. ಸದ್ಯ ಫೈನಲ್​ಗೆ ಲಗ್ಗೆ ಇಟ್ಟಿರುವ ಆರ್​ಸಿಬಿ ಈ ಸಲನಾದ್ರೂ ಕಪ್ ಗೆಲ್ಲಲಿ ಅನ್ನೋದೇ ಕೋಟಿ ಕೋಟಿ ಅಭಿಮಾನಿಗಳ ಆಶಯ.. ಹಾರೈಕೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment