/newsfirstlive-kannada/media/post_attachments/wp-content/uploads/2025/04/VIRAT_KOHLI_RCB_COACH.jpg)
ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ಪಂದ್ಯ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದೊಂದು ಕೊರಗನ್ನು ಇಂದು ನೀಗಿಸಬೇಕಿದೆ. ಕಳೆದ 10 ವರ್ಷಗಳಿಂದ ಬೆಂಗಳೂರು ದೊಡ್ಡ ಭಾರವನ್ನು ಹೊತ್ತುಕೊಂಡು ಮುಂಬೈಗೆ ಹೋಗುತ್ತಿದೆ. ಆದರೆ ಆ ಭಾರ ಆರ್ಸಿಬಿ ತಂಡದ ಹೆಗಲಿನಿಂದ ಇಳಿಯುತ್ತಿಲ್ಲ. ಸದ್ಯ ಇಂದಿನ ಪಂದ್ಯದಲ್ಲಿ ಅದಕ್ಕೆ ಬ್ರೇಕ್ ಹಾಕಬೇಕಾಗಿದೆ.
ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಟೀಮ್ ಯಾವುದೇ ತಂಡವಾಗಲಿ ತಮ್ಮ ತಮ್ಮ ತವರು ಮೈದಾನದಲ್ಲಿ ಹುಲಿಯಂತೆ ಘರ್ಜನೆ ಮಾಡುತ್ತವೆ. ಅದರಂತೆ ಕಳೆದ 10 ವರ್ಷಗಳಿಂದ ಮುಂಬೈ ಇಂಡಿಯನ್ಸ್, ಆರ್ಸಿಬಿ ಮೇಲೆ ತನ್ನ ಪ್ರಾಬಲ್ಯ ಸಾಧಿಸುತ್ತ ಬಂದಿದೆ. ಅಂದರೆ ತನ್ನ ತವರಿನ ಪಿಚ್ ಅಂಧರೆ ವಾಂಖೆಡೆಯಲ್ಲಿ ಆರ್ಸಿಬಿಯ ಅಟ ಏನು ನಡೆಯದಂತೆ ಮುಂಬೈ ಇಂಡಿಯನ್ಸ್ ಮಾಡುತ್ತಿದೆ. ಹೀಗಾಗಿ 10 ವರ್ಷಗಳಿಂದ ಆರ್ಸಿಬಿ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ ಪಂದ್ಯ ಗೆದ್ದಿಲ್ಲ.
ಇದೊಂದು ಕೊರಗಿಗೆ ರಾಯಲ್ ಚಾಲೆಂಜರ್ಸ್ ಪ್ಲೇಯರ್ಸ್ ಬ್ರೇಕ್ ಹಾಕಬೇಕಿದೆ. ವಾಂಖೆಡೆಯಲ್ಲಿ ಆರ್ಸಿಬಿ ಕೊನೆಯದಾಗಿ 2015ರಲ್ಲಿ ಜಯ ಸಾಧಿಸಿತ್ತು. ಅಂದಿನಿಂದ ಇಂದಿನವರೆಗೂ ಮುಂಬೈ ವಿರುದ್ಧ ವಾಂಖೆಯಲ್ಲಿ ಗೆಲುವು ಅನ್ನೋದೇ ಆರ್ಸಿಬಿ ನೋಡಿಲ್ಲ. 2015ರಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 82 ಹಾಗೂ ಎಬಿ ಡಿವಿಲಿಯರ್ಸ್ 133 ರನ್ಗಳಿಂದ ಆರ್ಸಿಬಿ 235 ರನ್ಗಳ ಟಾರ್ಗೆಟ್ ಸೆಟ್ ಮಾಡಿತ್ತು. ಆದ್ರೆ ಈ ಟಾರ್ಗೆಟ್ನಿಂದ ಭಯ ಬಿದ್ದಿದ್ದ ಮುಂಬೈ 39 ರನ್ಗಳಿಂದ ಸೋಲೋಪ್ಪಿಕೊಂಡಿತ್ತು.
ಇದನ್ನೂ ಓದಿ:ಟಾಸ್ ಗೆದ್ದವನೇ ಬಾಸು.. ಆರ್ಸಿಬಿ ಪ್ಲೇಯಿಂಗ್-11ನಲ್ಲಿ ಭಾರೀ ಬದಲಾವಣೆ ನಿರೀಕ್ಷೆ..!
2015ರ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ 6 ಪಂದ್ಯಗಳನ್ನು ಆಡಿದ್ದು ಈ 6ರಲ್ಲೂ ಸೋತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. 2016ರಲ್ಲಿ 6 ವಿಕೆಟ್ನಿಂದ ಸೋತಿತ್ತು. ಇದಾದ ಮೇಲೆ 2017ರಲ್ಲಿ 5 ವಿಕೆಟ್ನಿಂಧ ಪರಾಭವಗೊಂಡಿತು. 2018ರಲ್ಲಿ 46 ರನ್ಗಳಿಂದ ಸೋಲೋಪ್ಪಿತು. 2019ರಲ್ಲಿ 5 ವಿಕೆಟ್ನಿಂದ ತಲೆ ಬಾಗಿತು.
2023ರಲ್ಲಿ 6 ವಿಕೆಟ್ ಹಾಗೂ 2024ರಲ್ಲಿ 7 ವಿಕೆಟ್ನಿಂದ ಮುಂಬೈ ವಿರುದ್ಧ ಬೆಂಗಳೂರು ಸೋತಿದೆ. ಇಂತಹ ಕೆಟ್ಟ ದಾಖಲೆಗೆ ಆರ್ಸಿಬಿ ಈಗ ಬ್ರೇಕ್ ಹಾಕಬೇಕಿದೆ. ಇದೇ ಸೀಸನ್ನಲ್ಲಿ ಆರ್ಸಿಬಿ 2ನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ತಂಡವನ್ನು ಅವರ ನೆಲದಲ್ಲಿಯೇ 17 ವರ್ಷಗಳ ಬಳಿಕ ಸೋಲಿಸಿ ಸಂಭ್ರಮಿಸಿತು. ಇಂತಹ ಕ್ಷಣ ಮುಂಬೈ ವಿರುದ್ಧವೂ ನಡೆಯಬಹುದು ಎಂದು ನಿರೀಕ್ಷಣೆ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ