2025ರ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಆರ್ಸಿಬಿ ಭರ್ಜರಿ ತಯಾರಿ
ವರ್ಷದ ಕೊನೆಗೆ ನಡೆಯಲಿರೋ ಬಹುನಿರೀಕ್ಷಿತ ಮೆಗಾ ಐಪಿಎಲ್ ಹರಾಜು
ಹರಾಜಿನಲ್ಲಿ ವಿಕೆಟ್ ಕೀಪರ್ ಸ್ಟಾರ್ ಫಿನಿಶರ್ಗಾಗಿ ಆರ್ಸಿಬಿ ಹುಡುಕಾಟ!
ಕಳೆದ ಮೂರು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಫಿನಿಶರ್ ಆಗಿದ್ದವರು ದಿನೇಶ್ ಕಾರ್ತಿಕ್. ದಿನೇಶ್ ಕಾರ್ತಿಕ್ ಅವರು 2025ರ ಐಪಿಎಲ್ ಸೀಸನ್ಗೂ ಮುನ್ನ ಆರ್ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಹಾಗಾಗಿ ಆರ್ಸಿಬಿ ತಂಡಕ್ಕೆ ಫಿನಿಶರ್ ಬೇಕಿದೆ.
ಆರ್ಸಿಬಿ ತಂಡವು ಮುಂದಿನ ಸೀಸನ್ಗೆ ಹೊಸ ಫಿನಿಶರ್ಗಾಗಿ ಹುಡುಕಾಟದಲ್ಲಿದೆ. ವಿಕೆಟ್ ಕೀಪಿಂಗ್ ಜತೆಗೆ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಫಿನಿಶ್ ಮಾಡಬೇಕಿರೋ ಆಟಗಾರ ಆರ್ಸಿಬಿಗೆ ಬೇಕಾಗಿದೆ. ಹಾಗಾಗಿ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಸ್ಪೋಟಕ ಬ್ಯಾಟರ್ ರಿಷಭ್ ಪಂತ್ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಪಂತ್ ಆರ್ಸಿಬಿಗೆ ಬಂದರೆ ಮೂರು ಸ್ಲಾಟ್ಗಳು ಫಿಲ್ ಆಗಲಿವೆ ಎಂಬುದು ಮ್ಯಾನೇಜ್ಮೆಂಟ್ ಪ್ಲಾನ್.
ಪಂತ್ಗೆ ಮಣೆ ಹಾಕಲಿರೋ ಆರ್ಸಿಬಿ!
ಈ ವರ್ಷದ ಕೊನೆಗೆ 2025ರ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ದಿನೇಶ್ ಕಾರ್ತಿಕ್ ಇಲ್ಲದ ಕಾರಣ ಹರಾಜಿನಲ್ಲಿ ಆರ್ಸಿಬಿ ಅನುಭವಿ ಮಿಡಲ್ ಆರ್ಡರ್ ವಿಕೆಟ್ ಕೀಪರ್ ಬ್ಯಾಟರ್ಗಾಗಿ ಹುಡುಕಾಟ ನಡೆಸಲಿದೆ. ಹೀಗಾಗಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟರೆ, ಆರ್ಸಿಬಿಗೆ ಬರಬಹುದು. ಇದರಿಂದ ಆರ್ಸಿಬಿ ತಂಡ ಮಾಡಿಕೊಂಡ ಪ್ಲ್ಯಾನ್ ವರ್ಕ್ ಆಗುತ್ತದೆ ಅನ್ನೋ ಚರ್ಚೆ ನಡೆಯುತ್ತಿದೆ.
ಪಂತ್ ಒಳ್ಳೆ ಕ್ಯಾಪ್ಟನ್. ಆರ್ಸಿಬಿ ಬಲಿಷ್ಠ ತಂಡ ಕಟ್ಟೋ ಉದ್ದೇಶದಿಂದ ಯುವ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಪಂತ್ ಸಿಕ್ಕರೆ ಆರ್ಸಿಬಿ ಹಣದ ಹೊಳೆಯನ್ನೇ ಹರಿಸಬಹುದು. ಅಲ್ಲದೆ ಇವರು ವಿಕೆಟ್ ಕೀಪಿಂಗ್ ಮಿಡಲ್ ಆರ್ಡರ್ ಬ್ಯಾಟರ್ ಆಗಿ ನ್ಯಾಯ ಒದಗಿಸಬಲ್ಲರು. ಹೀಗಾಗಿ ಆರ್ಸಿಬಿ ಒಂದೇ ಕಲ್ಲಿಗೆ ಮೂರು ಸ್ಲಾಟ್ಗಳನ್ನು ಫಿಲ್ ಮಾಡಿಕೊಳ್ಳು ಪ್ಲ್ಯಾನ್ ಮಾಡಿಕೊಂಡಿದೆ.
ಇದನ್ನೂ ಓದಿ: VIDEO: RCB ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಕೊಹ್ಲಿ, KL ರಾಹುಲ್.. ನೀವು ನೋಡಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಆರ್ಸಿಬಿ ಭರ್ಜರಿ ತಯಾರಿ
ವರ್ಷದ ಕೊನೆಗೆ ನಡೆಯಲಿರೋ ಬಹುನಿರೀಕ್ಷಿತ ಮೆಗಾ ಐಪಿಎಲ್ ಹರಾಜು
ಹರಾಜಿನಲ್ಲಿ ವಿಕೆಟ್ ಕೀಪರ್ ಸ್ಟಾರ್ ಫಿನಿಶರ್ಗಾಗಿ ಆರ್ಸಿಬಿ ಹುಡುಕಾಟ!
ಕಳೆದ ಮೂರು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಫಿನಿಶರ್ ಆಗಿದ್ದವರು ದಿನೇಶ್ ಕಾರ್ತಿಕ್. ದಿನೇಶ್ ಕಾರ್ತಿಕ್ ಅವರು 2025ರ ಐಪಿಎಲ್ ಸೀಸನ್ಗೂ ಮುನ್ನ ಆರ್ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಹಾಗಾಗಿ ಆರ್ಸಿಬಿ ತಂಡಕ್ಕೆ ಫಿನಿಶರ್ ಬೇಕಿದೆ.
ಆರ್ಸಿಬಿ ತಂಡವು ಮುಂದಿನ ಸೀಸನ್ಗೆ ಹೊಸ ಫಿನಿಶರ್ಗಾಗಿ ಹುಡುಕಾಟದಲ್ಲಿದೆ. ವಿಕೆಟ್ ಕೀಪಿಂಗ್ ಜತೆಗೆ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಫಿನಿಶ್ ಮಾಡಬೇಕಿರೋ ಆಟಗಾರ ಆರ್ಸಿಬಿಗೆ ಬೇಕಾಗಿದೆ. ಹಾಗಾಗಿ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಸ್ಪೋಟಕ ಬ್ಯಾಟರ್ ರಿಷಭ್ ಪಂತ್ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಪಂತ್ ಆರ್ಸಿಬಿಗೆ ಬಂದರೆ ಮೂರು ಸ್ಲಾಟ್ಗಳು ಫಿಲ್ ಆಗಲಿವೆ ಎಂಬುದು ಮ್ಯಾನೇಜ್ಮೆಂಟ್ ಪ್ಲಾನ್.
ಪಂತ್ಗೆ ಮಣೆ ಹಾಕಲಿರೋ ಆರ್ಸಿಬಿ!
ಈ ವರ್ಷದ ಕೊನೆಗೆ 2025ರ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ದಿನೇಶ್ ಕಾರ್ತಿಕ್ ಇಲ್ಲದ ಕಾರಣ ಹರಾಜಿನಲ್ಲಿ ಆರ್ಸಿಬಿ ಅನುಭವಿ ಮಿಡಲ್ ಆರ್ಡರ್ ವಿಕೆಟ್ ಕೀಪರ್ ಬ್ಯಾಟರ್ಗಾಗಿ ಹುಡುಕಾಟ ನಡೆಸಲಿದೆ. ಹೀಗಾಗಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟರೆ, ಆರ್ಸಿಬಿಗೆ ಬರಬಹುದು. ಇದರಿಂದ ಆರ್ಸಿಬಿ ತಂಡ ಮಾಡಿಕೊಂಡ ಪ್ಲ್ಯಾನ್ ವರ್ಕ್ ಆಗುತ್ತದೆ ಅನ್ನೋ ಚರ್ಚೆ ನಡೆಯುತ್ತಿದೆ.
ಪಂತ್ ಒಳ್ಳೆ ಕ್ಯಾಪ್ಟನ್. ಆರ್ಸಿಬಿ ಬಲಿಷ್ಠ ತಂಡ ಕಟ್ಟೋ ಉದ್ದೇಶದಿಂದ ಯುವ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಪಂತ್ ಸಿಕ್ಕರೆ ಆರ್ಸಿಬಿ ಹಣದ ಹೊಳೆಯನ್ನೇ ಹರಿಸಬಹುದು. ಅಲ್ಲದೆ ಇವರು ವಿಕೆಟ್ ಕೀಪಿಂಗ್ ಮಿಡಲ್ ಆರ್ಡರ್ ಬ್ಯಾಟರ್ ಆಗಿ ನ್ಯಾಯ ಒದಗಿಸಬಲ್ಲರು. ಹೀಗಾಗಿ ಆರ್ಸಿಬಿ ಒಂದೇ ಕಲ್ಲಿಗೆ ಮೂರು ಸ್ಲಾಟ್ಗಳನ್ನು ಫಿಲ್ ಮಾಡಿಕೊಳ್ಳು ಪ್ಲ್ಯಾನ್ ಮಾಡಿಕೊಂಡಿದೆ.
ಇದನ್ನೂ ಓದಿ: VIDEO: RCB ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಕೊಹ್ಲಿ, KL ರಾಹುಲ್.. ನೀವು ನೋಡಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್