RCBಗೆ ಮತ್ತೆ ಕೈಕೊಟ್ಟ ಟಾಸ್​.. ಪ್ಲೇಯಿಂಗ್-11ರಲ್ಲಿ ಬಲಿಷ್ಠ ಬೆಂಗಳೂರು ತಂಡ ಹೇಗಿದೆ?

author-image
Bheemappa
Updated On
RCBಗೆ ಮತ್ತೆ ಕೈಕೊಟ್ಟ ಟಾಸ್​.. ಪ್ಲೇಯಿಂಗ್-11ರಲ್ಲಿ ಬಲಿಷ್ಠ ಬೆಂಗಳೂರು ತಂಡ ಹೇಗಿದೆ?
Advertisment
  • ಬಲಿಷ್ಠ ಮುಂಬೈ ಇಂಡಿಯನ್ಸ್​ಗೆ ಟಕ್ಕರ್ ಕೊಡಲು ಬೆಂಗಳೂರು ರೆಡಿ
  • ಎಷ್ಟೋ ವರ್ಷಗಳಿಂದ ಮುಂಬೈ ತಂಡದ ವಿರುದ್ಧ ಆರ್​ಸಿಬಿ ಗೆದ್ದಿಲ್ಲ
  • ಆರ್​ಸಿಬಿಯ ಆಲ್​ರೌಂಡರ್​ ಪರ್ಫಾಮೆನ್ಸ್ ಪಂದ್ಯದಲ್ಲಿ ಹೇಗಿರುತ್ತೆ?

2025ರ ಐಪಿಎಲ್ ಟೂರ್ನಿಯ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಸೋತರೂ ರಜತ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬ್ಯಾಟಿಂಗ್ ಮಾಡಲಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರ್​ಸಿಬಿ ಟೀಮ್ ಮೊದಲ ಬ್ಯಾಟಿಂಗ್ ಮಾಡಲಿದ್ದು ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಓಪನರ್ ಆಗಿ ಎಂದಿನಂತೆ ಕ್ರೀಸ್​ಗೆ ​ಆಗಮಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ ಬ್ಯಾಟಿಂಗ್ ಮುಖ್ಯವಾಗುತ್ತದೆ. ಫಿನಿಸಿಂಗ್​ ಟಚ್​ನಲ್ಲಿ ಲೈಮ್ ಲಿವಿಂಗ್​ಸ್ಟನ್, ಟಿಮ್ ಡೇವಿಡ್ ಅಖಾಡದಲ್ಲಿದ್ದಾರೆ. ವಿಕೆಟ್​ ಕೀಪರ್ ಕಮ್ ಬ್ಯಾಟ್ಸ್​ಮನ್ ಆಗಿ ಜಿತೇಶ್ ಶರ್ಮಾ ಟೀಮ್​ನಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ RCB ಎಷ್ಟೋ ವರ್ಷಗಳಿಂದ ಗೆದ್ದಿಲ್ಲ.. ಆ ದಾಖಲೆಗೆ ಬ್ರೇಕ್ ಬೀಳುತ್ತಾ?

publive-image

ಕೃನಾಲ್ ಪಾಂಡ್ಯ, ಲೈಮ್ ಲಿವಿಂಗ್​ಸ್ಟನ್ ಆಲೌರೌಂಡರ್ ಆಗಿ ಮೈದಾನಕ್ಕೆ ಇಳಿಯುತ್ತಿದ್ದು, ಜೋಶ್ ಹ್ಯಾಜಲ್ವುಡ್ ಹಾಗೂ ಭುವನೇಶ್ವರ್, ಯಶ್ ದಯಾಳ್ ಆರ್​ಸಿಬಿ ಬೌಲಿಂಗ್ ಶಕ್ತಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್​ ಕೂಡ ತವರಿನ ಪಿಚ್​ನಲ್ಲಿ ಬಲಿಷ್ಠವಾಗಿ ಹೋರಾಡುತ್ತಿದೆ. ಹೀಗಾಗಿಯೇ ಕಳೆದ 10 ವರ್ಷಗಳಿಂದ ಆರ್​ಸಿಬಿ ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಪಂದ್ಯ ಗೆದ್ದಿಲ್ಲ. ಸದ್ಯ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಒಳ್ಳೆಯ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಇದರ ಜೊತೆಗೆ ಜಸ್​ಪ್ರಿತ್ ಬೂಮ್ರಾ ಕೂಡ ತಂಡಕ್ಕೆ ಎಂಟ್ರಿಕೊಟ್ಟಿದ್ದರಿಂದ ಆರ್​ಸಿಬಿ ನೋಡಿ ಹೆಜ್ಜೆ ಇಡಬೇಕಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11

ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment