/newsfirstlive-kannada/media/post_attachments/wp-content/uploads/2025/06/rcb-team2.jpg)
ಬೆಂಗಳೂರು: ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಸೇರಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ಸೋಸಲೆ ಬೆಂಗಳೂರಲ್ಲಿ ವಿಕ್ಟರಿ ಪರೇಡ್ ಅಂತ ಪೋಸ್ಟ್ ಹಾಕಿದ್ದ.
ಇದನ್ನೂ ಓದಿ: ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾದ FIR ಸಿಐಡಿಗೆ ವರ್ಗಾವಣೆ -ಕಾಲ್ತುಳಿತದ ವಿರುದ್ಧ ಸರ್ಕಾರ 6 ಆದೇಶ
ಪೊಲೀಸರ ಅನುಮತಿ ಪಡೆಯದೇ ಪೋಸ್ಟ್ ಹಾಕಿದ್ದಕ್ಕೆ ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಯನ್ನು ಅರೆಸ್ಟ್ ಮಾಡಲಾಗಿದೆ. ಅಲ್ಲದೇ ಡಿಎನ್ಎ ಸಂಸ್ಥೆಯ ಇಬ್ಬರನ್ನ ಪೊಲಿಸರು ಅರೆಸ್ಟ್ ಮಾಡಿದ್ದಾರೆ. ಡಿಎನ್ಎ ಸಂಸ್ಥೆಯ ಕಿರಣ್ ಮತ್ತು ಸುಮಂತ್ ಬಂಧಿತರಾಗಿದ್ದಾರೆ.
ನಿಖಿಲ್ ಸೋಸಲೆ ಬಂಧನಕ್ಕೆ ಕಾರಣಗಳೇನು?
ನಿಖಿಲ್ ಸೋಸಲೆ RCB ಮ್ಯಾನೇಜ್ಮೆಂಟ್ನ ಮಾರ್ಕೆಟಿಂಗ್ ಹೆಡ್ ಆಗಿದ್ದ. ಇವರೇ ಸೋಷಿಯಲ್ ಮೀಡಿಯಾದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್ ಅಂತ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಪೊಲೀಸರ ಅನುಮತಿ ಪಡೆಯದೇ ಪೇಜ್ನಲ್ಲಿ ಪರೇಡ್ ಬಗ್ಗೆ0 ಪೋಸ್ಟ್ ಮಾಡಿದ್ದಾರೆ. ಆದ್ರೆ ಪರೇಡ್ ಬಗ್ಗೆ ಕಮಿಷನರ್ ನಿರಾಕರಿಸಿದ ನಂತರ ಪೋಸ್ಟ್ ಡಿಲೀಟ್ ಮಾಡಿರಲಿಲ್ಲ. ಇಷ್ಟೇ ಅಲ್ಲದೇ ಸ್ಟೇಡಿಯಂನಲ್ಲಿ ಸೆಲೆಬ್ರೇಷನ್ಗೆ ಉಚಿತ ಟಿಕೆಟ್ ಅಂತ ಘೋಷಿಸಲಾಗಿತ್ತು. ಗೇಟ್ 9 ಮತ್ತು 10ರ ಬಳಿ 1 ಗಂಟೆಗೆ ಟಿಕೆಟ್ ಸಿಗತ್ತೆ ಅಂತ ಹೇಳಿದ್ದರು. ಮಧ್ಯಾಹ್ನ 3ಕ್ಕೆ ಸ್ಟೇಡಿಯಂಗೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಅಂತ ಪೋಸ್ಟ್ ಹಾಕಲಾಗಿದೆ. ನಿಖಿಲ್ ಸೂಚನೆಯಂತೆ ಡಿಎನ್ಎ ಮ್ಯಾನೇಜ್ಮೆಂಟ್ ಕಂಪನಿ ವರ್ತಿಸಿತ್ತು. ಈ ಪೋಸ್ಟ್ ಹಾಕಿದ್ದಕ್ಕೆ ಲಕ್ಷಾಂತರ ಮಂದಿ ಸೇರೋದಕ್ಕೆ ಕಾರಣವಾಗಿದೆ. ಹೀಗಾಗಿಯೇ ಕಾಲ್ತುಳಿತ ಉಂಟಾಗಿ 11 ಮಂದಿ ಜೀವಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ