18ನೇ ಸೀಸನ್​ನಲ್ಲಿ ಇತಿಹಾಸ ಸೃಷ್ಟಿಸಲಿರೋ ಬೆಂಗಳೂರು; ಆರ್​​ಸಿಬಿ ರೋಚಕ ಪ್ಲಾನ್ ಲೀಕ್​​

author-image
Ganesh Nachikethu
Updated On
RCB ಅಲ್ಲವೇ ಅಲ್ಲ! ಐಪಿಎಲ್ ಇತಿಹಾಸದಲ್ಲೇ ಕೆಟ್ಟ ಪ್ರದರ್ಶನ ನೀಡ್ತಿರೋ ತಂಡ ಯಾವುದು?
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜು
  • ಮುಂದಿನ ಸೀಸನ್​​ ಆರಂಭಕ್ಕೆ ಕೇವಲ 10 ದಿನ ಮಾತ್ರ ಬಾಕಿ
  • ಈಗಾಗಲೇ ಆರ್​​ಸಿಬಿ ತಂಡದಿಂದ ಐಪಿಎಲ್​​ಗೆ ಭಾರೀ ತಯಾರಿ

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜು ಮುಗಿದಿದೆ. ಐಪಿಎಲ್ ಮುಂದಿನ ಸೀಸನ್​​ ಆರಂಭಕ್ಕೆ ಇನ್ನೇನು ಕೇವಲ 10 ದಿನ ಬಾಕಿ ಇದೆ. ಕಳೆದ 17 ಸೀಸನ್​​ಗಳಿಂದಲೂ ಕಪ್​​ ಗೆಲ್ಲುವಲ್ಲಿ ಎಡವಿದ ಆರ್​​​ಸಿಬಿ ಈ ಬಾರಿ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡ ಕಟ್ಟಿದೆ. ಅದರಲ್ಲೂ ಯುವ ಆಟಗಾರರಿಗೆ ಮಣೆ ಹಾಕಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಟ್ರೋಫಿ ಗೆಲ್ಲಲು ಈಗಾಗಲೇ ತಯಾರಿ ಶುರು ಮಾಡಿದೆ.

ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್​​ಸಿಬಿ ತಂಡದ ಸ್ಟಾರ್​ ಆಟಗಾರರು ತಯಾರಿ ಆರಂಭಿಸಿದ್ದಾರೆ. ಈ ಬಾರಿ ಕಪ್​ ಗೆಲ್ಲಲೇಬೇಕು ಎಂದು ಆರ್​​​ಸಿಬಿ ಮ್ಯಾನೇಜ್ಮೆಂಟ್​ ನಿರ್ಧಾರಕ್ಕೆ ಬಂದಿದೆ. ಹಾಗಾಗಿ ಆರ್​​ಸಿಬಿ ಹೆಡ್​ ಕೋಚ್​​​ ಆ್ಯಂಡಿ ಫ್ಲವರ್​ ದೇಶೀಯ ಆಟಗಾರರೊಂದಿಗೆ ಅಭ್ಯಾಸ ಮಾಡಿಸುತ್ತಿದ್ದಾರೆ.

ಆರ್​​ಸಿಬಿ ತಂಡದಲ್ಲಿ ಮೇಜರ್​ ಸರ್ಜರಿ

2024ರ ಐಪಿಎಲ್‌ನಲ್ಲಿ ಪ್ಲೇ ಆಫ್ ಬಹಳ ರೋಚಕತೆಯಿಂದ ಕೂಡಿತ್ತು. ಆರಂಭದಲ್ಲಿ ಸತತ ಸೋಲು ಕಂಡಿದ್ದ ಆರ್​ಸಿಬಿ ಬಳಿಕ 7 ಪಂದ್ಯ ಗೆದ್ದು ಆರ್​​ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ಬಳಿಕ ಸೆಮೀಸ್​ನಲ್ಲಿ ರಾಜಸ್ಥಾನ್​ ಮೇಲೆ ಸೋತು ನಿರಾಸೆ ಮೂಡಿಸಿದ್ರು. ಹಾಗಾಗಿ ಮುಂದಿನ ಸೀಸನ್​ಗೆ ಆರ್​​ಸಿಬಿ ತಂಡದಲ್ಲಿ ಮೇಜರ್​ ಸರ್ಜರಿ ಆಗಲಿದೆ ಎಂದು ಫ್ಯಾನ್ಸ್​ ನಿರೀಕ್ಷೆ ಮಾಡಿದ್ದರು.

ನಿರೀಕ್ಷೆಯಂತೆ ಹರಾಜಿಗೆ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿತ್ತು. ಅದಕ್ಕೆ ತಕ್ಕಂತೆ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್‌ ಅವರನ್ನು ಮಾತ್ರ ರೀಟೈನ್​ ಮಾಡಿಕೊಂಡು ಎಲ್ಲರನ್ನು ರಿಲೀಸ್​ ಮಾಡಲಾಗಿತ್ತು.

ಆರ್​​ಟಿಎಂ ಕಾರ್ಡ್​​ ಬಳಸಲು ನೋ ಎಂದ ಆರ್​​ಸಿಬಿ

ಮೆಗಾ ಹರಾಜಿನಲ್ಲಿ ಆರ್​​ಸಿಬಿ ಪ್ರಮುಖ ಆಟಗಾರರನ್ನು ಆರ್​ಟಿಎಂ ಕಾರ್ಡ್​​ ಬಳಸಿ ಖರೀದಿ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಸ್ವಪ್ನಿಲ್ ಸಿಂಗ್‌ ಹೊರತುಪಡಿಸಿ ಮತ್ಯಾರಿಗೂ ಆರ್​ಟಿಎಂ ಕಾರ್ಡ್​ ಬಳಸಲಿಲ್ಲ. ಹಾಗಾಗಿ ವಿಲ್‌ ಜ್ಯಾಕ್ಸ್, ಮೊಹಮ್ಮದ್ ಸಿರಾಜ್, ಮ್ಯಾಕ್ಸ್‌ವೆಲ್, ಫಾಫ್‌ ಡುಪ್ಲೆಸಿಸ್ ಸೇರಿದಂತೆ ಎಲ್ಲಾ ಆಟಗಾರರು ವಿವಿಧ ತಂಡಗಳ ಪಾಲಾದರು.

ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್, ಜೋಶ್ ಹೇಜಲ್​ವುಡ್​​, ಜೇಕಬ್ ಬೆಥೆಲ್, ಭುವನೇಶ್ವರ್ ಕುಮಾರ್, ಲಿಯಾಮ್ ಲಿವಿಂಗ್‌ಸ್ಟೋನ್​ ಅವರನ್ನು ಖರೀದಿ ಮಾಡಿದೆ. ಈ ಬಾರಿ ತಂಡ ಬಲಿಷ್ಠವಾಗಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಸದ್ಯ ನಡೆಯುತ್ತಿರೋ ಆರ್​​ಸಿಬಿ ಕ್ಯಾಂಪ್​​ನಲ್ಲಿ ಕೃನಾಲ್ ಪಾಂಡ್ಯ, ಭುವಿ, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಯಶ್ ದಯಾಳ್​​ ಮತ್ತು ರಸಿಖ್ ದಾರ್ ಸೇರಿ ಹಲವರು ಭಾಗಿಯಾಗಿದ್ದರು. ಆರ್​​ಸಿಬಿ ದೇಶಿಯ ಆಟಗಾರರ ಕೋರ್​ ಟೀಮ್​ ಕಟ್ಟಲು ಕ್ಯಾಂಪ್​ ನಡೆಸುತ್ತಿದ್ದು, ಇವರ ಅಸಲಿ ಪ್ಲಾನ್​​​ ಲೀಕ್​ ಆಗಿದೆ.

ಇದನ್ನೂ ಓದಿ:ಒಂದು ಲೋಟ ಬಿಸಿ ನೀರು ಕುಡಿಯೋದರಿಂದ ಈ ಕಾಯಿಲೆಗಳು ಮಾಯ; ನೀವು ಓದಲೇಬೇಕಾದ ಸ್ಟೋರಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment