/newsfirstlive-kannada/media/post_attachments/wp-content/uploads/2025/04/RCB-8.jpg)
ಸೀಸನ್-18ರಲ್ಲಿ ಆರ್ಸಿಬಿಗೆ ಸಾಲಿಡ್ ಸ್ಟಾರ್ಟ್ ಸಿಕ್ಕಿದೆ. ತವರಿನ ಅಂಗಳದಾಚೆ ಸೋಲಿಲ್ಲದ ಸರದಾರ ಆರ್ಸಿಬಿ ಚಿನ್ನಸ್ವಾಮಿಯ ಕಿಂಗ್ಡಮ್ನಲ್ಲಿ ಗೆಲುವು ಮರೀಚಿಕೆಯಾಗಿದೆ. ಎರಡು ಸೋಲಿನ ಬಳಿಕ ತವರಿನಲ್ಲಿ ಮೂರನೇ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗ್ತಿದೆ. ಚಿನ್ನಸ್ವಾಮಿಯಲ್ಲಿ ಪಂಜಾಬ್ ಕಿಂಗ್ಸ್ಗೆ ಪಂಚ್ ನೀಡಿ ಗೆಲುವು ದಾಖಲಿಸುವ ರಣ ಉತ್ಸಾಹದಲ್ಲಿದೆ. ಚಿನ್ನಸ್ವಾಮಿ ಪಿಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಂದಾಸ್ ಆಗಿ ಗೆಲ್ಲಬೇಕಾದ್ರೆ ಕೆಲ ತಪ್ಪುಗಳನ್ನ ತಿದ್ದಿಕೊಳ್ಳಬೇಕಿದೆ.
ಬೆಂಗಳೂರಲ್ಲಿ ಓಪನರ್ಸ್ ನೀಡಬೇಕು ಗುಡ್ ಸ್ಟಾರ್ಟ್!
ಅವೇ ಮ್ಯಾಚ್ಗಳಲ್ಲಿ ಆರ್ಸಿಬಿ ಸುಲಭಕ್ಕೆ ಗೆಲ್ಲಲು ಕಾರಣ. ಆರಂಭಿಕರು ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಚಿನ್ನಸ್ವಾಮಿಯಲ್ಲಿ ಉತ್ತಮ ಸ್ಟಾರ್ಟ್ ನೀಡದ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ತವರಿನ ಹೊರಗೆ ಬೌಲರ್ಗಳನ್ನ ಚೆಂಡಾಡಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಕೊಲ್ಕತ್ತಾ, ರಾಜಸ್ಥಾನ್ದಲ್ಲಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಬ್ಯಾಟ್ನಿಂದ ಸಿಡಿದ ಅರ್ಧಶತಕಗಳು.
ಚೆನ್ನೈನಲ್ಲೂ ಡೆಡ್ಲಿ ಓಪನರ್ಸ್ ಮಿಂಚಿದ್ರು. ವಾಂಖೆಡೆಯಲ್ಲಿ ಸಾಲಿಡ್ ಸ್ಟಾರ್ಟ್ ನೀಡದಿದ್ರೂ ಕೊಹ್ಲಿಯ ಅರ್ಧಶತಕದ ಸಿಡಿಸಿದ್ದು ತಂಡಕ್ಕೆ ನೆರವಾಗಿತ್ತು. ಜೊತೆಗೆ ಪಡಿಕ್ಕಲ್, ರಜತ್ ಪಟಿದಾರ್ ಬೊಂಬಾಟ್ ಆಟ, ಫಿಲ್ ಸಾಲ್ಟ್ ವೈಫಲ್ಯ ಕಾಣದಂತೆ ಮಾಡಿತ್ತು. ಬೆಂಗಳೂರಲ್ಲಿ ಸಾಲಿಡ್ ಸ್ಟಾರ್ಟ್ ನೀಡುವಲ್ಲಿ ಕೊಹ್ಲಿ-ಸಾಲ್ಟ್ ಎಡವುತ್ತಿದ್ದಾರೆ. ಡೆಲ್ಲಿ ವಿರುದ್ಧ ಅತ್ಯದ್ಭುತ ಸ್ಟಾರ್ಟ್ ಸಿಕ್ಕಿದ್ದೂ ನಿಜ. ಫಿಲ್ ಸಾಲ್ಟ್ ಅಬ್ಬರಿಸಿದ್ದೂ ನಿಜ. ಇಲ್ಲಿ ಅದೃಷ್ಟ ಕೈ ಹಿಡಿದಿತ್ತು. ಎಡ್ಜ್ ಬಾಲ್ಗಳು ಫಿಲ್ಡರ್ ಕೈಗೆ ಸಿಕ್ಕಿರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಕಾನ್ಫಿಡೆಂಟ್ ಆಟ ಆಡಬೇಕಿದೆ.
ಇದನ್ನೂ ಓದಿ: ಇನ್ಮೇಲೆ ಆರ್ಸಿಬಿ ಲೆಕ್ಕಾನೇ ಬೇರೆ.. ಪ್ಲೇ ಆಫ್ ಎಂಟ್ರಿ ಭವಿಷ್ಯ ಅಷ್ಟು ಸುಲಭ ಇಲ್ಲ..!
ಒತ್ತಡವನ್ನ ಮೆಟ್ಟಿ ನಿಲ್ಲಬೇಕು ಪಡಿಕ್ಕಲ್, ಪಟಿದಾರ್!
ಓಪನರ್ಸ್ನಿಂದ ಗುಡ್ ಸ್ಟಾರ್ಟ್ ಸಿಕ್ಕಾಗ ಆಡುವ ಕನ್ನಡಿಗ ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಅದೇ ಮೂಮೆಂಟಮ್ನ ಮುಂದುವರಿಸ್ತಾರೆ. ಓಪನರ್ಸ್ ಬೇಗ ವಿಕೆಟ್ ಕೈ ಚೆಲ್ಲಿದ್ರೆ, ಇವರಿಬ್ಬರು ಪರದಾಡ್ತಾರೆ. ಈ ಸೀಸನ್ನಲ್ಲಿ ಚಿನ್ನಸ್ವಾಮಿಯಲ್ಲಿ ಇವರಿಬ್ಬರು ತಂಡಕ್ಕೆ ಆಧಾರವಾಗಲೇ ಇಲ್ಲ. ಕನಿಷ್ಠ ಚೇತರಿಕೆಯ ಜೊತೆಯಾಟವನ್ನೂ ಆಡಲಿಲ್ಲ. ಒತ್ತಡದ ಸಂದರ್ಭದಲ್ಲಿ ಇಬ್ಬರೂ ಒಳ್ಳೆ ಇನ್ನಿಂಗ್ಸ್ ಕಟ್ಟಬೇಕಿದೆ.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಾಂಡಗೆಗೆ ಚಾನ್ಸ್?
ಪಡಿಕ್ಕಲ್ ಉತ್ತಮ ಬ್ಯಾಟರ್ ಅನ್ನೋದ್ರಲ್ಲಿ ನೋ ಡೌಟ್. ಟಾಪ್-3ನಲ್ಲಿ ಆಡೋ ಕೆಪಾಸಿಟಿ ಕ್ಯಾಪ್ಟನ್ ರಜತ್ ಪಟಿದಾರ್ಗೆ ಇದೆ. ಹೀಗಾಗಿ 3ನೇ ರಜತ್ಗೆ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿ, ಮಿಡಲ್ ಆರ್ಡರ್ನಲ್ಲಿ ಕನ್ನಡಿಗ ಮನೋಜ್ ಬಾಂಡಗೆಗೆ ಅವಕಾಶ ನೀಡೋದು ಒಂದು ರೀತಿ ಬೆಸ್ಟ್ ಚಾಯ್ಸ್. ಬಿಗ್ ಹಿಟ್ಟರ್ ಆಗಿರುವ ಮನೋಜ್ಗೆ ಸಿಕ್ಸರ್ಗಳನ್ನು ಸಿಡಿಸೋ ತಾಕತ್ತಿದೆ. ಬ್ಯಾಟಿಂಗ್ನಲ್ಲಿ ಗೇಮ್ ಚೇಂಜರ್ ಆಗಬಲ್ಲರು. ಜೊತೆಗೆ ಬೌಲಿಂಗ್ನಲ್ಲೂ ನೆರವಾಗಬಲ್ಲರು. ಚಿನ್ನಸ್ವಾಮಿ ಮೈದಾನದ ಆಳ-ಅಗಲ ಗೊತ್ತಿರೋ ಮನೋಜ್ ಪರ್ಫಾಪ್ಟ್ ಇಂಪ್ಯಾಂಕ್ಟ್ ಮೂಡಿಸಬಲ್ಲರು.
ಬ್ಯಾಟಿಂಗ್ನಲ್ಲಿ ಟಿಮ್ ಡೇವಿಡ್ಗೆ ನೀಡಬೇಕಿದ್ಯಾ ಬಡ್ತಿ?
ಬೆಂಗಳೂರಿನಲ್ಲಿ ಆರ್ಸಿಬಿ ಸೋಲಿಗೆ ಪರೋಕ್ಷವಾಗಿ ಕೃನಾಲ್ ಮತ್ತು ಮ್ಯಾನೇಜ್ಮೆಂಟ್ ಕಾರಣ. ಯಾಕಂದ್ರೆ ಗುಜರಾತ್ ಎದುರು ಕೃನಾಲ್ ಬಳಿಕ ಕ್ರಿಸ್ಗೆ ಬಂದ ಟಿಮ್ ಡೇವಿಡ್, ಸಿಕ್ಕ 18 ಎಸೆತಗಳಲ್ಲಿ 32 ರನ್ ಸಿಡಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್ ಎದುರು 20 ಎಸೆತಗಳಲ್ಲಿ 37 ರನ್ ಕೊಳ್ಳೆ ಹೊಡೆದಿದ್ದರು. ಸ್ಲೋ ಇನ್ನಿಂಗ್ಸ್ ಆಡಿದ ಕೃನಾಲ್ ಬದಲಿಗೆ ಟಿಮ್ ಡೇವಿಡ್ಗೆ ಬಡ್ತಿ ನೀಡಿದ್ರೆ ಪಂದ್ಯದ ಗತಿಯೇ ಬದಲಾಗ್ತಿತ್ತು. ಈ ಬಗ್ಗೆ ಮ್ಯಾನೇಜ್ಮೆಂಟ್ ಚಿಂತಿಸಬೇಕಿದೆ.
ಇದನ್ನೂ ಓದಿ: ಐಪಿಎಲ್ನಲ್ಲಿ ವೀರ ಕನ್ನಡಿಗನ ಘರ್ಜನೆ.. ಟ್ಯಾಲೆಂಟೆಡ್ ಕ್ರಿಕೆಟಿಗನಿಗೆ ಆದ ಅನ್ಯಾಯದ ಬಗ್ಗೆ ಗೊತ್ತೇನು..?
ಹೇಜ್ಲ್ವುಡ್ ಬದಲಿಗೆ ನುವಾನ್ ತುಷಾರಾಗೆ ಚಾನ್ಸ್?
ಚಿನ್ನಸ್ವಾಮಿಯಲ್ಲಿ ಸ್ಪಿನ್ನರ್ಸ್ ಒಕೆ. ಜೋಶ್ ಹೇಜಲ್ವುಡ್ನದ್ದೇ ಚಿಂತೆಯಾಗಿದೆ. ಚಿನ್ನಸ್ವಾಮಿಯ ಹೊರಗೆ ಅದ್ಭುತ ದಾಳಿ ಸಂಘಟಿಸ್ತಿರೋ ಆಸಿಸ್ ಗನ್, ಬೆಂಗಳೂರಿನಲ್ಲಿ ಬೆಂಕಿ ದಾಳಿ ನಡೆಸೋದ್ರಲ್ಲಿ ಫೇಲ್ ಆಗಿದ್ದಾರೆ. ಹಾಕಿದ 6.5 ಓವರ್ಗಳಿಂದ ಬರೋಬ್ಬರಿ 83 ರನ್ ಬಿಟ್ಟುಟ್ಟಿರುವ ಜೋಶ್, ಒಂದೇ ಒಂದು ವಿಕೆಟ್ ಪಡೆದಿದ್ದಾರೆ.
ಲೈನ್ ಅಂಡ್ ಲೆಂಥ್ ಕಂಡುಕೊಳ್ಳುವಲ್ಲಿ ಫೇಲ್ ಆಗಿರೋ ಜೋಶ್ ಹೇಜಲ್ವುಡ್ ಬದಲಿಗೆ ಚಿನ್ನಸ್ವಾಮಿಗಿ ಲಂಕಾದ ವೇಗಿ ನುವಾನ್ ತುಷಾರಗೆ ಚಾನ್ಸ್ ನೀಡಿ ಪ್ರಯೋಗ ನಡೆಸಬಹುದು. ಥೇಟ್ ಲಸಿತ್ ಮಲಿಂಗರಂತೆ ಬೌಲಿಂಗ್ ಮಾಡೋ ತುಷಾರಾ ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲಿ ಎಫೆಕ್ಟಿವ್. ವಿಕೆಟ್ ಬೇಟೆಯಾಡುವುದರ ಜೊತೆಗೆ ಎದುರಾಳಿ ರನ್ಗಳಿಕೆಗೂ ಬ್ರೇಕ್ ಹಾಕಬಲ್ಲರು. ಈ ನಿಟ್ಟಿನಲ್ಲಿ ಮ್ಯಾನೇಜ್ಮೆಂಟ್ ಯೋಚಿಸಬೇಕಿದೆ.
ಇದನ್ನೂ ಓದಿ: ಚಹಾಲ್ ಮ್ಯಾಜಿಕ್, 95 ರನ್ಗೆ KKR ಆಲೌಟ್.. ಐಪಿಎಲ್ನಲ್ಲಿ ಐತಿಹಾಸಿಕ ದಾಖಲೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್