ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾದಿ ಮಾತ್ರ ವಿಭಿನ್ನ
ಎಲ್ಲ ಮ್ಯಾಚ್ ಅಲ್ಲೂ ಒಬ್ಬನೇ ನಂಬಿಕೊಂಡ್ರೆ, ಸದಾ ಗೆಲ್ಲೋಕಾಗುತ್ತಾ?
ಆರ್ಸಿಬಿ 3 ಪಂದ್ಯಗಳಲ್ಲಿ 8 ಮಂದಿಯಿಂದ 498 ರನ್ ಗಳಿಕೆಯಷ್ಟೇ!
ಐಪಿಎಲ್ ಫೀವರ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮಿಲಿಯನ್ ಡಾಲರ್ ಕಿರೀಟಕ್ಕೆ ಮುತ್ತಿಡಲು 9 ತಂಡಗಳು ಟಫ್ ಫೈಟ್ ನಡೆಸ್ತಿವೆ. ಆದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾದಿ ಮಾತ್ರ ವಿಭಿನ್ನವಾಗಿದೆ. ಕಪ್ ಗೆಲ್ಲೋ ಗುರಿಯೇನೋ ಇದೆ. ಆದ್ರೆ, ಇದಕ್ಕಾಗಿ ನೆಚ್ಚಿಕೊಂಡಿರೋದು ಒಬ್ಬನನ್ನ ಮಾತ್ರ. ಇದನ್ನ ನೋಡಿದ್ರೆ, ಕಪ್ ಗೆಲ್ಲೋದಲ್ಲ. ಪ್ಲೇ ಆಫ್ಗೆ ರೀಚ್ ಆಗೋದು ಕಷ್ಟ.
ಕ್ರಿಕೆಟ್.. ಇದು ಟೀಮ್ ಗೇಮ್.. ಇಲ್ಲಿ ಒಬ್ಬನೇ ಪ್ಲೇಯರ್ ಸಿಂಗಲ್ ಹ್ಯಾಂಡೆಡ್ಲಿ ಮ್ಯಾಚ್ ಗೆಲ್ಲೋದೂ ಉಂಟು. ಸಿಂಗಲ್ ಮಿಸ್ಟೇಕ್ಗೆ ಮ್ಯಾಚ್ ಸೋಲೋದು ಉಂಟು. ಆದ್ರೆ, ಎಲ್ಲ ಮ್ಯಾಚ್ ಅಲ್ಲೂ ಒಬ್ಬನೇ ನಂಬಿಕೊಂಡ್ರೆ, ಸದಾ ಗೆಲ್ಲೋಕಾಗುತ್ತಾ, ಸಾಧ್ಯಾನೇ ಇಲ್ಲ ಅಲ್ವಾ. ಈ ಸಿಂಪಲ್ ಲಾಜಿಕ್ ಆರ್ಸಿಬಿಗೆ ಅರ್ಥವಾಗ್ತಿಲ್ಲ.
8 ಮಂದಿ ಫ್ಲಾಪ್.. ಕಿಂಗ್ ಕೊಹ್ಲಿಯ ದರ್ಬಾರ್..!
ಪ್ರಸಕ್ತ ಆವೃತ್ತಿಯಲ್ಲಿ 3 ಪಂದ್ಯಗಳನ್ನಾಡಿರುವ ಆರ್ಸಿಬಿ, ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ಈ 3 ಪಂದ್ಯಗಳಲ್ಲಿ 8 ಮಂದಿ ಬ್ಯಾಟರ್ಗಳು ಬ್ಯಾಟ್ ಬೀಸಿದ್ದಾರೆ. ಒಟ್ಟು 498 ರನ್ ಕಲೆಹಾಕಿದ್ದಾರೆ. ಆದ್ರೆ, ಈ 8 ಮಂದಿ ಬ್ಯಾಟರ್ಗಳ ಪೈಕಿ ಅರ್ಧಶತಕ ಗಳಿಸಿದ ಒನ್ ಆ್ಯಂಡ್ ಒನ್ಲಿ ಬ್ಯಾಟ್ಸ್ಮನ್ ಅಂದ್ರೆ ಅದು ವಿರಾಟ್ ಕೊಹ್ಲಿ ಮಾತ್ರ.
ಪ್ರಸಕ್ತ ಸೀಸನ್ನಲ್ಲಿ ಆರ್ಸಿಬಿ ಬ್ಯಾಟರ್ಸ್
ಈ ಸೀಸನ್ನಲ್ಲಿ ಆರ್ಸಿಬಿ ಗಳಿಸಿರುವ 498 ರನ್ಗಳ ಪೈಕಿ ಕೊಹ್ಲಿಯ ಬ್ಯಾಟ್ನಿಂದಲೇ 181 ರನ್ಗಳು ಸಿಡಿದಿವೆ. 128 ಎಸೆತ ಎದುರಿಸಿರುವ ವಿರಾಟ್, 141.41ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ದಿನೇಶ್ 44 ಎಸೆತಗಳಿಂದ 195.45ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರೆ. ಉಳಿದ ಬ್ಯಾಟರ್ಗಳು 184 ಎಸೆತಗಳಿಂದ ಕೇವಲ 230 ರನ್ ಗಳಿಸಿದ್ದಾರೆ. ಒಂದೇ ಒಂದು ಫಿಫ್ಟಿ ಸಿಡಿಸದ ಇತರೆ ಬ್ಯಾಟರ್ಸ್ ಕೇವಲ 125ರ ಸ್ಟ್ರೈಕ್ರೇಟ್ನಲ್ಲಿ ರನ್ಗಳಿಸಿದ್ದಾರೆ.
ಚೆನ್ನೈ ಎದುರಿನ ಮೊದಲ ಪಂದ್ಯವೊಂದು ಬಿಟ್ಟರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವಿರಾಟ್ ಮೇಲೆ ಡಿಪೆಂಡ್ ಆಗಿದೆ. ಪಂಜಾಬ್ ಎದುರು ಚೇಸಿಂಗ್ ಮಾಸ್ಟರ್ 77 ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ರೆ. ಕೆಕೆಆರ್ ಎದುರು ಏಕಾಂಗಿ ಹೋರಾಟ ನಡೆಸಿ ತಂಡದ ಮಾನ ಕಾಪಾಡಿದ್ರು. ಈ ಮೂರು ಮ್ಯಾಚ್ಗಳಲ್ಲಿ ವಿರಾಟ್ ಜೊತೆ ತಂಡಕ್ಕೆ ಒಂದಿಷ್ಟು ಭರವಸೆ ಮೂಡಿಸಿದ್ದು ದಿನೇಶ್ ಕಾರ್ತಿಕ್ ಮಾತ್ರ.
ಇವರಿಬ್ಬರನ್ನ ಬಿಟ್ರೆ ಉಳಿದೆಲ್ಲ ಬ್ಯಾಟರ್ಗಳು ಇದ್ದು, ಇಲ್ಲದಂತಿದ್ದಾರೆ. ಮ್ಯಾಚ್ ಫಿನಿಷರ್ಗಳಾಗಿ ಗುರುತಿಸಿಕೊಳ್ಳಬೇಕಾದ ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಪರದಾಡ್ತಿದ್ರೆ, ರಜತ್ ಪಟಿದಾರ್ ನನಗೂ ಬ್ಯಾಟಿಂಗ್ಗೂ ಸಂಬಂಧವೇ ಇಲ್ಲ ಎಂಬಂತೆ ಬ್ಯಾಟ್ ಬೀಸ್ತಿದ್ದಾರೆ.
ಹೀಗಾದರೆ ಕಪ್ ಅಲ್ಲ.. ಪ್ಲೇ-ಆಫ್ಗೂ ತಲುಪಲ್ಲ..!
ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿಗೆ ಉಳಿದ ಬ್ಯಾಟರ್ಸ್ ಸಾಥ್ ನೀಡದಿದ್ದರೆ, ಈ ಸಲ ಕಪ್ ಅಲ್ಲ.. ಪ್ಲೇ-ಆಫ್ಗೂ ಆರ್ಸಿಬಿ ಎಂಟ್ರಿ ಕೊಡಲ್ಲ. ಹೀಗಾಗಿ ಸ್ಟಾರ್ಗಳಾದ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಬೇಕಿದೆ. ಟೀಮ್ ಮ್ಯಾನೇಜ್ಮೆಂಟ್ & ಕ್ಯಾಪ್ಟನ್ ಫಾಫ್ ಡುಪ್ಲೆಸಿ, ಬ್ಯಾಟಿಂಗ್ ವಿಭಾಗಕ್ಕೆ ಸರ್ಜರಿ ಮಾಡಬೇಕಿದೆ. ಇಲ್ದಿದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾತಾಳಕ್ಕೆ ಕುಸಿಯೋದ್ರಲ್ಲಿ ಅನುಮಾನನೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾದಿ ಮಾತ್ರ ವಿಭಿನ್ನ
ಎಲ್ಲ ಮ್ಯಾಚ್ ಅಲ್ಲೂ ಒಬ್ಬನೇ ನಂಬಿಕೊಂಡ್ರೆ, ಸದಾ ಗೆಲ್ಲೋಕಾಗುತ್ತಾ?
ಆರ್ಸಿಬಿ 3 ಪಂದ್ಯಗಳಲ್ಲಿ 8 ಮಂದಿಯಿಂದ 498 ರನ್ ಗಳಿಕೆಯಷ್ಟೇ!
ಐಪಿಎಲ್ ಫೀವರ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮಿಲಿಯನ್ ಡಾಲರ್ ಕಿರೀಟಕ್ಕೆ ಮುತ್ತಿಡಲು 9 ತಂಡಗಳು ಟಫ್ ಫೈಟ್ ನಡೆಸ್ತಿವೆ. ಆದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾದಿ ಮಾತ್ರ ವಿಭಿನ್ನವಾಗಿದೆ. ಕಪ್ ಗೆಲ್ಲೋ ಗುರಿಯೇನೋ ಇದೆ. ಆದ್ರೆ, ಇದಕ್ಕಾಗಿ ನೆಚ್ಚಿಕೊಂಡಿರೋದು ಒಬ್ಬನನ್ನ ಮಾತ್ರ. ಇದನ್ನ ನೋಡಿದ್ರೆ, ಕಪ್ ಗೆಲ್ಲೋದಲ್ಲ. ಪ್ಲೇ ಆಫ್ಗೆ ರೀಚ್ ಆಗೋದು ಕಷ್ಟ.
ಕ್ರಿಕೆಟ್.. ಇದು ಟೀಮ್ ಗೇಮ್.. ಇಲ್ಲಿ ಒಬ್ಬನೇ ಪ್ಲೇಯರ್ ಸಿಂಗಲ್ ಹ್ಯಾಂಡೆಡ್ಲಿ ಮ್ಯಾಚ್ ಗೆಲ್ಲೋದೂ ಉಂಟು. ಸಿಂಗಲ್ ಮಿಸ್ಟೇಕ್ಗೆ ಮ್ಯಾಚ್ ಸೋಲೋದು ಉಂಟು. ಆದ್ರೆ, ಎಲ್ಲ ಮ್ಯಾಚ್ ಅಲ್ಲೂ ಒಬ್ಬನೇ ನಂಬಿಕೊಂಡ್ರೆ, ಸದಾ ಗೆಲ್ಲೋಕಾಗುತ್ತಾ, ಸಾಧ್ಯಾನೇ ಇಲ್ಲ ಅಲ್ವಾ. ಈ ಸಿಂಪಲ್ ಲಾಜಿಕ್ ಆರ್ಸಿಬಿಗೆ ಅರ್ಥವಾಗ್ತಿಲ್ಲ.
8 ಮಂದಿ ಫ್ಲಾಪ್.. ಕಿಂಗ್ ಕೊಹ್ಲಿಯ ದರ್ಬಾರ್..!
ಪ್ರಸಕ್ತ ಆವೃತ್ತಿಯಲ್ಲಿ 3 ಪಂದ್ಯಗಳನ್ನಾಡಿರುವ ಆರ್ಸಿಬಿ, ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ಈ 3 ಪಂದ್ಯಗಳಲ್ಲಿ 8 ಮಂದಿ ಬ್ಯಾಟರ್ಗಳು ಬ್ಯಾಟ್ ಬೀಸಿದ್ದಾರೆ. ಒಟ್ಟು 498 ರನ್ ಕಲೆಹಾಕಿದ್ದಾರೆ. ಆದ್ರೆ, ಈ 8 ಮಂದಿ ಬ್ಯಾಟರ್ಗಳ ಪೈಕಿ ಅರ್ಧಶತಕ ಗಳಿಸಿದ ಒನ್ ಆ್ಯಂಡ್ ಒನ್ಲಿ ಬ್ಯಾಟ್ಸ್ಮನ್ ಅಂದ್ರೆ ಅದು ವಿರಾಟ್ ಕೊಹ್ಲಿ ಮಾತ್ರ.
ಪ್ರಸಕ್ತ ಸೀಸನ್ನಲ್ಲಿ ಆರ್ಸಿಬಿ ಬ್ಯಾಟರ್ಸ್
ಈ ಸೀಸನ್ನಲ್ಲಿ ಆರ್ಸಿಬಿ ಗಳಿಸಿರುವ 498 ರನ್ಗಳ ಪೈಕಿ ಕೊಹ್ಲಿಯ ಬ್ಯಾಟ್ನಿಂದಲೇ 181 ರನ್ಗಳು ಸಿಡಿದಿವೆ. 128 ಎಸೆತ ಎದುರಿಸಿರುವ ವಿರಾಟ್, 141.41ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ದಿನೇಶ್ 44 ಎಸೆತಗಳಿಂದ 195.45ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರೆ. ಉಳಿದ ಬ್ಯಾಟರ್ಗಳು 184 ಎಸೆತಗಳಿಂದ ಕೇವಲ 230 ರನ್ ಗಳಿಸಿದ್ದಾರೆ. ಒಂದೇ ಒಂದು ಫಿಫ್ಟಿ ಸಿಡಿಸದ ಇತರೆ ಬ್ಯಾಟರ್ಸ್ ಕೇವಲ 125ರ ಸ್ಟ್ರೈಕ್ರೇಟ್ನಲ್ಲಿ ರನ್ಗಳಿಸಿದ್ದಾರೆ.
ಚೆನ್ನೈ ಎದುರಿನ ಮೊದಲ ಪಂದ್ಯವೊಂದು ಬಿಟ್ಟರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವಿರಾಟ್ ಮೇಲೆ ಡಿಪೆಂಡ್ ಆಗಿದೆ. ಪಂಜಾಬ್ ಎದುರು ಚೇಸಿಂಗ್ ಮಾಸ್ಟರ್ 77 ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ರೆ. ಕೆಕೆಆರ್ ಎದುರು ಏಕಾಂಗಿ ಹೋರಾಟ ನಡೆಸಿ ತಂಡದ ಮಾನ ಕಾಪಾಡಿದ್ರು. ಈ ಮೂರು ಮ್ಯಾಚ್ಗಳಲ್ಲಿ ವಿರಾಟ್ ಜೊತೆ ತಂಡಕ್ಕೆ ಒಂದಿಷ್ಟು ಭರವಸೆ ಮೂಡಿಸಿದ್ದು ದಿನೇಶ್ ಕಾರ್ತಿಕ್ ಮಾತ್ರ.
ಇವರಿಬ್ಬರನ್ನ ಬಿಟ್ರೆ ಉಳಿದೆಲ್ಲ ಬ್ಯಾಟರ್ಗಳು ಇದ್ದು, ಇಲ್ಲದಂತಿದ್ದಾರೆ. ಮ್ಯಾಚ್ ಫಿನಿಷರ್ಗಳಾಗಿ ಗುರುತಿಸಿಕೊಳ್ಳಬೇಕಾದ ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಪರದಾಡ್ತಿದ್ರೆ, ರಜತ್ ಪಟಿದಾರ್ ನನಗೂ ಬ್ಯಾಟಿಂಗ್ಗೂ ಸಂಬಂಧವೇ ಇಲ್ಲ ಎಂಬಂತೆ ಬ್ಯಾಟ್ ಬೀಸ್ತಿದ್ದಾರೆ.
ಹೀಗಾದರೆ ಕಪ್ ಅಲ್ಲ.. ಪ್ಲೇ-ಆಫ್ಗೂ ತಲುಪಲ್ಲ..!
ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿಗೆ ಉಳಿದ ಬ್ಯಾಟರ್ಸ್ ಸಾಥ್ ನೀಡದಿದ್ದರೆ, ಈ ಸಲ ಕಪ್ ಅಲ್ಲ.. ಪ್ಲೇ-ಆಫ್ಗೂ ಆರ್ಸಿಬಿ ಎಂಟ್ರಿ ಕೊಡಲ್ಲ. ಹೀಗಾಗಿ ಸ್ಟಾರ್ಗಳಾದ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಬೇಕಿದೆ. ಟೀಮ್ ಮ್ಯಾನೇಜ್ಮೆಂಟ್ & ಕ್ಯಾಪ್ಟನ್ ಫಾಫ್ ಡುಪ್ಲೆಸಿ, ಬ್ಯಾಟಿಂಗ್ ವಿಭಾಗಕ್ಕೆ ಸರ್ಜರಿ ಮಾಡಬೇಕಿದೆ. ಇಲ್ದಿದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾತಾಳಕ್ಕೆ ಕುಸಿಯೋದ್ರಲ್ಲಿ ಅನುಮಾನನೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ