ರಾಯಲ್ ಚಾಲೆಂಜರ್ಸ್​ ಮುಂದೆ 5 ಚಾಲೆಂಜ್​ಗಳು.. RCB ಟಾರ್ಗೆಟ್ ಏನು ಗೊತ್ತಾ?

author-image
Bheemappa
Updated On
ಲಕ್ನೋದಲ್ಲಿ ಇವತ್ತು ಆರ್​ಸಿಬಿಗೆ ಒಂದಲ್ಲ, ಎರಡು ಸವಾಲ್..! ಏನದು..?
Advertisment
  • ಆರ್​ಸಿಬಿಯ ಮುಂದಿನ ಎರಡು ಪಂದ್ಯಗಳು ನಡೆಯುವುದು ಎಲ್ಲಿ?
  • ಬೆಂಗಳೂರು ತಂಡಕ್ಕೆ ಕಾಡುತ್ತಿದೆ ಪ್ರಮುಖ ಬೌಲರ್​ನ ಅಲಭ್ಯತೆ
  • ಮುಂದಿನ ಚಾಲೆಂಜ್​ಗಳು ಏನೇನು, ರಜತ್ ಏನ್ ಮಾಡಬೇಕು?

ಆರ್​ಸಿಬಿ ಪ್ಲೇ ಆಫ್​ಗೆ ಹೋಗುತ್ತಾ, ಇಲ್ವಾ ಅನ್ನೋ ಟೆನ್ಶನ್ ಮುಗೀತು. ಇದೀಗ ಪ್ಲೇ ಆಫ್​ಗೆ ಎಂಟ್ರಿ ನೀಡಿದ ಬಳಿಕ ಆರ್​ಸಿಬಿಗೆ ಮತ್ತೊಂದು ಟೆನ್ಶನ್ ಶುರುವಾಗಿದೆ. ಪಾಯಿಂಟ್ಸ್​​ ಟೇಬಲ್​​ನ ಟಾಪ್​-2 ಸ್ಥಾನದ ಮೇಲೆ ಆರ್​ಸಿಬಿ ಕಣ್ಣಿದೆ. ಆ ಕನಸು ನನಸಾಗಬೇಕಾದ್ರೆ, ಆರ್​ಸಿಬಿ ಮುಂದಿನ 2 ಪಂದ್ಯಗಳಲ್ಲಿ ಎದುರಾಗೂ ಅಗ್ನಿಪರೀಕ್ಷೆಗಳನ್ನ ಗೆಲ್ಲಬೇಕಿದೆ. ಆ ಅಗ್ನಿಪರೀಕ್ಷೆ ಏನು?.

2 ಮ್ಯಾಚ್, 5 ಚಾಲೆಂಜ್​, ಟಾರ್ಗೆಟ್ ಟಾಪ್-2.!

ಸೀಸನ್​-18ರ ಐಪಿಎಲ್ ಮಹತ್ವದ ಘಟ್ಟ ತಲುಪಿದೆ. ಲೀಗ್​ ಹಂತದಲ್ಲಿ ಸಾಲಿಡ್ ಪರ್ಫಾಮೆನ್ಸ್​ ನೀಡಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ನಿರೀಕ್ಷೆಯಂತೆ ಪ್ಲೇ ಆಫ್​​ಗೆ ಎಂಟ್ರಿ ನೀಡಿದೆ. 2 ಪಂದ್ಯ ಬಾಕಿ ಇರುವಂತೆ ಪ್ಲೇ ಆಫ್​ಗೆ ಕ್ವಾಲಿಫೈ ಆಗಿ ಕಪ್ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿರುವ ರೆಡ್​ ಆರ್ಮಿ, ಇದೀಗ ಟೇಬಲ್​​ನ ಮೊದಲ 2 ಸ್ಥಾನದ ಮೇಲೆ ಕಣ್ಣಿಟ್ಟಿದೆ. ಈ ಕನಸಿನ ಹಾದಿಯಲ್ಲಿ ಆರ್​ಸಿಬಿ ಮುಂದೆ ಸವಾಲುಗಳ ಬೆಟ್ಟವಿದೆ. ಆ ಸವಾಲುಗಳನ್ನು ಮೆಟ್ಟಿ ನಿಂತರಷ್ಟೇ ಟಾಪ್​-2 ಕನಸು ನನಸಾಗಲಿದೆ.

publive-image

ಆರಂಭಿಕರಿಂದ ಬೇಕಿದೆ ಸಾಲಿಡ್ ಸ್ಟಾರ್ಟ್​..!

ಈ ಸೀಸನ್​ನಲ್ಲಿ ಆರ್​ಸಿಬಿ ಕಂಡ ಸಕ್ಸಸ್​​ನಲ್ಲಿ ಓಪನರ್ಸ್ ಪಾತ್ರ ಮಹತ್ವದ್ದು. ಮುಂದಿನ ಪಂದ್ಯಗಳಲ್ಲೂ ಓಪನರ್ಸ್​ ಸಾಲಿಡ್​​​​​​​ ಓಪನಿಂಗ್ ನೀಡಬೇಕಿದೆ. ಶಾರ್ಟ್ ಬ್ರೇಕ್​ನ ಬಳಿಕ ಒಂದಾದಾಗ್ತಿರುವ ಫಿಲ್ ಸಾಲ್ಟ್ ಆ್ಯಂಡ್ ವಿರಾಟ್​ ಕೊಹ್ಲಿ ಜೋಡಿ ಈ ಹಿಂದಿನಂತೆ ಬೌಲರ್​ಗಳನ್ನು ಚಿಂದಿ ಉಡಾಯಿಸಬೇಕಿದೆ. ಆರಂಭದಲ್ಲೇ ಆರ್​ಸಿಬಿ ಗೆಲುವಿಗೆ ಭದ್ರಬುನಾದಿ ಹಾಕಬೇಕಿದೆ.

ಮಿಡಲ್ ಆರ್ಡರ್ ಬ್ಯಾಟಿಂಗ್​ಗೆ ಬೇಕಿದೆ ಮದ್ದು.!

ಆರ್​ಸಿಬಿ ಈ ಸೀಸನ್​ನಲ್ಲಿ ಗೆಲುವಿನ ನಾಗಲೋಟದಲ್ಲಿದೆ ನಿಜ. ಆದ್ರೆ, ಆರ್​ಸಿಬಿಯ ಮಿಡಲ್ ಆರ್ಡರ್ ಹೇಳಿಕೊಳ್ಳುವಂತಾ ಪರ್ಫಾಮೆನ್ಸ್​ ನೀಡಿಲ್ಲ. ಮುಂಬೈ ಎದುರಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದು ಬಿಟ್ರೆ, ನಂತರ ನಾಯಕ ರಜತ್ ಪಾಟಿದಾರ್ ಬಿಗ್ ಇನ್ನಿಂಗ್ಸ್​ ಕಟ್ಟಿಲ್ಲ. ಕಳೆದ 7 ಪಂದ್ಯಗಳಿಂದ 78 ರನ್​​​ ಗಳನ್ನಷ್ಟೇ ಗಳಿಸಿದ್ದಾರೆ.

ರಜತ್ ಪಾಟಿದಾರ್ ಮಾತ್ರವಲ್ಲ. ಮ್ಯಾಚ್ ಫಿನಿಷರ್ ಜಿತೇಶ್ ಶರ್ಮಾ ಆಟವೂ ಅಷ್ಟಕ್ಕಷ್ಟೇ. ಕಳೆದ 5 ಇನ್ನಿಂಗ್ಸ್​ಗಳಿಂದ 33 ರನ್​​ಗಳನ್ನಷ್ಟೇ ಗಳಿಸಿರುವ ಜಿತೇಶ್ ಶರ್ಮಾ ಎಚ್ಚೆತ್ತುಕೊಳ್ಳಬೇಕಿದೆ. ಪ್ಲೇ ಆಫ್​ಗೂ ಮುನ್ನ ಇವರಿಬ್ಬರ ಕಮ್​​ಬ್ಯಾಕ್ ತಂಡಕ್ಕೆ ಅತ್ಯಗತ್ಯವಾಗಿದೆ.

ಬದಲಾಗಬೇಕಿದೆ ರಜತ್​ ಕ್ಯಾಪ್ಟನ್ಸಿ ಸ್ಟೈಲ್​​.!

ರಜತ್ ಪಾಟಿದಾರ್ ಬ್ಯಾಟಿಂಗ್ ಮಾತ್ರವಲ್ಲ, ನಾಯಕತ್ವದಲ್ಲೂ ಕೊಂಚ ಬದಲಾವಣೆ ಮಾಡಿಕೊಳ್ಳಬೇಕಿದೆ. ಆನ್​ಫೀಲ್ಡ್​ನಲ್ಲಿ ಕೂಲ್ ಆ್ಯಂಡ್ ಕಾಮ್​ ಆಗಿ ಕಾಣುವ ರಜತ್, ಸ್ಟ್ರಾಟರ್ಜಿ ವಿಚಾರದಲ್ಲಿ ಸಖತ್​​ ಅಗ್ರೆಸ್ಸಿವ್ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಆದ್ರೀಗ ಮಹತ್ವದ ಘಟ್ಟದಲ್ಲಿ ನಾಯಕನಾಗಿ ರಜತ್​, ರಕ್ಷಣಾತ್ಮಕ ನಡೆ ಅನುಸರಿಬೇಕಿದೆ. ಬಿಗ್ ಸ್ಟೇಜ್​ನಲ್ಲಿ ಎದುರಾಗೂ ಫ್ರೆಷರ್ ಹಾಗೂ ಗೊಂದಲಗಳನ್ನ ಕೇರ್​ಫುಲ್​ ಆಗಿ ಹ್ಯಾಂಡಲ್​ ಮಾಡಬೇಕಿದೆ.

ಇದನ್ನೂ ಓದಿ: ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶ.. ನಟ ಜಯಂ ರವಿಗೆ ಭಾರೀ ಬೇಡಿಕೆ ಇಟ್ಟ ಹೆಂಡತಿ ಆರತಿ

publive-image

ಡೆತ್ ಓವರ್ ಬೌಲಿಂಗ್ ವಿಭಾಗಕ್ಕೆ ಬೇಕಿದೆ ಜೋಶ್​​.!

ರಾಜಸ್ಥಾನ, ಚೆನ್ನೈ ಎದುರು ಆರ್​ಸಿಬಿ ಗೆಲುವಿಗೆ ಮೇನ್ ರೀಸನ್ ಡೆತ್ ಓವರ್​ಗಳಲ್ಲಿ ಬೌಲರ್ಸ್ ಮಾಡಿದ ಕರಾಮತ್ತು. ಇದೀಗ ಮಹತ್ವದ ಘಟ್ಟದಲ್ಲಿ ಪ್ರಮುಖ ವೇಗಿ ಜೋಶ್​​ ಹೇಜಲ್​ವುಡ್​ ಅಲಭ್ಯತೆ ಎದುರಾಗಿದೆ. ಹೇಜ್​ಲ್​ವುಡ್ ಅಲಭ್ಯತೆಯಲ್ಲಿ ಭುವನೇಶ್ವರ್​ ಕುಮಾರ್​ ಬೌಲಿಂಗ್​ ವಿಭಾಗದ ಜೋಶ್​​ ಹೆಚ್ಚಿಸಬೇಕಿದೆ. ಯಶ್​ ದಯಾಳ್​, ಲುಂಗಿ ಎನ್​ಗಿಡಿ ಜೊತೆಗೆ ಬೌಲಿಂಗ್​ನಲ್ಲೂ ಗ್ರೇಟ್​​ ಪಾರ್ಟನರ್​ಶಿಪ್​ ಮಾಡಬೇಕಿದೆ.

ಲಕ್ನೋದಲ್ಲಿರೋ 2 ಪಂದ್ಯಗಳಲ್ಲಿ ಗೆಲುವು ಅನಿವಾರ್ಯ.!

ಸದ್ಯ ಆರ್​ಸಿಬಿ, ಮುಂದಿನ 2 ಮ್ಯಾಚ್ ಲಕ್ನೋದಲ್ಲೇ ನಡೆಯಲಿದೆ. ಎಕಾನ ಮೈದಾನದಲ್ಲಿ ಆಡ್ತಾ ಇರೋದು ಆರ್​​ಸಿಬಿ ಪಾಲಿಗೆ ಒಂದು ಲೆಕ್ಕದಲ್ಲಿ ಅಡ್ವಾಂಟೇಜೇ.! ಹೋಮ್​​​ಗ್ರೌಂಡ್​ನಲ್ಲಿ ಗೆಲುವಿಗೆ ತಡಕಾಡಿದ್ದ ಆರ್​​ಸಿಬಿ ತವರಿನಾಚೆ ಸಖತ್​ ಪರ್ಫಾಮೆನ್ಸ್​ ನೀಡಿದೆ. ಇದೀಗ ಲಕ್ನೋದಲ್ಲೂ ಆರ್​ಸಿಬಿ 3 ವಿಭಾಗಗಳಲ್ಲಿ ಸಂಘಟಿತ ಹೋರಾಟ ನಡೆಸಬೇಕಿದೆ. ಒಗ್ಗಟ್ಟಿನ ಮಂತ್ರ ಜಪಿಸಿದ್ರೆ ಎರಡಕ್ಕೆ ಎರಡೂ ಮ್ಯಾಚ್​ ಗೆಲ್ಲೋದು ಕಷ್ಟವೇನಿಲ್ಲ. ಪಾಯಿಂಟ್​ ಟೇಬಲ್​ನ ಟಾಪ್​-2 ಸ್ಥಾನದ ಕನಸೂ ನನಸಾಗುವುದರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment