/newsfirstlive-kannada/media/post_attachments/wp-content/uploads/2024/09/RCB_KOHLI_WILL_JACKS.jpg)
IPL ಮೆಗಾ ಹರಾಜು ಅಂತ್ಯ ಕಂಡಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ ಆಟಗಾರರನ್ನ ಖರೀದಿ ಮಾಡಿರೋ ತಂಡಗಳ ಬಲಾಬಲದ ಲೆಕ್ಕಾಚಾರ ಜೋರಾಗಿದೆ. ₹83 ಕೋಟಿ ಇಟ್ಟು ಕೊಂಡು ಆ್ಯಕ್ಷನ್ಗೆ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಿಸೆಂಟ್ ತಂಡವನ್ನ ಕಟ್ಟುವಲ್ಲಿ ಯಶಸ್ವಿಯಾಗಿದೆ. ಆದ್ರೆ, ಆರ್ಟಿಎಮ್ ಅವಕಾಶವನ್ನ ಸರಿಯಾಗಿ ಬಳಸಿಕೊಂಡಿದ್ರೆ, ಬಲಿಷ್ಠ ತಂಡವನ್ನೇ ಕಟ್ಟಬಹುದಿತ್ತು. ಹಾಗಾದ್ರೆ, ಆರ್ಸಿಬಿ ಎಡವಿದ್ದೆಲ್ಲಿ.?
ಅಪಾರ ನಿರೀಕ್ಷೆಯೊಂದಿಗೆ ಹರಾಜಿನ ಕಣಕ್ಕೆ ಧುಮುಕಿದ್ದ ಆರ್ಸಿಬಿ ತಂಡ ಬರೋಬ್ಬರಿ 22 ಆಟಗಾರರನ್ನ ಖರೀದಿಸಿದೆ. ಹೊಸ ತಂಡ ಹೊಸ ಹುರುಪಿನೊಂದಿಗೆ ಸೀಸನ್ 18ಕ್ಕೆ ಕಾಲಿಡಲು ಸಜ್ಜಾಗಿದೆ. ಆದ್ರೆ, ಹರಾಜಿನಲ್ಲಿ ದೊಡ್ಡ ಯಡವಟ್ಟು ಮಾಡಿಕೊಂಡಿದೆ. ಮಾಜಿ ಆಟಗಾರರನ್ನ ಕಡೆಗಣಿಸಿ ದೊಡ್ಡ ತಪ್ಪು ಮಾಡಿದೆ.
ಕೋರ್ ಟೀಮ್ ಖರೀದಿಯಲ್ಲಿ ಎಡವಿದ ಆರ್ಸಿಬಿ.!
ರಿಟೈನ್ಶನ್ ಅವಕಾಶದಲ್ಲಿ ಮೂವರು ಆಟಗಾರರನ್ನ ಉಳಿಸಿಕೊಂಡಿದ್ದ ಆರ್ಸಿಬಿ ಬಿಗ್ ಪರ್ಸ್ನೊಂದಿಗೆ ಮೆಗಾ ಹರಾಜಿಗೆ ಹೋಗಿತ್ತು. ಮೂರು ರೈಟ್ ಟು ಕಾರ್ಡ್ ಆಪ್ಷನ್ ಕೂಡ ತಂಡಕ್ಕಿತ್ತು. ಹೀಗಾಗಿ ಹಳೆಯ ಆಟಗಾರರಿಗೆ ಆರ್ಸಿಬಿ ಮಣೆ ಹಾಕುತ್ತೆ ಅನ್ನೋ ನಿರೀಕ್ಷೆಯಿತ್ತು. ಆದ್ರೆ, ಆರ್ಸಿಬಿ ಹಳೆ ಆಟಗಾರರನ್ನ ರಿಜೆಕ್ಟ್ ಮಾಡಿಬಿಡ್ತು. ಉಳಿದೆಲ್ಲಾ ತಂಡಗಳು ಕೋರ್ ಟೀಮ್ಗೆ ಆದ್ಯತೆ ನೀಡಿದ್ವು. ಆದ್ರೆ, ಆರ್ಸಿಬಿ ಕೋರ್ ಟೀಮ್ ಬಿಟ್ಟು ಹೊಸ ಆಟಗಾರರ ಹೊಸ ತಂಡಕ್ಕೆ ಆದ್ಯತೆ ನೀಡಿತು. ಈ ನಿರ್ಧಾರ ಅಖಾಡದಲ್ಲಿ ಆರ್ಸಿಬಿಗೆ ಹಿನ್ನಡೆಯಾಗೋ ಸಾಧ್ಯತೆ ದಟ್ಟವಾಗಿದೆ.
ತಂಡಕ್ಕಾಗಿ 7 ಸೀಸನ್ ದುಡಿದ ಸಿರಾಜ್ಗೆ ಗುಡ್ ಬೈ.!
ಒಂದಲ್ಲ.. ಎರಡಲ್ಲ.. 7 ಸೀಸನ್.. 2018ರಿಂದ 2024ರ ಐಪಿಎಲ್ವರೆಗೆ ವೇಗಿ ಮೊಹಮ್ಮದ್ ಸಿರಾಜ್ ಆರ್ಸಿಬಿಯ ಅವಿಭಾಜ್ಯ ಅಂಗವಾಗಿದ್ರು. ಈ ಬಾರಿಯೂ ಸಿರಾಜ್ ಆರ್ಸಿಬಿಯಲ್ಲೇ ಇರ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ, ರಿಟೈನ್ ಮಾಡಿಕೊಳ್ಳದ ಆರ್ಸಿಬಿ ಆಕ್ಷನ್ನಲ್ಲಿ, ರೈಟ್ ಟು ಮ್ಯಾಚ್ ಕಾರ್ಡ್ ಅವಕಾಶವನ್ನೂ ಬಳಸಲಿಲ್ಲ.
ಒಂದು ಸೀಸನ್ ಫ್ಲಾಪ್.. ಮ್ಯಾಕ್ಸ್ವೆಲ್ ಬೇಡವಾದ್ರಾ.?
ಅಸಿಸ್ನ ಸ್ಫೋಟಕ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಕಳೆದ ಸೀಸನ್ನಲ್ಲಿ ಅತ್ಯಂತ ಹೀನಾಯ ಪರ್ಫಾಮೆನ್ಸ್ ನೀಡಿದ್ರು. ಆದ್ರೆ, ಅದಕ್ಕೂ ಹಿಂದಿನ 3 ಸೀಸನ್ಗಳಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರು. 160+ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ಕ್ರಿಕೆಟರ್ ಅಂದ್ಮೇಲೆ ಲೀನ್ ಪ್ಯಾಚ್ ಸಹಜ. ಕೊಹ್ಲಿನೇ 3 ವರ್ಷ ವೈಫಲ್ಯದ ಸುಳಿಗೆ ಸಿಲುಕಿರಲಿಲ್ವೆ.? ಹೀಗಿರೋವಾಗ ಮ್ಯಾಕ್ಸ್ವೆಲ್ನ ಬ್ಯಾಕ್ ಮಾಡಬೇಕಿತ್ತು. ಸಿಂಗಲ್ ಹ್ಯಾಂಡೆಡ್ಲಿ ಪಂದ್ಯದ ಗತಿಯನ್ನೇ ಬದಲಿಸೋ ತಾಕತ್ತು ಮ್ಯಾಕ್ಸ್ವೆಲ್ಗಿತ್ತು. ಬ್ಯಾಟಿಂಗ್ ಜೊತೆ ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗ್ತಿದ್ರು. ಆದ್ರೆ, ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಮ್ಯಾಕ್ಸಿ ಲಭ್ಯವಿದ್ರೂ, ಆರ್ಸಿಬಿ ಆರ್ಟಿಎಮ್ ಬಳಸೋ ಗೋಜಿಗೆ ಹೋಗಲಿಲ್ಲ.
ಇದನ್ನೂ ಓದಿ:RCBಯ 7 ಕ್ಯಾಪ್ಟನ್ಗಳ ಪೈಕಿ ದಿ ಬೆಸ್ಟ್ ಯಾರು.. ಕೊಹ್ಲಿ ಸಾರಥ್ಯದಲ್ಲಿ ಟೀಮ್ ಹೇಗಿತ್ತು?
ಆಕಾಶ್ ಅಂಬಾನಿ ಥ್ಯಾಂಕ್ಸ್ ಹೇಳಿದ್ದಲ್ಲ.. ಕಾಲೆಳೆದಿದ್ದು.!
ಎಲ್ಲರೂ ಹೋದ್ರೂ, ವಿಲ್ ಜಾಕ್ಸ್ ಆರ್ಸಿಬಿ ಬಂದೇ ಬರ್ತಾರೆ ಅನ್ನೋದು ಫ್ಯಾನ್ಸ್ ಆಸೆ ಆಗಿತ್ತು. ಆರ್ಟಿಎಮ್ ಬಳಸಿ ವಾಪಾಸ್ ತಂಡಕ್ಕೆ ಕರೆ ತರಬಹುದಿತ್ತು. ಆದ್ರೆ, ಆರ್ಸಿಬಿ ಮ್ಯಾನೇಜ್ಮೆಂಟ್ ಅದೇನು ಲೆಕ್ಕಾಚಾರ ಹಾಕ್ತೋ ಗೊತ್ತಿಲ್ಲ. ಉದಾರವಾಗಿ ಮುಂಬೈಗೆ ಬಿಟ್ಟು ಕೊಡ್ತು. ಅದಾದ ಬಳಿಕ ಮುಂಬೈ ಓನರ್ ಆಕಾಶ್ ಅಂಬಾನಿ ಬಂದು ಆರ್ಸಿಬಿಯ ಪ್ರಥಮೇಶ್ ಮಿಶ್ರಾಗೆ ಶೇಕ್ ಹ್ಯಾಡ್ ಕೊಟ್ರು. ಅಸಲಿಗೆ ಅದು ದೊಡ್ಡ ಉಪಕಾರ ಮಾಡಿದ್ರಿ ಅಂತ ಧನ್ಯವಾದ ಹೇಳಿದಲ್ಲ. ನಿಮಗೆ ಇವ್ನ ವ್ಯಾಲ್ಯೂ ಗೊತ್ತಿಲ್ಲ ಬಿಡಿ ಎಂದು ಕಾಲೆಳೆದಿದ್ದು.
ಕೊನೆಯದಾಗಿ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ಗಾದ್ರೂ ಆರ್ಟಿಎಮ್ ಯೂಸ್ ಮಾಡಬಹುದಿತ್ತು. ಆದ್ರೆ, ಫುಲ್ ಆ್ಯಟಿಟ್ಯೂಡ್ನಲ್ಲಿ ಮ್ಯಾನೇಜ್ಮೆಂಟ್ ನೋ ಎಂದಿತು. ವೈಶಾಕ್ ವ್ಯಾಲ್ಯೂ ಗೊತ್ತಿದ್ದ ಪಂಜಾಬ್ ಹೆಡ್ ಕೋಚ್ ರಿಕಿ ಪಾಂಟಿಂಗ್ ಫುಲ್ ಖುಷ್ ಆಗಿ ಖರೀದಿಸಿದರು.
ಹಳೆ ಆಟಗಾರರನ್ನ ಬಿಟ್ಟು ಕೊಟ್ಟಿದ್ದೆ ದೊಡ್ಡ ಹಿನ್ನಡೆ.!
ಹರಾಜಿನಲ್ಲಿ ಆರ್ಸಿಬಿ ಬಿಟ್ಟು ಉಳಿದಲ್ಲ ತಂಡಗಳು ಕೋರ್ ಟೀಮ್ ಖರೀದಿಗೆ ಒತ್ತು ನೀಡಿದ್ವು. 5 ಬಾರಿಯ ಚಾಂಪಿಯನ್ಗಳಾದ ಮುಂಬೈ, ಚೆನ್ನೈ ತಂಡಗಳು ಈ ಬಾರಿಯೂ ಕೋರ್ ಟೀಮ್ ಬಿಟ್ಟು ಕೊಡಲಿಲ್ಲ. ಹಾಗಾದ್ರೆ, ಅವ್ರೇನು ದಡ್ಡರಾ.? ನೋ ವೇ.. ಇದ್ರ, ಹಿಂದೆ ಲೆಕ್ಕಾಚಾರವಿದೆ. ಕಳೆದ 3 ಸೀಸನ್ಗಳಿ ತಂಡದಲ್ಲಿರೋ ಆಟಗಾರನಿಗೆ ಫ್ರಾಂಚೈಸಿ ಕಲ್ಚರ್ ಬಗ್ಗೆ ಗೊತ್ತಿರುತ್ತೆ. ಟೀಮ್ ವಾತಾವರಣ, ಮ್ಯಾನೇಜ್ಮೆಂಟ್ನ ನಿರೀಕ್ಷೆ, ಫ್ಯಾನ್ಸ್ ಪಲ್ಸ್ ಬಗ್ಗೆ ಅರಿವಿರುತ್ತೆ. ಹಳೆ ಆಟಗಾರರು ತಂಡದಲ್ಲಿದ್ರೆ, ಡ್ರೆಸ್ಸಿಂಗ್ ರೂಮ್ ವಾತಾವರಣ ಚನ್ನಾಗಿರುತ್ತೆ. ಇದು ಚನ್ನಾಗಿದ್ರೆ, ಆನ್ ಫೀಲ್ಡ್ನಲ್ಲಿ ರಿಸಲ್ಟೂ ಸಿಗುತ್ತೆ. ಆದ್ರೆ, 18 ಸೀಸನ್ ಕಳೆದ್ರೂ ಆರ್ಸಿಬಿಗೆ ಇದು ಅರ್ಥವಾಗಿಲ್ಲ ಅನ್ಸುತ್ತೆ.
ಹಳೆ ಆಟಗಾರರ ಖರೀದಿ ಬಿಡಿ.. ಆರಂಭದಲ್ಲಿ ಮಾರ್ಕ್ಯೂ ಪ್ಲೇಯರ್ಸ್ ಲಿಸ್ಟ್ನಲ್ಲಿ ಬಂದ ಬೇರ್ಯಾವ ದೊಡ್ಡ ಆಟಗಾರರನ್ನ ಖರೀದಿಗೂ ಆರ್ಸಿಬಿ ಆಸಕ್ತಿ ತೋರಲಿಲ್ಲ. ನಾವು ಬಿಡ್ ಮಾಡಿದ್ವಿ ಅಂತಾ ತೋರಿಸೋದಕ್ಕೋ ಏನೋ ಸ್ವಲ್ಪ ಬಿಡ್ ಮಾಡಿ ಬಳಿಕ ಸೈಲೆಂಟ್ ಆಗ್ತಿತ್ತು. ಬರೋಬ್ಬರಿ ₹83 ಕೋಟಿ ಪರ್ಸ್ನಲ್ಲಿದ್ರು, ಮ್ಯಾನೇಜ್ಮೆಂಟ್ ಸುಮ್ಮನೆ ಕೂತಿತ್ತು.
ಕಳೆದ ಕೆಲ ಸೀಸನ್ಗಳಿಗೆ ಹೋಲಿಸಿದ್ರೆ, ಈ ಬಾರಿ ಆರ್ಸಿಬಿ ಯಾರ ಮೇಲೂ ಬಿಗ್ ಅಮೌಂಟ್ ಸ್ಪೆಂಡ್ ಮಾಡದೇ ಡಿಸೆಂಟ್ ಬೈ ಮಾಡಿದೆ. ಆದ್ರೆ, ಕೋರ್ ಟೀಮ್ ಇಲ್ಲದ ಕೊರಗನ್ನ ಹೇಗೆ ನಿಭಾಯಿಸುತ್ತೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ