ಆರ್​ಸಿಬಿ ಈ ಯಂಗ್ ಆಟಗಾರನಿಗೆ ಕ್ಯಾಪ್ಟನ್ಸಿ ನೀಡಬೇಕು -ಉತ್ತಪ್ಪ ಹೇಳಿದ ಹೆಸರು ಯಾವುದು?

author-image
Ganesh
Updated On
ಆರ್​ಸಿಬಿ ಈ ಯಂಗ್ ಆಟಗಾರನಿಗೆ ಕ್ಯಾಪ್ಟನ್ಸಿ ನೀಡಬೇಕು -ಉತ್ತಪ್ಪ ಹೇಳಿದ ಹೆಸರು ಯಾವುದು?
Advertisment
  • ನೂತನ ಕೋಚ್ ಹುಡುಕಾಟದಲ್ಲಿ ಆರ್​ಸಿಬಿ
  • ಐಪಿಎಲ್-2025ರಲ್ಲಿ ಆರ್​ಸಿಬಿಗೆ ಕಪ್ ಗೆಲ್ಲುವ ಗುರಿ
  • ಮೂವರನ್ನು ಉಳಿಸಿಕೊಂಡಿರುವ ಆರ್​​ಸಿಬಿ ಫ್ರಾಂಚೈಸಿ

ಇಲ್ಲಿಯವರೆಗೆ ಐಪಿಎಲ್ ಕಪ್ ಗೆಲ್ಲದ ಕೆಲವೇ ಕೆಲವು ಫ್ರಾಂಚೈಸಿಗಳಲ್ಲಿ ಆರ್​ಸಿಬಿ ಕೂಡ ಒಂದು. ಐಪಿಎಲ್-2025ರಲ್ಲಿ ಕಪ್ ಗೆಲ್ಲುವ ಗುರಿ ಹೊಂದಿರುವ ಆರ್​ಸಿಬಿ, ತಂಡದಲ್ಲಿ ಭಾರೀ ಬದಲಾವಣೆ ಮಾಡಲಿದೆ.

ಅದಕ್ಕಾಗಿ ಸಮರ್ಥ ಕ್ಯಾಪ್ಟನ್​​ ಹುಡುಕಾಟದಲ್ಲಿದೆ. ಫಾಫ್ ಡುಪ್ಲೆಸಿಸ್​ಗೆ ಕ್ಯಾಪ್ಟನ್ಸಿ ಸ್ಥಾನದಿಂದ ಕೊಕ್ ನೀಡಿ ತಂಡದಿಂದಲೇ ಕೈಬಿಡಲಾಗಿದೆ. ಹೀಗಾಗಿ ಫಾಫ್ ಸ್ಥಾನವನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಈ ನಡುವೆ ಕನ್ನಡಿಗ, ಟೀಂ ಇಂಡಿಯಾದ ಮಾಜಿ ಸ್ಟಾರ್ ರಾಬಿನ್ ಉತ್ತಪ್ಪ ಆರ್​ಸಿಬಿ ಕ್ಯಾಪ್ಟನ್​ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಆರ್​ಸಿಬಿ ಬೌಲಿಂಗ್ ವಿಭಾಗಕ್ಕೆ ಆನೆಬಲ; ಯಾರು ಈ ಓಂಕಾರ್ ಸಾಲ್ವಿ..?

ಎರಡು ವರ್ಷಗಳ ನಂತರ ಆರ್​ಸಿಬಿಗೆ ಹೊಸ ಕ್ಯಾಪ್ಟನ್ ಅಗತ್ಯ ಇದೆ. ಅವರು ರಜತ್ ಪಾಟೀದರ್​ ಅವರನ್ನು ಕ್ಯಾಪ್ಟನ್ ಆಯ್ಕೆ ಮಾಡುವ ಬಗ್ಗೆ ಯೊಚಿಸಬೇಕು ಎಂದು ನಾನು ಭಾವಿಸುತ್ತೇನೆ. ಮುಂದಿನ ಮೂರರಿಂದ ಐದು ಸೀಸನ್​ಗಳವರೆಗೆ ಸಮರ್ಥ ನಾಯಕನೊಂದಿಗೆ ತಂಡ ಕಟ್ಟಬೇಕು ಅಂದರೆ ಹೊಸ ನಾಯಕನ ಅಗತ್ಯವಿದೆ. ನನ್ನ ಪ್ರಕಾರ ಅದನ್ನು ರಜತ್ ಪಾಟೀದರ್​ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಉತ್ತಪ್ಪ ಹೇಳಿದ್ದಾರೆ.

ಅಂದ್ಹಾಗೆ ಆರ್​ಸಿಬಿ ರಜತ್ ಪಾಟೀದರ್​ ಅವರನ್ನು ರಿಟೈನ್ಡ್ ಮಾಡಿಕೊಂಡಿದೆ. ಬರೋಬ್ಬರಿ 11 ಕೋಟಿ ರೂಪಾಯಿ ಹಣ ನೀಡಿ ಅವರನ್ನು ಉಳಿಸಿಕೊಂಡಿದೆ. ಜೊತೆಗೆ ಕಿಂಗ್ ವಿರಾಟ್ ಕೊಹ್ಲಿ ಹಾಗೂ ಯಶ್ ದಯಾಳ್ ಅವರನ್ನು ಆರ್​ಸಿಬಿ ಉಳಿಸಿಕೊಂಡು ಉಳಿದೆಲ್ಲ ಆಟಗಾರರನ್ನು ರಿಲೀಸ್ ಮಾಡಿದೆ.

ಇದನ್ನೂ ಓದಿ:RTM ನಿಯಮದಡಿ ಆರ್​ಸಿಬಿಗೆ ಮೂವರು ಸ್ಟಾರ್ ಎಂಟ್ರಿ.. ವಿಲ್ ಜಾಕ್ಸ್​ ಸೇರಿ ಯಾಱರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment