newsfirstkannada.com

ಇಂದು ಹೈದರಾಬಾದ್​​​ ವಿರುದ್ಧ ಸೆಣಸಾಟ; ಆರ್​​​​ಸಿಬಿ ತಂಡದಿಂದ ಸ್ಟಾರ್​​​ ಪ್ಲೇಯರ್​ಗೆ ಕೊಕ್​

Share :

Published April 15, 2024 at 5:24pm

Update April 15, 2024 at 5:38pm

    5 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ವಿಕೆಟ್​ ಪಡೆಯಲಾಗದೇ ಸ್ಟಾರ್​​ ವೇಗಿ ಮೊಹಮ್ಮದ್​ ಸಿರಾಜ್​​ ಬೌಲಿಂಗ್​ನಲ್ಲಿ ವೈಫಲ್ಯ

    ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಿಂದ ಮೊಹಮ್ಮದ್​ ಸಿರಾಜ್​ ಔಟ್​​!

ಇಂದು ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಈ ಮಧ್ಯೆ ಆರ್​​ಸಿಬಿ ಫ್ಯಾನ್ಸ್​ಗೆ ಶಾಂಕಿಂಗ್​ ನ್ಯೂಸ್​ ಕಾದಿದೆ.
ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಶುರುವಾಗಿದೆ. ಈ ಸೀಸನ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬ್ಯಾಕ್​ ಟು ಬ್ಯಾಕು 5 ಪಂದ್ಯ ಸೋತಿದೆ. ಇತ್ತೀಚೆಗೆ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲೂ ಹೀನಾಯ ಬೌಲಿಂಗ್​ ಕಾರಣಕ್ಕೆ ಆರ್​​​ಸಿಬಿ ಮುಂಬೈ ಇಂಡಿಯನ್ಸ್​ ವಿರುದ್ಧ ಸೋತಿದೆ. ಇದರ ಮಧ್ಯೆ ಆರ್​​ಸಿಬಿ ಬೌಲರ್​ ಮೊಹಮ್ಮದ್​​ ಸಿರಾಜ್​ ​ವಿರುದ್ಧ ಫ್ಯಾನ್ಸ್​​ ಆಕ್ರೋಶ ಹೊರಹಾಕಿದ್ದಾರೆ.

ಇದಕ್ಕೆ ಕಾರಣ ಆರ್​​​ಸಿಬಿ ಬ್ಯಾಟಿಂಗ್​ ಮತ್ತು ಬೌಲಿಂಗ್​​ ವಿಭಾಗದಲ್ಲಿ ಫೇಲ್ಯೂರ್​ ಆಗಿರುವುದು. ಅದರಲ್ಲೂ ತಂಡದ ಸೋಲಿಗೆ ಬೌಲಿಂಗ್‌ ವಿಭಾಗದ ಕಳಪೆ ಪ್ರದರ್ಶನ ಕೂಡ ಕಾರಣವಾಗಿದೆ. ಪ್ರತಿ ಪಂದ್ಯದಲ್ಲೂ ಬೌಲರ್​ಗಳು ಭಾರೀ ರನ್​ಗಳು ಬಿಟ್ಟುಕೊಡೋ ಮೂಲಕ ಬಹಳ ದುಬಾರಿ ಆಗುತ್ತಿದ್ದಾರೆ.

ಆರ್‌ಸಿಬಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್‌ ಪಡೆಯಲು ಸಾಧ್ಯವಾಗದೆ ಫೇಲ್ಯೂರ್​ ಆಗಿದ್ದಾರೆ. ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಗೋ ಮೂಲಕ ಕಳಪೆ ಫಾರ್ಮ್​ನಲ್ಲಿ ಇದ್ದಾರೆ. ಸಿರಾಜ್ 6 ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಇವರನ್ನು ಬೆಂಚ್​ ಕಾಯಿಸಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೂ ಸನ್​ರೈಸರ್ಸ್​​ ಹೈದಾರಾಬಾದ್​​ ವಿರುದ್ಧ ನಡೆಯೋ ಪಂದ್ಯಕ್ಕೆ ಹಾಕಿಕೊಳ್ಳಬಾರದು ಎಂದು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಮಾಡಲಾಗುತ್ತಿದೆ. ಆರ್​​​ಸಿಬಿ ಮ್ಯಾನೇಜ್ಮೆಂಟ್​ ಕೂಡ ಸಿರಾಜ್​ಗೆ ಕೊಕ್​​ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಹೈದರಾಬಾದ್​​​ ವಿರುದ್ಧ ರೋಚಕ ಪಂದ್ಯ; ಆರ್​​​ಸಿಬಿಯನ್ನು ಗೆಲ್ಲಿಸಲು ಅಚ್ಚರಿ ಪ್ಲೇಯರ್​ ಎಂಟ್ರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಹೈದರಾಬಾದ್​​​ ವಿರುದ್ಧ ಸೆಣಸಾಟ; ಆರ್​​​​ಸಿಬಿ ತಂಡದಿಂದ ಸ್ಟಾರ್​​​ ಪ್ಲೇಯರ್​ಗೆ ಕೊಕ್​

https://newsfirstlive.com/wp-content/uploads/2024/04/RCB_VS-SRH-1.jpg

    5 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ವಿಕೆಟ್​ ಪಡೆಯಲಾಗದೇ ಸ್ಟಾರ್​​ ವೇಗಿ ಮೊಹಮ್ಮದ್​ ಸಿರಾಜ್​​ ಬೌಲಿಂಗ್​ನಲ್ಲಿ ವೈಫಲ್ಯ

    ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಿಂದ ಮೊಹಮ್ಮದ್​ ಸಿರಾಜ್​ ಔಟ್​​!

ಇಂದು ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಈ ಮಧ್ಯೆ ಆರ್​​ಸಿಬಿ ಫ್ಯಾನ್ಸ್​ಗೆ ಶಾಂಕಿಂಗ್​ ನ್ಯೂಸ್​ ಕಾದಿದೆ.
ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಶುರುವಾಗಿದೆ. ಈ ಸೀಸನ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬ್ಯಾಕ್​ ಟು ಬ್ಯಾಕು 5 ಪಂದ್ಯ ಸೋತಿದೆ. ಇತ್ತೀಚೆಗೆ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲೂ ಹೀನಾಯ ಬೌಲಿಂಗ್​ ಕಾರಣಕ್ಕೆ ಆರ್​​​ಸಿಬಿ ಮುಂಬೈ ಇಂಡಿಯನ್ಸ್​ ವಿರುದ್ಧ ಸೋತಿದೆ. ಇದರ ಮಧ್ಯೆ ಆರ್​​ಸಿಬಿ ಬೌಲರ್​ ಮೊಹಮ್ಮದ್​​ ಸಿರಾಜ್​ ​ವಿರುದ್ಧ ಫ್ಯಾನ್ಸ್​​ ಆಕ್ರೋಶ ಹೊರಹಾಕಿದ್ದಾರೆ.

ಇದಕ್ಕೆ ಕಾರಣ ಆರ್​​​ಸಿಬಿ ಬ್ಯಾಟಿಂಗ್​ ಮತ್ತು ಬೌಲಿಂಗ್​​ ವಿಭಾಗದಲ್ಲಿ ಫೇಲ್ಯೂರ್​ ಆಗಿರುವುದು. ಅದರಲ್ಲೂ ತಂಡದ ಸೋಲಿಗೆ ಬೌಲಿಂಗ್‌ ವಿಭಾಗದ ಕಳಪೆ ಪ್ರದರ್ಶನ ಕೂಡ ಕಾರಣವಾಗಿದೆ. ಪ್ರತಿ ಪಂದ್ಯದಲ್ಲೂ ಬೌಲರ್​ಗಳು ಭಾರೀ ರನ್​ಗಳು ಬಿಟ್ಟುಕೊಡೋ ಮೂಲಕ ಬಹಳ ದುಬಾರಿ ಆಗುತ್ತಿದ್ದಾರೆ.

ಆರ್‌ಸಿಬಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್‌ ಪಡೆಯಲು ಸಾಧ್ಯವಾಗದೆ ಫೇಲ್ಯೂರ್​ ಆಗಿದ್ದಾರೆ. ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಗೋ ಮೂಲಕ ಕಳಪೆ ಫಾರ್ಮ್​ನಲ್ಲಿ ಇದ್ದಾರೆ. ಸಿರಾಜ್ 6 ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಇವರನ್ನು ಬೆಂಚ್​ ಕಾಯಿಸಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೂ ಸನ್​ರೈಸರ್ಸ್​​ ಹೈದಾರಾಬಾದ್​​ ವಿರುದ್ಧ ನಡೆಯೋ ಪಂದ್ಯಕ್ಕೆ ಹಾಕಿಕೊಳ್ಳಬಾರದು ಎಂದು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಮಾಡಲಾಗುತ್ತಿದೆ. ಆರ್​​​ಸಿಬಿ ಮ್ಯಾನೇಜ್ಮೆಂಟ್​ ಕೂಡ ಸಿರಾಜ್​ಗೆ ಕೊಕ್​​ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಹೈದರಾಬಾದ್​​​ ವಿರುದ್ಧ ರೋಚಕ ಪಂದ್ಯ; ಆರ್​​​ಸಿಬಿಯನ್ನು ಗೆಲ್ಲಿಸಲು ಅಚ್ಚರಿ ಪ್ಲೇಯರ್​ ಎಂಟ್ರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More