/newsfirstlive-kannada/media/post_attachments/wp-content/uploads/2024/05/Rajat-Patidar_321.jpg)
ಸದ್ಯ ನಡೆಯುತ್ತಿರೋ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ, ಮುಂಬೈ ತಂಡಗಳು ಸೆಣಸಾಡುತ್ತಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ ನಿಗದಿತ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿದ್ದಾರೆ.
ಇನ್ನು, ಮಧ್ಯಪ್ರದೇಶದ ಪರ ಓಪನಿಂಗ್ ಮಾಡಿದ ಅರ್ಪಿತ್ ಗೌಡ, ಹರ್ಷ್ ಗೌಲಿ ಸಿಂಗಲ್ ಡಿಜಿಟ್ಗೆ ಔಟಾದ್ರು. ಬಳಿಕ ಬಂದ ಸುಭ್ರಾಂಶು ಸೇನಾಪತಿ 23 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಹರ್ಪ್ರಿತ್ ಸಿಂಗ್ ಕೂಡ ಕ್ಯಾಪ್ಟನ್ ರಜತ್ ಪಾಟಿದಾರ್ಗೆ ಸಾಥ್ ನೀಡುವಲ್ಲಿ ಎಡವಿದರು.
ರಜತ್ ಪಾಟಿದಾರ್ ಏಕಾಂಗಿ ಹೋರಾಟ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ಮತ್ತು ಮಧ್ಯಪ್ರದೇಶದ ಕ್ಯಾಪ್ಟನ್ ರಜತ್ ಪಾಟಿದಾರ್ ತನ್ನ ಆರ್ಭಟ ಮುಂದುವರಿಸಿದ್ರು. ಏಕಾಂಗಿ ಹೋರಾಟ ನಡೆಸಿದ ರಜತ್ ಮುಂಬೈ ತಂಡದ ಬೌಲರ್ಗಳನ್ನು ಕಾಡಿದ್ರು.
RAJAT CLUTCH PATIDAR 81*(40) ALONE WARRIOR INNINGS AGAINST MUMBAI🔥👏 pic.twitter.com/N9rMxfj8Kw
— Vinay (@Koxassassin) December 15, 2024
ಸ್ಫೋಟಕ ಅರ್ಧಶತಕ
ತಾನು ಎದುರಿಸಿದ 40 ಬಾಲ್ನಲ್ಲಿ ರಜತ್ ಪಾಟಿದಾರ್ ಅಜೇಯ 81 ರನ್ ಚಚ್ಚಿದ್ರು. ಬ್ಯಾಕ್ ಟು ಬ್ಯಾಕ್ 6 ಫೋರ್ ಮತ್ತು ಬರೋಬ್ಬರಿ 6 ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದ್ರು. ಫಿಯರ್ಲೆಸ್ ಬ್ಯಾಟಿಂಗ್ ಮಾಡಿದ ಇವರ ಸ್ಟ್ರೈಕ್ರೇಟ್ 200ಕ್ಕೂ ಹೆಚ್ಚು ಇತ್ತು.
ಇದನ್ನೂ ಓದಿ:6,6,6,6,6,6; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ RCB ಸ್ಫೋಟಕ ಬ್ಯಾಟರ್ ರಜತ್ ಪಾಟಿದಾರ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್