/newsfirstlive-kannada/media/post_attachments/wp-content/uploads/2025/04/RAJAT-AND-KOHLI.jpg)
ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮುಖಭಂಗ ಎದುರಿಸಿದೆ. ಎದುರಾಳಿಗೆ ಆರ್ಸಿಬಿ 164 ರನ್ಗಳ ಟಾರ್ಗೆಟ್ ನೀಡಿತ್ತು. 163 ರನ್ಗಳನ್ನು ಡಿಪೆಂಡ್ ಮಾಡಿಕೊಳ್ಳಲು ಫೀಲ್ಡಿಂಗ್ಗೆ ಇಳಿದಿದ್ದ ಆರ್ಸಿಬಿ ಆರಂಭದಲ್ಲಿ ಯಶಸ್ವಿ ಕೂಡ ಆಯಿತು.
ಕೇವಲ 30 ರನ್ಗಳಿಗೆ ಟಾಪ್ ಆರ್ಡರ್ನ ಮೂರು ಬ್ಯಾಟರ್ಗಳನ್ನು ಔಟ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ನಾಲ್ಕನೇ ಆರ್ಡರ್ನಲ್ಲಿ ಬ್ಯಾಟಿಂಗ್ಗೆ ಬಂದ ಡೆಲ್ಲಿ ಕ್ಯಾಪಿಟಲ್ಸ್ನ ವಿಕೆಟ್ ಕೀಪರ್ ಕೆ.ಎಲ್.ರಾಹುಲ್, 53 ಬಾಲ್ಗೆ 93 ರನ್ ಚಚ್ಚಿದರು. ಅಲ್ಲದೇ ತಂಡವನ್ನು ಗೆಲ್ಲಿಸುವಲ್ಲಿಯೂ ಯಶಸ್ವಿಯಾದರು.
ಇದನ್ನೂ ಓದಿ: 3.5ನೇ ಓವರ್ನಲ್ಲಿ ನಡೆದ ಆ ಒಂದು ಘಟನೆ RCB ಸೋಲಿಗೆ ಕಾರಣ..!
ಇನ್ನೇನು ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುತ್ತೆ ಅನ್ನೋ ವೇಳೆಗೆ ಆರ್ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಕೋಪದಲ್ಲಿ ಇದ್ದಂತೆ ಕಂಡು ಬಂದಿದೆ. ಫೀಲ್ಡಿಂಗ್ ವೇಳೆ ಕೋಚ್ ದಿನೇಶ್ ಕಾರ್ತಿಕ್ ಬಳಿ ಸಿಟ್ಟಿನಿಂದ ಚರ್ಚಿಸಿದ್ದಾರೆ. ಚರ್ಚೆ ವೇಳೆ ಯಾವುದೋ ಆಟಗಾರನ ವಿರುದ್ಧ ದೂರು ನೀಡಿದಂತೆ ಕಂಡುಬಂದಿದೆ. ಇದನ್ನು ನೋಡಿರುವ ಅನೇಕರು, ಕ್ಯಾಪ್ಟನ್ ರಜತ್ ಪಾಟೀದಾರ್ ಮೇಲೆ ವಿರಾಟ್ ಬೇಸರಗೊಂಡಿದ್ದಾರೆ ಎನ್ನುತ್ತಿದ್ದಾರೆ.
ರಜತ್ ಮೇಲೆ ಮುನಿಸು..
ವಿರಾಟ್ ಕೊಹ್ಲಿ ಕ್ಯಾಪ್ಟನ್ ರಜತ್ ಪಾಟೀದಾರ್ ಜೊತೆ ಮುನಿಸಿಕೊಂಡಿದ್ದಾರೆ ಅಂತಾ ವೀಕ್ಷಕ ವಿವರಣೆಗಾರರು ಅರ್ಥೈಸಿದ್ದಾರೆ. ಬೌಲಿಂಗ್ ವೇಳೆ ಮಿಡಲ್ ಓವರ್ಗಳಲ್ಲಿ ತೆಗೆದುಕೊಂಡ ಕೆಟ್ಟ ನಿರ್ಧಾರಗಳಿಂದ ಕೊಹ್ಲಿ ಕೆಂಡ ಕಾರುತ್ತಿದ್ದಾರೆ. ಸರಿಯಾಗಿ ಫೀಲ್ಡಿಂಗ್ ಸೆಟ್ ಮಾಡುವುದರ ಜೊತೆಗೆ, ಕ್ಯಾಪ್ಟನ್ ನಿರ್ಧಾರ ಸರಿ ಇದ್ದರೆ ಗೆಲ್ಲಬಹುದಿತ್ತು ಅನ್ನೋದು ಕೊಹ್ಲಿ ವಾದ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಗೆರೆ ಎಳೆದು ಬ್ಯಾಟ್ ಕುಟ್ಟಿ ಸಂಭ್ರಮ.. KL ರಾಹುಲ್ ಟಾಂಟ್ ಕೊಟ್ಟಿದ್ದು ಯಾರಿಗೆ..?
ಆಕಾಶ್ ಚೋಪ್ರಾ ಮತ್ತು ವೀರೇಂದ್ರ ಸೆಹ್ವಾಗ್ ಅವರು, ಕೊಹ್ಲಿಯ ಕೋಪವನ್ನು ಟೀಕಿಸಿದ್ದಾರೆ. ಬೇಸರಗೊಳ್ಳುವುದಲ್ಲ. ಏನೇ ಇದ್ದರೂ ಕ್ಯಾಪ್ಟನ್ ಪಾಟೀದಾರ್ಗೆ ತಿಳಿಸಿಬೇಕು ಎಂದಿದ್ದಾರೆ. ಇದಲ್ಲದೇ, ಪಂದ್ಯ ಮುಗಿದ ಬಳಿಕ, ಕೊಹ್ಲಿ ಮತ್ತು ರಜತ್ ಪಾಟೀದಾರ್ ಮುಖಾಮುಖಿ ಆದಾಗಲೂ ಕೋಪದಲ್ಲೇ ಇರೋದು ಕಂಡು ಬಂದಿದೆ. ಇನ್ನು, ರಜತ್ ಪಾಟೀದಾರ್ ಕೆ.ಎಲ್.ರಾಹುಲ್ ಅವರ ಕ್ಯಾಚ್ ಕೂಡ ಬಿಟ್ಟು ತಪ್ಪು ಮಾಡಿದ್ದರು. ಇದೇ ವಿಚಾರಕ್ಕೆ ವಿರಾಟ್ ಕೊಹ್ಲಿ ಕೋಪಿಸಿಕೊಂಡಿದ್ದರು ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್