RCBಗೆ ಗುಡ್​ನ್ಯೂಸ್.. ರಜತ್​ ತಂಡಕ್ಕೆ ಬಂತು ಆನೆಬಲ; ಎದುರಾಳಿ ಟೀಮ್​ಗೆ ನಡುಕ ಶುರು!

author-image
Bheemappa
Updated On
RCB 7 ಪಂದ್ಯ ಗೆದ್ದರೂ ಪ್ಲೇ ಆಫ್ ಎಂಟ್ರಿ ಸುಲಭ ಇಲ್ಲ.. ಬೆಂಗಳೂರಲ್ಲಿ ಅಗ್ನಿಪರೀಕ್ಷೆನಾ?
Advertisment
  • ಬಲಿಷ್ಠ ಲಕ್ನೋ ತಂಡದ ವಿರುದ್ಧ ಜಯ ಅಷ್ಟೊಂದು ಸುಲಭವಲ್ಲ.!
  • ಮಹತ್ವದ ಪಂದ್ಯದಲ್ಲಿ ಅಖಾಡಕ್ಕೆ ಧುಮಕಲಿರೋ ಸ್ಟಾರ್ ಆಟಗಾರ
  • ರೋಚಕ ಪಂದ್ಯದಲ್ಲಿ RCB, ಲಕ್ನೋ ಟೀಮ್​ಗಳು ಮುಖಾಮುಖಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಐಪಿಎಲ್ ಟ್ರೋಫಿ ಗೆಲ್ಲುವ ಫೇವರಿಟ್ ತಂಡವಾಗಿದೆ. ಸತತ ಗೆಲುವುಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿರುವ ಆರ್​​ಸಿಬಿಗೆ ಗುಡ್​ನ್ಯೂಸ್​ ಒಂದು ಸಿಕ್ಕಿದೆ. ಇಂಜುರಿಗೆ ಒಳಗಾಗಿದ್ದ ಸ್ಟಾರ್ ಪೇಸ್ ಬೌಲರ್​ ಮತ್ತೆ ತಂಡಕ್ಕೆ ಮರಳುವುದು ಸಂತಸ ತಂದಿದೆ.

ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್​ಸಿಬಿ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಏನಾದರೂ ವಿಜಯ ಪತಾಕೆ ಹಾರಿಸಿದರೆ ಪ್ಲೇ ಆಫ್​​ ಎಂಟ್ರಿ ಕನ್​ಫರ್ಮ್ ಆಗಲಿದೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡುವುದು ಸಹಜ. ಇದರ ಜೊತೆಗೆ ಆರ್​ಸಿಬಿಗೆ ಸ್ಟಾರ್​ ಪೇಸರ್​ ಜೋಶ್​ ಹ್ಯಾಜಲ್ವುಡ್​ ಹಿಂದಿರುವ ಸಾಧ್ಯತೆ ದಟ್ಟವಾಗಿವೆ.

ಇದನ್ನೂ ಓದಿ:ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಡ್ರೋಣ್ ಅಟ್ಯಾಕ್‌.. ಬೆಚ್ಚಿ ಬಿದ್ದ ಪಾಕಿಸ್ತಾನಕ್ಕೆ ಪುಕಪುಕ!

publive-image

ಜೋಶ್ ಹ್ಯಾಜಲ್ವುಡ್​ ಅವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಫೋಟೋವೊಂದನ್ನು ಶೇರ್ ಮಾಡಿ, ಅದಕ್ಕೆ ಬ್ಯಾಕ್ ಟು ಗೇಮ್ ಎಂದು ಟ್ಯಾಗ್ ಲೈನ್​ ಬರೆದಿದ್ದಾರೆ. ಸತತ ಇಂಜುರಿಯಿಂದ ಬಳಲುತ್ತಿದ್ದ ಆರ್​ಸಿಬಿ ಟೀಮ್​ಗೆ ಇದರಿಂದ ಆನೆ ಬಲ ಬಂದಂತೆ ಆಗಿದೆ. ಏಕೆಂದರೆ ಆರ್​ಸಿಬಿ ತಂಡದಲ್ಲಿ ಅತ್ಯಂತ ಮುಖ್ಯ ಬೌಲರ್ ಜೋಶ್ ಹ್ಯಾಜಲ್ವುಡ್ ಆಗಿದ್ದು ಈಗಾಗಲೇ ಈ ಸೀಸನ್​ನಲ್ಲಿ ಒಂದು ಬಾರಿ ಪರ್ಪಲ್​ ಕ್ಯಾಪ್​ ಟಚ್ ಮಾಡಿದ್ದಾರೆ.

ಭುಜದ ನೋವಿಗೆ ಒಳಗಾಗಿದ್ದ ಜೋಶ್ ಹ್ಯಾಜಲ್ವುಡ್​, ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ನಡೆದ ಪಂದ್ಯದಿಂದ ಹೊರಗುಳಿದಿದ್ದರು. ಸದ್ಯ ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ ಪೇಸರ್ ತಂಡಕ್ಕೆ ಹಿಂದಿರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇನ್ನು ಫಿಲ್ ಸಾಲ್ಟ್ ಕೂಡ ಹಿಂದಿರುಗುವ ಸಾಧ್ಯತೆ ಇದೆ ಎನ್ನಲಾಗಿದ್ದು ಆದರೆ ಈ ಬಗ್ಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment